TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಪೊಲೀಸರ ಮಹತ್ತರ ಸೇವೆಯ ಹಿಂದೆ ಪೊಲೀಸ ಕುಟುಂಬದ ತ್ಯಾಗವು ಮಹತ್ವದಾಗಿದೆ : ಸಂತೋಷ ಶೆಟ್ಟಿ.

Jan 2, 2024 | Uncategorized |

ಪೊಲೀಸರ ಮಹತ್ತರ ಸೇವೆಯ ಹಿಂದೆ ಪೊಲೀಸ ಕುಟುಂಬದ ತ್ಯಾಗವು ಮಹತ್ವದಾಗಿದೆ : ಸಂತೋಷ ಶೆಟ್ಟಿ.

ಅಂಕೋಲÁ : ಪೊಲೀಸರು ಒತ್ತಡ ಮಧ್ಯೆ ಕಾರ್ಯ ನಿರ್ವಹಿಸಿ ಈ ಸಮಾಜಕ್ಕೆ ಕೊಡುಗೆ ನೀಡುತ್ತಾರೆ. ಈ ಸೇವೆಯ ಹಿಂದೆ ಪೊಲೀಸರ ಕುಟುಂಬದ ತ್ಯಾಗವು ಮಹತ್ವದಾಗಿದೆ ಎಂದು ಅಂಕೋಲಾ ಠಾಣೆಯ ಸಿಪಿಐ ಸಂತೋಷ ಶೆಟ್ಟಿ ಹೇಳಿದರು.

ಅವರು ಪಟ್ಟಣದ ಪೊಲೀಸ್ ವಸತಿಗೃಹದ ರಾಮ ಮಂದಿರದ ಸಭಾಭವನದಲ್ಲಿ ಹಮ್ಮಿಕೊಂಡ “ ಪೊಲೀಸ್ ಸಾಂಸ್ಕೃತಿಕ ಕೂಟ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಂಕೋಲಾ ಪೊಲೀಸ್ ಠಾಣೆಯ ಸಿಬ್ಬಂದಿಗಳ ಪರಿಶ್ರಮದದ ಫಲವಾಗಿ ನಾವು ಅನೇಕ ಕ್ಲೀಷ್ಠಕರ ಪ್ರಕರಣಗಳನ್ನು ಭೇಧಿಸಿ ನಾಗರಿಕರ ನೆಮ್ಮದಿಗೆ ಕಾರಣರಾಗಿದ್ದೇವೆ ಎಂಬ ಆತ್ಮ ತೃಪ್ತಿ ಇದೆ. ತಮ್ಮ ಬದುಕನ್ನು ಒತ್ತಡದಲ್ಲಿ ಹಾಕಿಕೊಂಡು ಪೊಲೀಸ್ ಇಲಾಖೆಗೆ ಸೇವೆ ನೀಡುತ್ತಿರುವ ನಮ್ಮ ಸಿಬ್ಬಂದಿಗಳ ಕಾರ್ಯ ವೈಖರಿ ಮಾದರಿಯಾಗಿದೆ ಎಂದರು.

ಪಿಎಸೈ ಉದ್ದಪ್ಪ ಧರೆಪ್ಪನವರ ಮಾತನಾಡಿ ದಿನದ ೨೪ ಘಂಟೆಯೂ ಸಮಾಜದ ರಕ್ಷಣೆಗೆ ಕಣ್ಣಾಗಿ ದುಡಿಯುವ ಪೋಲಿಸರಿಗೆ ಅನ್ಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಹೊಸ ವರ್ಷದ ಸಂಭ್ರಮದಂದು ಸಾಂಸ್ಕೃತಿಕ ಕೂಟವನ್ನು ಹಮ್ಮಿಕೊಂಡು ಹೊಸ ಚೈತನ್ಯ ತುಂಬುವನ್ನು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಮಾತನಾಡಿ, ಪೊಲೀಸರು ತಮ್ಮ ವಿಶ್ರಾಂತ ರಹಿತ ಕರ್ತವ್ಯದಿಂದಾಗಿ ತಮ್ಮ ಖಾಸಗಿ ಬದುಕನ್ನ ಕಳೆದುಕೊಳ್ಳುತ್ತಿರವದು ಆತಂಕದ ಸಂಗತಿಯಾಗಿದೆ ಎಂದರು.

