ಜೋಯಿಡಾ -ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೇವಾಳಿ ಗ್ರಾಮದ ಶ್ರೀನಿವಾಸ ಭಟ್ಟ ಕೊಂಬಾ ಎಂಬುವವರ ತೋಟದಲ್ಲಿ ಭಾರಿ ಗಾತ್ರದ ಮರವೊಂದು ಮಳೆಗಾಳಿಯಿಂದಾಗಿ ಬಿದ್ದ ಪರಿಣಾಮ 30 ಕ್ಕೂ ಹೆಚ್ಚಿನ ಫಲ ಬರುವ ಅಡಿಕೆ ಮರಗಳು ಮುರಿದು ಹಾಳಾಗಿವೆ.

ತಾಲೂಕಿನಾಧ್ಯಂತ ಸತತವಾಗಿ ಗಾಳಿ ಮಳೆ ಆಗುತ್ತಿರುವ ಕಾರಣ ಮರಗಳು ಮುರಿದು ಬೀಳುತ್ತಿವೆ,ಗುಡ್ಡಗಳು ಕುಸಿಯುತ್ತಿವೆ. ಹೀಗಾಗಿ ಅಡಿಕೆ ,ಭತ್ತ ಬೆಳೆಯುವ ರೈತರು ಸಂಕಷ್ಟ ಎದುರಿಸುವಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀನಿವಾಸ ಭಟ್ಟ ಕೊಂಬಾ ಕಳೆದ 25 ವರ್ಷಗಳಿಂದ ಮಕ್ಕಳಂತೆ ಸಾಕಿ ಅಡಿಕೆಮರಗಳನ್ನು ಬೆಳೆಸಿದ್ದೆ ಪಕ್ಕದ ಅರಣ್ಯದಲ್ಲಿದ್ದ ಮರ ಬಿದ್ದು ಅಡಿಕೆ ಮರಗಳು ಮುರಿದು ಲಕ್ಷಾಂತರ ಹಾನಿ ಉಂಟಾಗಿದೆ.ಸರ್ಕಾರದವರು ನನಗೆ ಕೂಡಲೇ ಪರಿಹಾರ ನೀಡಬೇಕೆಂದು ಕೇಳಿಕೊಂಡಿದ್ದಾರೆ.
ಜೊಯಿಡಾ/ರಾಮನಗರದ ನ್ಯೂಸ್ updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…
https://chat.whatsapp.com/FwQPbtH4lkpE71sGaWxRXj
