ಗೋಕರ್ಣ : ಇಲ್ಲಿಯ ಮುಖ್ಯ ಕಡಲ ತೀರದ, ರಾಮತೀರ್ಥದ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿಕೊಂಡು ಅಮಲಿನಲ್ಲಿ ಇದ್ದ ವ್ಯಕ್ತಿಯೊರ್ವನನ್ನು ಪಿಎಸೈ ಸುಧಾ ಅಘನಾಶಿನಿ ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.
ಗೋಕರ್ಣದ ಬಿಜ್ಜೂರಿನ ಪ್ರೇಮಾನಂದ ಸೋಮಾ ಗೌಡ (೨೫) ಗಾಂಜಾ ಸೇವಿಸಿದ ಆರೋಪಕ್ಕೆ ಒಳಗಾಗಿದವನಾಗಿದ್ದಾನೆ.
ಪಿಎಸೈ ಸುಧಾ ಅಘನಾಶಿನಿ ಅವರಿಗೆ ವ್ಯಕ್ತಿಯೊರ್ವ ಮುಖ್ಯ ಕಡಲ ತೀರದ, ರಾಮತೀರ್ಥದ ಬಳಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಮಾಡಿ ಅಮಲಿನಲ್ಲಿ ಇದ್ದಾನೆ ಎಂಬ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ, ಕಾರ್ಯಪ್ರವೃತ್ತರಾದ ಪಿಎಸೈ ಸುಧಾ ಅಘನಾಶಿನಿ ಸ್ಥಳಕ್ಕೆ ದಾವಿಸಿದ್ದರು.
ಸ್ಥಳದಲ್ಲಿ ಅಮಲಿನಲ್ಲಿ ಇದ್ದ ಆರೋಪದ ಮೇಲೆ ಪ್ರೇಮಾನಂದ ಸೋಮಾ ಗೌಡ ಅವರನ್ನು ವಶಕ್ಕೆ ಪಡೆದು ಗಾಂಜಾ ಸೇವನೆಯ ಖಚಿತತೆಗೆ ಕಾರವಾರದ ವೈಧ್ಯಕೀಯ ಮಹಾವಿದ್ಯಾಲದಲ್ಲಿ ವೈಧ್ಯಕೀಯ ಪರೀಕ್ಷೆ ನಡೆಸಿದ್ದರು. ತಜ್ಞ ವೈದ್ಯರು ಆರೋಪಿ ಗಾಂಜಾ ಸೇವನೆ ಮಾಡಿದ್ದು ದೃಡಿಪಡಿಸಿ ವರದಿ ನೀಡಿದ ಹಿನ್ನಲೆಯಲ್ಲಿ, ಕಾರ್ಯಾಚರಣೆ ನಡೆಸಿದ್ದ ಅವರು ಮಾಧಕ ವಸ್ತು ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಸರಕಾರದ ಪರವಾಗಿ ಠಾಣೆಯಲ್ಲಿ ಪಿಎಸೈ ಸುಧಾ ಅಘನಾಶಿನಿ ದೂರು ನೀಡಿದ್ದರು. ಪಿಸೈ ರವೀಂದ್ರ ಬಿರಾದಾರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

