ಸರಕಾರದ ವಿಶೇಷ ಅಭಿಯೋಜಕರಾದ ಶಿವಪ್ರಸಾದ ಆಳ್ವ ಕೆ. ಅವರು ಸಮರ್ಥವಾಗಿ ವಾದ ಮಂಡಿಸಿ, ನ್ಯಾಯಾಲಯಕ್ಕೆ ಈ ನಾಲ್ಪರು ಆರೋಪಿಗಳು ಕೃತ್ಯದಲ್ಲಿ ಪಾಲ್ಗೊಂಡಿರುವದನ್ನು ಸಾಬಿತು ಪಡಿಸಿದ್ದಾರೆ. ಶಿವಪ್ರಸಾದ ಆಳ್ವ ಅವರು ಕನ್ನಡ ಅನುವಾದದ 452 ಪುಟಗಳ ಲಿಖಿತ ವರದಿ ಮಂಡಿಸಿದ್ದರು. ನ್ಯಾಯಾಲಯಕ್ಕೆ ಈ ಅವಳಿ ಕೊಲೆ ಘಟನೆಯ ಸಂಬಂದಿಸಿದಂತೆ ಹಾಗೂ ಅಪರೋಕ್ಷ ಘಟನೆಗಳು, ಸಂದರ್ಭಗಳು ಹಾಗೂ ತಾಂತ್ರಿಕ ಸಾಕ್ಷಿಗಳನ್ನು ತೆರೆದಿಟ್ಟು ಒಟ್ಟು 52 ಸಾಕ್ಷಿಗಳು ಹಾಜರಾಗಿ ತಮ್ಮ ಸಾಕ್ಷವನ್ನು ನುಡಿದಿದ್ದರು.