ಅಂಕೋಲೆಯ ಹೆಮ್ಮೆಯ ಡಾ.ಸಂಜೀವ.ಆರ್,ನಾಯಕ ಅವರಿಗೆ ಸಂದ ಮೂರು ರಾಷ್ಟ್ರೀಯ ಪ್ರಶಸ್ತಿಗಳು
ಅಂಕೋಲೆಯ ಹಿರಿಮೆಗೆ ಗರಿ ಮೂಡಿಸಿದ ಡಾ.ಸಂಜೀವ ನಾಯಕ
ಅಂಕೋಲಾ : ಸದಾ ಶೈಕ್ಷಣಿಕ ಮತ್ತು ಕ್ರಿಯಾಶೀಲ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಅಂಕೋಲಾ ಮೂಲದ, ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಸಹ ಪ್ರಾಧ್ಯಾಪಕ, ಡಾ.ಸಂಜೀವ.ಆರ್,ನಾಯಕ ಅವರಿಗೆ ಬೇಂದ್ರೆ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರೀಯ ಕನಕ ಪ್ರಶಸ್ತಿ, ಡಾ.ಎಸ್.ರಾಧಕೃಷ್ಠನ್ ರಾಷ್ಟ್ರಿಯ ಆದರ್ಶ ಶಿಕ್ಷಕ ಪ್ರಶಸ್ತಿಗಳು ಪ್ರಧಾನಗೊಂಡಿದೆ.

ಕನಕ ಅಧ್ಯಯನ ಪೀಠ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಮತ್ತು ಚೇತನ ಪೌಂಡೇಶನ್ ಕರ್ನಾಟಕದ ಸಹಕಾರದಿಂದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ವತಿಯಿಂದ ಕರ್ನಾಟಕದ ಸೂಕ್ತ ಸಾಧಕರನ್ನು ಗುರುತಿಸಿ ಆಯ್ಕೆ ಮಾಡಿ ಈ ಪ್ರಶಸ್ತಿ ನೀಡಲಾಗುತ್ತಿದೆ.
ಈ ವರ್ಷದ ಡಾ ಬೇಂದ್ರೆ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರೀಯ ಕನಕ ಪ್ರಶಸ್ತಿ, ಡಾ.ಎಸ್.ರಾಧಕೃಷ್ಠನ್ ರಾಷ್ಟ್ರೀಯ ಆದರ್ಶ ಶಿಕ್ಷಕ ಪ್ರಶಸ್ತಿಗಳನ್ನು ಉಕ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ವಂದಿಗೆ ಗ್ರಾವiದ ಡಾ.ಸಂಜೀವ.ಆರ್.ನಾಯಕ ಅವರ ಶಿಕ್ಷಣ, ಸಂಶೋಧನೆ, ಸಂಘಟನೆ ಮತ್ತು ಉತ್ತರ ಕರ್ನಾಟಕದ ಸಾಮಾಜಿಕ ಕ್ಷೇತ್ರದಲ್ಲಿ ನೀಡಿದ ಕೊಡುಗೆಯ ಗಮನಿಸಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಸೆ. 10 ರಂದು ನಡೆದ ಧಾರವಾಡದ ನುಡಿ ಸಡಗರ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ಇವರಿಗೆ ಪ್ರಧಾನ ಮಾಡಲಾಯಿತು.
ಡಾ.ಸಂಜೀವ.ಆರ್.ನಾಯಕ ಅವರು ಅಂತರ ರಾಷ್ಟ್ರೀಯ ಸಂಶೋಧನಾ ಮ್ಯಾಗಜಿನ್ ಪ್ರತಿಕೆಯ ನ್ಯೂಡೆಲ್ಲಿ ಅಕ್ಕಿನಿಕ್ಕಿ ಪಬ್ಲಿಕೇಷನ್ ಇದರ ಉಪಸಂಪದಾಕರಾಗಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ 15 ಕ್ಕೂ ಹೆಚ್ಚು ಅಂತರ್ ರಾಷ್ಟ್ರೀಯ ಪ್ರತಿಕೆಯಲ್ಲಿ ವಿವಿಧ ಸಾಮಾಜಿಕ ಮತ್ತು ಸಂಶೋಧನಾ ಸಂಬಂದಿತ ಲೇಖನಗಳು ಪ್ರಕಟವಾಗಿವೆ. ಹಾಗೇಯೆ 20 ಕ್ಕೂ ಹೆಚ್ಚು ಅಂತರ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಹಾಗೂ 300 ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪತ್ರಿಕೆ ಮಂಡನೆ ಮಾಡಿರುವ ಕಿರ್ತಿ ಇವರದ್ದಾಗಿದೆ.