ಪಿಎಸೈ ಸುನೀಲ ಹುಲ್ಲೋಳ್ಳಿ, ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಪತ್ರಕರರ್ತರಾದ ಸುಭಾಷ ಕಾರೇಬೈಲ, ನಾಗರಾಜ್ ಜಾಂಬಳೇಕರ, ಅಕ್ಷಯ ನಾಯ್ಕ, ದಿನಕರ ನಾಯ್ಕ. ಅಲಗೇರಿ, ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ವ್ಹಾಯ್ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.

ಹವಾಲ್ದಾರ ಚಂದ್ರಕಾಂತ ಗೌಡ ನಿರೂಸಿದರು. ಹವಾಲ್ದಾರ ಸತೀಶ ಅಂಬಿಗ ಸ್ವಾಗತಿಸಿದರು. ಆರಕ್ಷಕ ಸಿಬ್ಬಂದಿ ಪರಮೇಶ ಕಂಟೆಪ್ಪನವರ ವಂದಿಸಿದರು, ಪೊಲೀಸ್ ಸಿಬ್ಬಂದಿಗಳು, ಕುಟುಂಬದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ಆರಕ್ಷಕರ ಕುಟುಂಬದ ಸಾಂಸ್ಕ್ರತಿಕ ಮನರಂಜನೆ ಕಾರ್ಯಕ್ರಮ ನಡೆಯಿತು.

Share:

Rate:

Previousಹೆಲ್ಮಟ್ ಧರಿಸದ ಬೈಕ್ ಸವಾರರಿಗೆ ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಿದ ಅಂಕೋಲಾ ಪೊಲೀಸರು
Nextವೃದ್ದ ದಂಪತಿಗಳ ಭೀಕರ ಕೊಲೆಗೈದ ಸುಖೇಶ ನಾಯಕ ಗ್ಯಾಂಗ್‌ಗೆ ಗಲ್ಲೋ..? ಅಥವಾ ಜೀವಾವಧಿಯೋ..? ಜನವರಿ 9 ರಂದು ತಿರ್ಪು

Related Posts

32 ವರ್ಷದ ನಂತರ ವಿಚ್ಛೇಧನ ಕೇಳಲು ಮುಂದಾದ ಪತ್ನಿ

32 ವರ್ಷದ ನಂತರ ವಿಚ್ಛೇಧನ ಕೇಳಲು ಮುಂದಾದ ಪತ್ನಿ

December 11, 2024

ಪತ್ನಿ – ಮಗು ನಾಪತ್ತೆ – ಹುಡುಕಿ ಕೊಡುವಂತೆ ಪೊಲೀಸರ ಮೊರೆ ಹೋದ ಪತಿ

ಪತ್ನಿ – ಮಗು ನಾಪತ್ತೆ – ಹುಡುಕಿ ಕೊಡುವಂತೆ ಪೊಲೀಸರ ಮೊರೆ ಹೋದ ಪತಿ

November 27, 2023

ಕಾರವಾರದ ಲಾಡ್ಜಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 6 ಎಲೆ ಮಾನವರ ಬಂಧನ

ಕಾರವಾರದ ಲಾಡ್ಜಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 6 ಎಲೆ ಮಾನವರ ಬಂಧನ

September 7, 2023

ಗೋಕರ್ಣದ ಹೊಸ್ಕಟ್ಟಾದಲ್ಲಿ ಮಾನಭಂಗಕ್ಕೆ ಪ್ರಯತ್ನ

ಗೋಕರ್ಣದ ಹೊಸ್ಕಟ್ಟಾದಲ್ಲಿ ಮಾನಭಂಗಕ್ಕೆ ಪ್ರಯತ್ನ

June 30, 2022

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಕ್ಯಾಷಿಯರ್  ಮೇಲೆ  ಅತ್ಯಾಚಾರಕ್ಕೆ ಯತ್ನ ;
    ಕ್ಯಾಷಿಯರ್ ಮೇಲೆ  ಅತ್ಯಾಚಾರಕ್ಕೆ ಯತ್ನ ;
  • ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
    ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
  • ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
    ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
  • ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
    ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
  • ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ
    ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy