ಅಂಕೋಲಾ : ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವಂತಹ ಶಿಕ್ಷಣ ನೀಡಿ ಆದರ್ಶ ವ್ಯಕ್ತಿತ್ವ ರೂಪಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ. ಅದೇ ಪ್ರಕಾರ ಶಿಕ್ಷಕ ಸಹ ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಆದರ್ಶನಾಗಿರಬೇಕು ಎಂದು ಕುಮಟಾದ ಕಮಲ ಬಾಳಿಗ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಪ್ರೀತಿ ಬಂಡಾರ್ಕರ್ ಹೇಳಿದರು.

ಅವರು ಕೆಎಲ್‌ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದ 19 ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಪ್ರೇಮಗಿರಿ ಹಸ್ತಪತ್ರಿಕೆ ಹಾಗೂ ವಿವಿಧ ಸಂಘಗಳ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕೆ.ಎಲ್.ಇ. ಸಮೂಹ ಸಂಸ್ಥೆಗಳ ಸದಸ್ಯ ಡಾ. ಮಿನಲ ನಾರ್ವೇಕರ್ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಎಲ್ಲಾ ವಿದ್ಯಾರ್ಥಿಗಳನ್ನು ಸಮಾನವಾಗಿ ಕಂಡು ಪ್ರತಿಯೊಬ್ಬರಿಗೂ ಗೌರವ ನೀಡಬೇಕು ಎಂದರು.

ಉನ್ನತಿ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ವಿನಾಯಕ ಜಿ.ಹೆಗಡೆ ಸ್ವಾಗತಿಸಿದರು ಉಪನ್ಯಾಸಕಿ ಡಾ. ಪುಷ್ಪ ನಾಯ್ಕ್ ಪರಿಚಯಿಸಿದರು. ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಪ್ರವೀಣ ನಾಯಕ್ ವರದಿ ವಾಚಿಸಿದರು. ಸಾಂಸ್ಕೃತಿಕ ವಿಭಾಗದ ಬಹುಮಾನ ವಿಜೇತರ ಯಾದಿಯನ್ನು ಉಪನ್ಯಾಸಕಿ ಅಮ್ರಿನಾಝ್ ಶೇಕ್, ಕ್ರೀಡಾ ಬಹುಮಾನದ ಯಾದಿಯನ್ನು ಉಪನ್ಯಾಸಕ ಮಂಜುನಾಥ ಇಟಗಿ ವಾಚಿಸಿದರು. ವರ್ಷ ಆಚಾರಿ ಮತ್ತು ಮಾನಸ ನಾಯ್ಕ್ ನಿರೂಪಿಸಿದರು. ಪ್ರ ಕಾರ್ಯದರ್ಶಿ ಮನೋಜ್ ಗೌಡ ಎಂ. ವಂದಿಸಿದರು.