ಹಲವಾರು ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ ಇವರು ಹಲವಾರು ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ವಿಚಾರ ಸಂಕಿರಣಗಳನ್ನು ಸಂಘಟಿಸಿದ್ದಾರೆ. ಎರಡು ವಿಶ್ವವಿದ್ಯಾಲಯಗಳ (ಬಿ.ಓ.ಎಸ್/ಬಿ.ಓ.ಇ) ಪಠ್ಯಪುಸ್ತಕ ಮಂಡಳಿಯ ಸದ್ಯಸರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಡಾ. ಸಂಜೀವ.ಆರ್. ನಾಯಕ ಅವರು ಈ ಹಿಂದೆ ಸುಮಾರು 25 ವರ್ಷಗಳ ಕಾಲ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಮತ್ತು ಕಾರವಾರ ಜಿಲ್ಲೆಯಲ್ಲಿ ಜ್ಞಾನ ವಿಕಾಶ ಕೇಂದ್ರ ಮತ್ತು ಜ್ಞಾನಜ್ಯೋತಿ ಮತ್ತು ಏಷಿಯನ್ ಕಂಪ್ಯೂಟರ ಸೆಂಟರ್ಗಳನ್ನು ಉತ್ತರ ಕನ್ನಡ ಜಿಲ್ಲಾ ಸಾಮಾಜಿಕ ಶೈಕ್ಷಣಿಕ ಉತ್ತೇಜನ ಸಮಿತಿಯಡಿ ಹಲವಾರು ಕಾರ್ಯಕ್ರಮಗಳನ್ನು ನೆಡಿಸಿ ಸಮಾಜ ತನ್ನದೆ ಆದ ವಿಶೇಷ ಕೊಡುಗೆ ನೀಡಿ ಆದರ್ಶಪ್ರಾಯರಾಗಿದ್ದಾರೆ.
ಮುಖ್ಯವಾಗಿ ಹಲವಾರು ಈ ಭಾಗದ ವಿದ್ಯಾರ್ಥಿಗಳು ಮೆಡಿಕಲ್ ಮತ್ತು ಇಂಜನಿಯಿರಿಂಗ್ ಮತ್ತು ಇನ್ನಿತರ ಕೋರ್ಸಗಳಿಗೆ ಆಯ್ಕೆಯಾಗಲು ಕಾರಣಿಭೂತರಾಗಿದ್ದಾರೆ. ಇವರ ನೇತ್ರತ್ವದ ಕೇಂದ್ರದಲ್ಲಿ ತರಭೇತಿ ಪಡೆದವರು ದೇಶ-ವಿದೇಶದಲ್ಲಿ ಉನ್ನತ ಸ್ಥಾನದಲ್ಲಿ ನೌಕರಿಯಲ್ಲಿದ್ದಾರೆ.
