TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಎಸೈ ಮನೆಯಲ್ಲಿ ಚಿನ್ನ ಕದ್ದ ಇಬ್ಬರು ಚಾಲಾಕಿ ಯುವತಿಯರು ಪೊಲೀಸ್ ವಶಕ್ಕೆ

Jan 11, 2024 | ಅಪರಾಧ |

ಎಸೈ ಮನೆಯಲ್ಲಿ ಚಿನ್ನ ಕದ್ದ ಇಬ್ಬರು ಚಾಲಾಕಿ ಯುವತಿಯರು ಪೊಲೀಸ್ ವಶಕ್ಕೆ

ಅಂಕೋಲಾ : ಇಲ್ಲಿನ ಪೊಲೀಸ್ ಠಾಣೆಯ ಎಸೈ ಒಬ್ಬರ ಮನೆಯಲ್ಲಿ ಚಾಲಾಕಿತನದಿಂದ ಚಿನ್ನ ಕದ್ದ ಇಬ್ಬರು ಯುವತಿಯರನ್ನ ಅಂಕೋಲಾ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಗುರುವಾರ ನಡೆದಿದೆ.

ಕೋಟೆವಾಡಾದ ರೋಮಾನಾ ಮೌಲಾಲಿ ತಂದೆ ಹುಸೇನಸಾಬ ಹಾಗೂ ಅಮದಳ್ಳಿಯ ಸುಮೇಧಾ ದಿಗಂಬರ ಮಹಾಲೆ ಬಂಧಿತ ಆರೋಪಿಗಳು.

ಈ ಚಾಲಾಕಿ ಯುವತಿಯು ಒಬ್ಬಳು ಕೋಟೆವಾಡಾದವಳಾಗಿದ್ದು, ಇನ್ನೊಬ್ಬಳು ಅಮದಳ್ಳಿಯವಳಾಗಿದ್ದಾಳೆ. ಈ ಯುವತಿಯರಿಂದ ಕದ್ದ ಚಿನ್ನವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ.

ಘಟನೆ ಏನಾಗಿತ್ತು..?

ಪಟ್ಟಣದ ಕೋಟೆವಾಡಾದ ರಸ್ತೆಯಲ್ಲಿರುವ ಮನೆಯಲ್ಲಿ ಎಸೈ ಅವರ ಪತ್ನಿ ಟೇಲರಿಂಗ್ ಕೆಲಸ ಮಾಡುತ್ತಾರೆ. ಈ ಇಬ್ಬರು ಯುವತಿಯರು ಬಟ್ಟೆ ಹೊಲೆಯಲು ನೀಡಲು ಆಗಾಗ ಬಂದು ಪರಿಚಿತರಾಗಿದ್ದರು. ಕೆಲವು ದಿನಗಳ ಹಿಂದೆ  ಎಸೈ ಅವರ ಪತ್ನಿ ೩೪ ಗ್ರಾಂ ತೂಕದ ಬಳೆ ಹಾಗೂ ೩ ಗ್ರಾಂ ತೂಕ ಉಂಗುರವನ್ನು ಟೇಬಲ ಮೇಲೆ ಇಟ್ಟಿದ್ದರು. ಈ ವೇಳೆ ಈ ಬಂಗಾರದ ಆಭರಣ ಕಳ್ಳತನವಾಗಿತ್ತು. ಈ ಬಗ್ಗೆ ಅಂಕೋಲಾ ಪೊಲೀಸ್ ಠಾನೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿತ್ತು.

ಚಿನ್ನವನ್ನು ಚಾಲಾಕಿತನದಿಂದ ಕಳವು ಮಾಡಿಕೊಂಡು ಈ ಯುವತಿಯರು ತೆಗೆದುಕೊಂಡು ಹೋಗಿ ಕಣ್ಣಕಣೇಶ್ವರ ದೇವಸ್ಥಾನದ ಸಮೀಪ ಇರುವ ಮುತೂಡ್ ಪೈನಾನ್ಸ್ನಲ್ಲಿ ಅಡವಿಗೆ ಇಟ್ಟು ಹಣ ಪಡೆದುಕೊಂಡಿದ್ದರು. ಪೊಲೀಸರು ಈ ಯುವತಿಯರನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡ ವೇಳೆ ಕಳವು ಮಾಡಿದ್ದು ಒಪ್ಪಿಕೊಂಡಿರುವದಾಗಿ ತಿಳಿದುಬಂದಿದೆ. ಪೊಲೀಸರಿಂದ ಇನ್ನಷ್ಟು ಮಾಹಿತಿ ಹೊರಬರಬೇಕಾಗಿದ್ದು, ಪೊಲೀಸ್ ಪ್ರಕಟಣೆಯು ಮಾದ್ಯಮಕ್ಕೆ ತಲುಪಿಸಿದ ನಂತರವೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

