ಅ0ಕೋಲಾ : ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪನವರ ಜನ್ಮ ದಿನಾಚರಣೆಯನ್ನು ಅಂಕೋಲಾದ ಬಂಗಾರಪ್ಪ ಅಬಿಮಾನಿಗಳ ಬಳಗದ ವತಿಯಿಂದ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಆಚರಿಸಲಾಯಿತು.

ನಾಮಧಾರಿ ಆರ್ಯ ಈಡಿಗ ಅಭಿವೃದ್ಧಿ ಸಂಘದ ತಾಲೂಕಾಧ್ಯಕ್ಷ ನಾಗೇಶ ನಾಯ್ಕ ಆಚಾ ಮಾತನಾಡಿ, ಅನೇಕ ಜನಪರ ಯೋಜನೆಗಳನ್ನು ರಾಜ್ಯಕ್ಕೆ ತಂದ ಶ್ರೇಷ್ಠ ಮುತ್ಸದ್ದಿ ಬಂಗಾರಪ್ಪನವರು ರಾಜ್ಯ ಕಂಡ ವಿಶೇಷ ಮುಖ್ಯಮಂತ್ರಿಯಾಗಿದ್ದರು. ಅವರು ಮಾಡಿದ ಜನೋಪಯೋಗಿಯು ಕಾರ್ಯಗಳು ಇಂದಿಗೂ ರಾಜ್ಯದ ಜನತೆ ಸ್ಮರಿಸುವಂತೆ ಮಾಡಿದೆ. ಇತಂಹ ಧೀಮಂತ ವ್ಯಕ್ತಿಯನ್ನು ನಾವಿಂದೂ ಸ್ಮರಿಸುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ನಾಮಧಾರಿ ಮುಖಂಡ ರಾಜೇಂದ್ರ ನಾಯ್ಕ ಮಾತನಾಡಿ, ಕಳೆದ ಅನೇಕ ವರ್ಷಗಳಿಂದ ಅಂಕೋಲಾದ ಬಂಗಾರಪ್ಪ ಅಬಿಮಾನಿಗಳ ಬಳಗದ ಅಧ್ಯಕ್ಷ ಉದಯ ನಾಯ್ಕ ಅವರು ಬಂಗಾರಪ್ಪನವರ ಹುಟು ಹಬ್ಬವನ್ನು ವಿವಿಧ ವಿದಾಯಕ ಕಾರ್ಯಕ್ರಮಗಳ ಮೂಲಕ ಆಚರಿಸುತ್ತ ಬಂದಿರುವದು ಮಾದರಿ ಸಂಗತಿಯಾಗಿದೆ ಎಂದರು.

ನಾಮಧಾರಿ ಕಟ್ಟಡ ಸಮಿತಿಯ ಅಧ್ಯಕ್ಷ ಎಮ್.ಪಿ. ನಾಯ್ಕ, ರಾಷ್ಟಿçà ಈಡಿಗ ಮಹಾಮಂಡಳಿಯ ತಾಲೂಕಾಧ್ಯಕ್ಷ ಡಿ.ಜಿ.ನಾಯ್ಕ, ಮೀನುಗಾರರ ಸಮಾಜದ ಪ್ರಮುಖ ರಾಜು ಹರಿಕಂತ್ರ, ಮುಸ್ಲಿಂ ಸಮಾಜದ ಪ್ರಮುಖ ನವಾಜ್ ಶೇಖ, ಗೌಡ ಸಮಾಜದ ಪ್ರಮುಖ ಪಾಂಡುರA ಗೌಡ, ನಾಮಧಾರಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶಿವಾನಂದ ನಾಯ್ಕ, ಸಮಾಜದ ಪ್ರಮುಖ ವೆಂಕಪ್ಪ ನಾಯ್ಕ, ಕಾರ್ಯಕ್ರಮದ ಸಂಘಟಕ ಬಂಗಾರಪ್ಪ ಅಬಿಮಾನಿಗಳ ಬಳಗದ ಅಧ್ಯಕ್ಷ ಉದಯ ನಾಯ್ಕ. ಹೊನ್ನೆಕೇರಿ, ನಿವೃತ್ತ ಶಿಕ್ಷಕ ಗೋಪಾಲ ಆಗೇರ, ನ್ಯಾಯವಾದಿ ಉಮೇಶ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.

ನಾಮಧಾರಿ ಸಮಾಜದ ಮುಖಂಡ ರಾಜೇಶ ಮಿತ್ರಾನಾಯ್ಕ ಸ್ವಾಗತಿಸಿ, ನಿರೂಪಿಸಿದರು.

ನ್ಯಾಯವಾದಿ ಗಜಾನನ ನಾಯ್ಕ, ಪುರಸಭೆಯ ಮಾಜಿ ಸದಸ್ಯ ವಿಶ್ವನಾಥ ಟಿ. ನಾಯ್ಕ, ವಿನಾಯಕ ನಾಯ್ಕ, ಗಣೇಶ ನಾಯ್ಕ, ವಿಠ್ಠಲ ನಾಯ್ಕ ನಾಮಧಾರಿ ಸಮಾಜದ ಪ್ರಮುಖರಾದ ಮುಕುಂಡಿ ನಾಯ್ಕ, ಉಪೇಂದ್ರ ನಾಯ್ಕ. ಹನುಮಟ್ಟಾ, ಸಂಜಯ ನಾಯ್ಕ.ಕಾಕರಮಠ, ಗಣಪತಿ ನಾಯ್ಕ. ಹನುಮಟ್ಟಾ, ರಮೇಶ ನಾಯ್ಕ, ಏಕನಾಥ ನಾಯ್ಕ, ಮಂಜುನಾಥ ನಾಯ್ಕ. ಬೇಳಾ, ಉಮೇಶ ನಾಯ್ಕ, ಜಯಪ್ರಕಾಶ ನಾಯ್ಕ ಕಲಭಾಗ, ಸತೀಶ ನಾಯ್ಕ, ಬಿ.ಡಿ. ನಾಯ್ಕ, ಸುರೇಶ ನಾಯ್ಕ, ಗೋವಿಂದರಾಯ ನಾಯ್ಕ, ಮೋಹನ ನಾಯ್ಕ, ಶ್ರೀಧರ ನಾಯ್ಕ, ಎನ್.ಪಿ. ನಾಯ್ಕ, ಶ್ರೀಕಾಂತ ನಾಯ್ಕ ಬೊಬ್ರವಾಡ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.