2005 ರ ನಂತರ ಯ.ಜಿ.ಸಿ ಯೋಜನೆಯಡಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್.ಡಿ ಮಾಡಿ ಖಾಯಂ ಪ್ರಾಧ್ಯಾಪಕರಾಗಿ ಪ್ರತಿಷ್ಠತ ಕೆ.ಎಲ್.ಇ ಸಂಸ್ಥೆಯಲ್ಲಿ ನೇಮಕಗೊಂಡರು. ಆ ನಂತರ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಯನ್ನು ಮಾಡುತ್ತಾ ಕರ್ನಾಟಕ ವಿಶ್ವವಿದ್ಯಾಲಯದ ಬಿ.ಎ./ಬಿಕಾಂ/ ಬಿಎಸ್ಸಿ ಎಲ್ಲಾ ತರಗತಿಗಳ ತರಗತಿಗಳ ಪದವಿ ಓದುತ್ತಿರುವ ವಿಧ್ಯಾರ್ಥಿಗಳ ಪಠ್ಯಪುಸ್ತಕ ರಚನೆಯ ಪ್ರಧಾನ ಸಂಪಾದಾಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಹಾಗೇಯ ಉತ್ತರ ಕರ್ನಾಟಕದಲ್ಲಿ ಹಲವು ಸಂಘ ಸಂಸ್ಥೆಯಲ್ಲಿ ಸಾಮಾಜಿಕ ಕಾರ್ಯದಲ್ಲಿ ನಿರಂತರವಾಗಿರುವದನ್ನು ಗಮನಿಸಿ ಇವರಿಗೆ ಶಿಕ್ಷಣ, ಸಾಹಿತ್ಯ, ಸಂಘಟನೆ ಸಂಶೋಧನೆ ಮತ್ತು ಉತ್ತರ ಕರ್ನಾಟಕದ ಸಾಮಾಜಿಕ ಕ್ಷೇತ್ರದಲ್ಲಿ ನೀಡಿದ ಕೊಡುಗೆಯನ್ನು ಗುರುತಿಸಿ ಡಾ ಬೇಂದ್ರೆ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿ, ರಾಷ್ಟ್ರೀಯ ಕನಕ ಪ್ರಶಸ್ತಿ, ಡಾ.ಎಸ್.ರಾಧಕೃಷ್ಠನ್ ರಾಷ್ಟ್ರೀಯ ಆದರ್ಶ ಶಿಕ್ಷಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಪ್ರಶಸ್ತಿ ಪ್ರಧಾನ ಸಮಾರಂದಲ್ಲಿ ಕಾರ್ಯಕ್ರಮದ ಉದ್ಘಾಟಕರಾಗಿ ಪಾಲ್ಗೊಂಡ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಕೆ.ಬಿ.ಗುಡಸಿ, ಅಧ್ಯಕ್ಷತೆವಹಿಸಿದ್ದ ನುಡಿ ಸಡಗರದ ಸಂಯೋಜಕ ಡಾ.ಚಂದ್ರಶೇಖರ ಮಾಡಲಗೇರಿ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕುಲಸಚಿವರು (ಮೌಲ್ಯಮಾಪನ) ಪ್ರೊ.ಸಿ.ಕೃಷ್ಠಮೂರ್ತಿ, ಗೌರವ ಉಪಸ್ಥಿತರಾಗಿದ್ದ ಡಾ.ಚಂದ್ರಮ್ಮ .ಎಂ ಕುಲಸಚಿವ (ಆಡಳಿತ ) ಸೇರಿದಂತೆ ಮೊದಲಾದ ಗೌರವಾನ್ವಿತ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ನಡೆಯಿತು.
ಅಂಕೋಲೆಯ ಹಿರಿಮೆಗೆ ಗರಿ ಮೂಡಿಸಿದ ಡಾ.ಸಂಜೀವ.ಆರ್,ನಾಯಕ ಅವರ ಅತ್ಯುನ್ನತ್ ಸಾಧನೆಗೆ ಜಿಲ್ಲೆಯಲ್ಲಿಯೆ ಹರ್ಷದ ವಾತಾವರಣ ಕಂಡು ಬಂದಿದೆ. ಪಾದರಸದ ವ್ಯಕ್ತಿತ್ವದ ಡಾ. ಸಂಜೀವ ನಾಯಕ ಅವರು ಇನ್ನು ಹೆಚ್ಚಿನ ಸಾಧನೆ ಪ್ರಕಟಿಸುವಂತಾಗಲಿ ಎಂದು ಅವರ ಹಿತೈಷಿಗಳು, ಅಭಿಮಾನಿಗಳು, ನಾಗರಿಕರು ತುಂಬು ಹೃದಯದಿಂದ ಹಾರೈಸಿದ್ದಾರೆ.