Share:

Rate:

Previousಮೆರಥಾನ್ ಓಟದಲ್ಲಿ ಪದಕ ಪಡೆದ ಅವರ್ಸಾ ದ ಆರ್ಮಿ ಕೋಚಿಂಗ್ ವಿದ್ಯಾರ್ಥಿಗಳು
Nextಪ್ರದೀಪ ಮಾಣೇಶ್ವರ ನಾಯಕರದು ಯಾವುದೇ ತಪ್ಪಿಲ್ಲ : ದೇವಸ್ಥಾನದ ಅಧ್ಯಕ್ಷ ಪ್ರವೀಣ ನಾಯಕ ಸ್ಪಷ್ಠನೆ

Related Posts

ಗೃಹ ಸಚಿವ ಡಾ. ಜಿ. ಪರಮೇಶ್ವರ ವಿರುದ್ದ ಅವಹೇಳನಕಾರಿ ಪೋಸ್ಟ್ ಮಾಡಿದ ರಾಘು ಮೇಸ್ತಾ ಅವರ ಮೇಲೆ ಪ್ರಕರಣ ದಾಖಲು

ಗೃಹ ಸಚಿವ ಡಾ. ಜಿ. ಪರಮೇಶ್ವರ ವಿರುದ್ದ ಅವಹೇಳನಕಾರಿ ಪೋಸ್ಟ್ ಮಾಡಿದ ರಾಘು ಮೇಸ್ತಾ ಅವರ ಮೇಲೆ ಪ್ರಕರಣ ದಾಖಲು

September 10, 2023

ಜಾಗದ ಒತ್ತುವರಿ ವಿಚಾರವಾಗಿ ಹಳೆಯ ದ್ವೇಷದಿಂದ ಹಲ್ಲೆ ನಡೆಸಿ ಜೀವ ಬೆದರಿಕೆ

ಜಾಗದ ಒತ್ತುವರಿ ವಿಚಾರವಾಗಿ ಹಳೆಯ ದ್ವೇಷದಿಂದ ಹಲ್ಲೆ ನಡೆಸಿ ಜೀವ ಬೆದರಿಕೆ

October 18, 2023

21 ವರ್ಷದ ಹಿಂದೆ ಕಳ್ಳತನ ಎಸಗಿ ನಾಪತ್ತೆಯಾಗಿದ್ದ ಆರೋಪಿಯ ಬಂಧನ

21 ವರ್ಷದ ಹಿಂದೆ ಕಳ್ಳತನ ಎಸಗಿ ನಾಪತ್ತೆಯಾಗಿದ್ದ ಆರೋಪಿಯ ಬಂಧನ

September 17, 2022

ಲಫಂಗ್ ಜ್ಯೋತಿಷಿಗಳ ಮಾತಿನ ಮೋಡಿಗೆ ಮರುಳಾಗುವ ಲವ್ ಬಡ್ಸ್೯ಗಳು.!

ಲಫಂಗ್ ಜ್ಯೋತಿಷಿಗಳ ಮಾತಿನ ಮೋಡಿಗೆ ಮರುಳಾಗುವ ಲವ್ ಬಡ್ಸ್೯ಗಳು.!

November 30, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ  ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
    ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
  • ಕೊಡ್ಲಗದ್ದೆಯಲ್ಲಿ ಹೆಚ್ಚಿದ ಚಿರತೆ ಹಾವಳಿ: ಗ್ರಾಮಸ್ಥರಲ್ಲಿ ಭೀತಿ
    ಕೊಡ್ಲಗದ್ದೆಯಲ್ಲಿ ಹೆಚ್ಚಿದ ಚಿರತೆ ಹಾವಳಿ: ಗ್ರಾಮಸ್ಥರಲ್ಲಿ ಭೀತಿ
  • ಮಹಿಳೆ ಸ್ನಾನ ಮಾಡುವವದನ್ನು ಇಣಕಿ ನೋಡಲು ಹೋಗಿ ಸಿಕ್ಕಿಬಿದ್ದ ಮಾಜಿ ಮಟ್ಕಾ ಬುಕ್ಕಿ
    ಮಹಿಳೆ ಸ್ನಾನ ಮಾಡುವವದನ್ನು ಇಣಕಿ ನೋಡಲು ಹೋಗಿ ಸಿಕ್ಕಿಬಿದ್ದ ಮಾಜಿ ಮಟ್ಕಾ ಬುಕ್ಕಿ
  • ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
    ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
  • ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
    ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy