ದಿನಕರ ನಾಯ್ಕ. ಅಲಗೇರಿ.

ಅಂಕೋಲಾ : ಉಕ ಜಿಲ್ಲೆಯಲ್ಲಿ ಮಂಗಳಮುಖಿಯರ ವೇಷ ಹಾಕಿಕೊಂಡು, ನಾಗರಿಕರೊಂದಿಗೆ ಅಸಭ್ಯವಾಗಿ ವರ್ತಿಸಿ ಹಣವನ್ನು ಪಡೆಯುತ್ತಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ. ಇಂಥ ನಕಲಿ ಮಂಗಳಮುಖಿಯರನ್ನು ಕಂಡರೆ ತಕ್ಷಣ ಪೊಲೀಸರಿಗೆ ಗಮನಕ್ಕೆ ತರುವಂತಾಗಬೇಕು ಎಂದು ಅಂತರA ಸಂಘಟನೆಯ ಜಿಲ್ಲಾ ಉಪಾಧ್ಯಕ್ಷೆ ಆಯಿಷಾ ಒತ್ತಾಯಿಸಿದರು.

        ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ ನಿಜವಾದ ಯಾವ ಮಂಗಳಮುಖಿಯರು ಸಹ ನಾಗರಿಕರು ಹಣ ನೀಡದೆ ಇದ್ದಲ್ಲಿ, ಕೆಟ್ಟ ವರ್ತನೆ ತೋರುವದಿಲ್ಲ. ಮುಖಕ್ಕೆ ಮಾಸ್ಕ ಹಾಕಿಕೊಂಡು, ಇಲ್ಲವೆ ಅರೆಬರೆಯಾಗಿ ಮುಖ ಮುಚ್ಚಿಕೊಂಡು ಇಲ್ಲವೆ ಬಣ್ಣ ಹಂಚಿಕೊAಡು ಹಣವನ್ನು ಕೇಳುವದಿಲ್ಲ.

ನಾವು ಸಭ್ಯವಾಗಿ ಜನರೊಂದಿಗೆ ವರ್ತಿಸಿ ಹಣವನ್ನು ಕೇಳುತ್ತೇವೆ. ನಮ್ಮ ಸಂಘಟನೆಯವರು ನಾಗರಿಕರೊಂದಿಗೆ ಉತ್ತಮ ಸಂಬAದವನ್ನು ಇಟ್ಟುಕೊಂಡು ಸಮಾಜಮುಖಿಯಾಗಿ ಬದುಕುತ್ತಿದ್ದೇವೆ. ಆದರೆ ಉಕ ಕನ್ನಡ ಜಿಲ್ಲೆಯಲ್ಲಿ ಹೀಗೆ ಜನರೊಂದಿಗೆ ಅಸಭ್ಯವಾಗಿ ವರ್ತಿಸುವ ವೇಷಧಾರಿ, ನಕಲಿ ಮಂಗಳಮುಖಿಯರಿ0ದ ಸಮಾಜದ ಸ್ವಾರ್ಥ ಕೆಡುತ್ತಿರುವದು ದುರಷೃಷ್ಠಕರ ಸಂಗತಿಯಾಗಿದೆ ಎಂದರು.

ಸದಸ್ಯೆ ಸುಹಾನಾ ಮಾತನಾಡಿ ಸೋಮವಾರ ರಾತ್ರಿ ಅಂಕೋಲಾ ರೇಲ್ವೆ ನಿಲ್ದಾಣದಲ್ಲಿ ಮಂಗಳಮುಖಿ ವೇಷ ಹಾಕಿಕೊಂಡು ಪ್ರಯಾಣಿಕನನ್ನು ಚಲಿಸುತ್ತಿರುವ ರೇಲ್ವೆಯಿಂದ ಹೊರ ತಳಿದ್ದು ಅತ್ಯಂತ ಘೋರ ಘಟನೆಯಾಗಿದೆ. ಇತನನ್ನು ರೇಲ್ವೆ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ರೇಲ್ವೆ ಪೊಲೀಸರ ಮುಂದೆ ತಾನೊಬ್ಬ ಹುಚ್ಚನಂತೆ ವರ್ತಿಸಿ, ಪೊಲೀಸ್ ಪ್ರಕರಣದಿಂದ ಪಾರಾಗಿದ್ದಾನೆ. ಹಿಂದೆ ನಾವೆ ಅವನನ್ನು ಹಿಡಿದು ಒಮ್ಮೆ ಪೊಲೀಸರಿಗೆ ಒಪ್ಪಿಸಿದ್ದೇವು.

 ಈಗ ಮತ್ತೆ ಆತ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದಾನೆ. ಯುವಕನನ್ನು ತಳ್ಳಿದ್ದಾಗ ಆತ ಮೃತಪಟ್ಟರೆ ಅದಕ್ಕೆ ಯಾರು ಜವಬ್ದಾರು ಆಗುತ್ತಿದ್ದರು. ಈ ಹಿನ್ನಲೆಯಲ್ಲಿ ಆತನ ಮೆಲೆ ಕಠಿಣ ಕಾನುನು ಕ್ರಮ ತೆಗೆದುಕೊಳ್ಳುವಂತಾಗಬೆಕು ಎಂದು ಒತ್ತಾಯಿಸಿದರು.

ಖಜಾಂಚಿ ಪಾರ್ವತಿ ಮಾತನಾಡಿ ನಕಲಿ ಮಂಗಳಮುಖಿಯರ ಬಗ್ಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತಾಗಬೇಕು. ಹಾಗೆ ಸರಕಾರ ಮಂಗಳಮುಖಿರ ಶ್ರೇಯೋಭಿವೃದ್ಧಿಗೆ ವಿಶೇಷವಾಗಿ ಯೋಜನೆಯನ್ನು ಸಿದ್ಧಪಡಿಸಿ ನಮಗೂ ಕೂಡ ಸಮಾಜಮುಖಿಯಾಗಿ ಜೊತೆಗೆ ಸ್ವಾವಲಂಬಿಯಾಗಿ ಬದಕಲು ನೆರವು ನೀಡವಂತಾಗಬೇಕು ಎಂದು ಆಗ್ರಹಿಸಿದರು.