ಜೋಯಿಡಾ – ಕಾಳಿ ಬ್ರೀಗೆಡ್ ಜೊಯಿಡಾದ 7ನೇ ವಾರ್ಷಿಕ ಸಾಮಾನ್ಯ ಸಭೆ ತಾಲೂಕಿನ ಸಂಜೀವಿನಿ ಸಭಾ ಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ರವಿ ರೇಡ್ಕರ ವಹಿಸಿದ್ದರು. ಮುಖ್ಯವಾಗಿ ಈ ಸಭೆಯಲ್ಲಿ ಸಾರ್ವಜನಿಕ ಆಸ್ಪತ್ರೆ ಮತ್ತು ತಹಸಿಲ್ದಾರ ಕಚೇರಿ ಅವ್ಯವಸ್ಥೆ ಬಗ್ಗೆ ಮುಂದಿನ ದಿನಗಳಲ್ಲಿ ಹೊರಾಟ ನಡೆಸುವುದು,ವನ್ಯ ಪ್ರಾಣಿಗಳಿಂದ ರೈತರಿಗೆ ಹಾನಿ ಬಗ್ಗೆ ಚರ್ಚೆ, ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಬಗ್ಗೆ ಚರ್ಚೆ ನಡೆಸಿ ಸಭೆಯ ನಂತರ ತಹಸಿಲ್ದಾರರಿಗೆ ನ್ಯಾಯಾಲಯ, ಬಸ್ ಡಿಪೊ, ತಾಲೂಕಾ ಸ್ಥಾನ ಮಾನ ಸರಕಾರಿ ನೌಕರರಿಗಾಗಿ ವಸತಿ ವ್ಯವಸ್ಥೆ ಈ ನಾಲ್ಕು ಅವಶ್ಯಕತೆ ಬಗ್ಗೆ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ಕಾಳಿ ಬ್ರೀಗೆಡ್ ಮುಖ್ಯ ಸಮಿತಿ ಅಧ್ಯಕ್ಷ ಸತೀಶ ನಾಯ್ಕ, ಕಾರ್ಯದರ್ಶಿ ಪ್ರಭಾಕರ ನಾಯ್ಕ, ಸದಸ್ಯರಾದ ಕಿರಣ ನಾಯ್ಕ, ಅಜೀತ ಟೆಂಗ್ಸೆ, ಉಮೇಶ ವೇಳಿಪ, ರತ್ನಾಕರ ಗಾವಡಾ, ಸಮೀರ ಮುಜಾವರ, ದಿಲೀಪ ಗಾಂವಕರ, ಸುನೀಲ್ ದೇಸಾಯಿ ಮುಂತಾದವರು ಉಪಸ್ಥಿತರಿದ್ದರು.
