TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಸಾವಿನಲ್ಲೂ ಒಂದಾದ ತಾಯಿ – ಮಗ

Feb 19, 2024 | ವಿಶೇಷ |

ಸಾವಿನಲ್ಲೂ ಒಂದಾದ ತಾಯಿ – ಮಗ

ಅಂಕೋಲಾ : ತಾಯಿ– ಮಗ ಇಬ್ಬರೂ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ತಾಲೂಕಿನ ಅವರ್ಸಾದಲ್ಲಿ ಸೋಮವಾರ ಸಂಜೆ ನಡೆದಿದೆ.

        ಫೆಬ್ರವರಿ 17 ರ ರಾತ್ರಿ ತಾಯಿ ಗೀರಿಜಾ ಗಿರಿಯಪ್ಪ ಮೇತ್ರಿ ಅನಾರೋಗ್ಯದಿಂದ ನಿಧನರಾಗಿದ್ದರು. ತಾಯಿಯ ಅಗಲುವಿಕೆಯ ನೋವಿನಲ್ಲಿದ್ದ ಮಗ ನಾಗೇಶ ಗಿರಿಯಪ್ಪ ಮೇತ್ರಿ ಫೆ. 19 ಸಂಜೆ 7-13 ಘಂಟೆಯ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

        ಕೋಮಾರಪಂಥ ಸಮಾಜದ ಗುರುಮನೆಯರಾದ ಇವರು ಆದರ್ಶ ಕುಟುಂಬದವರಾಗಿ, ಎಲ್ಲರ ಪ್ರೀತಿಗೆ ಪಾತ್ರರಾಗಿ ಆತ್ಮೀಯತೆಗೆ ಕಾರಣರಾಗಿದ್ದರು. ಗಿರಿಯಪ್ಪಾ ಮೇತ್ರಿ ಅವರ ಮೂರನೇ ಮಗನಾದ ನಾಗೇಶ ಮೇತ್ರಿ ಅವರು ಸದಾ ಕ್ರೀಯಾಶೀಲನಾಗಿ, ಸಮಾಜದ ಎಲ್ಲಾ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ತೊಡಗಿಸಿಕೊಂಡು, ಸರ್ವರ ಮೆಚ್ಚುಗೆಗೆ ಪಾತ್ರರಾಗಿದ್ದರು.

        ಸದಾ ಹಸನ್ಮುಖಿಯಾಗಿ, ಸ್ನೇಹಿತರ ಜೊತೆ ತಮಾಷೆ ಮಾಡುತ್ತ ಕಾಲ ಕಳೆಯುತ್ತಿದ್ದ ವಿಶೇಷ ವ್ಯಕ್ತಿತ್ವದ ನಾಗೇಶ ಮೇತ್ರಿ ಅವರ ಅಕಾಲಿಕ ನಿಧನ ವಾರ್ತೆಯಿಂದಾಗಿ ಆಪ್ತ ಹಾಗೂ ಕುಟುಂಬದ ವಲಯದಲ್ಲಿ ಶೋಕ ಮಡುಗಟ್ಟಿದಂತಾಗಿದೆ.

        ನಾಗೇಶ ಅವರ ಅಂತ್ಯಕ್ರಿಯೆಯನ್ನು ಫೆ. 20 ರ ಮಂಗಳವಾರ ಬೆಳಿಗ್ಗೆ9 ಗಂಟೆಗೆ ನೆರವೇರಿಸಲಾಗುವದು ಎಂದು ಸಹೋದರ ಗುರುಮನೆಯ ಶ್ರೀಧರ ಮೇತ್ರಿ ತಿಳಿಸಿದ್ದಾರೆ.

ಮೃತ ನಾಗೇಶ ಅವರು ಪತ್ನಿ ವಿದ್ಯಾ, ಮಕ್ಕಳಾದ ಮಂಜುನಾಥ, ಸಂದೇಶ, ನಂದನ ಸೇರಿದಂತೆ ನಾಲ್ವರು ಸಹೋದರರು, ಇಬ್ಬರು ಸಹೋದರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.

ರಾಘು ಕಾಕರಮಠ.

Share:

Rate:

Previousಸಾಹಿತಿ ವಿಷ್ಣು ನಾಯ್ಕ ಇನ್ನಿಲ್ಲ : ಬಾರದ ಲೋಕಕ್ಕೆ ಪಯಣ ಬೆಳೆಸಿದ ಸಾಹಿತ್ಯದ ಕೃಷಿಕಾರ.
Nextಅವರ್ಸಾ ದಂಡೇಭಾಗ ಶಾಲೆಗೆ ಕಿಡಿಗೇಡಿಗಳ ಕಾಟ

Related Posts

ಗೋಕರ್ಣದ ರಾಮತೀರ್ಥದ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ

ಗೋಕರ್ಣದ ರಾಮತೀರ್ಥದ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ

July 19, 2023

ಕೃಷಿ ಜಾಗೃತಿಯ ಆಂದೋಲನಕ್ಕೆ ಅಭಿಯಾನ ರೂಪಿಸಿದ ಬೆಳೆಗಾರರ ಸಮಿತಿ

ಕೃಷಿ ಜಾಗೃತಿಯ ಆಂದೋಲನಕ್ಕೆ ಅಭಿಯಾನ ರೂಪಿಸಿದ ಬೆಳೆಗಾರರ ಸಮಿತಿ

July 28, 2023

ಮನೆಯ ಹಸು ಸತ್ತ ನಂತರ ಕಾಲು ಕಟ್ಟಿ ಸ್ಮಶಾನದಲ್ಲಿ ಎಸೆದು ಹೋದ ನಿರ್ದಯಿ ಜನ

ಮನೆಯ ಹಸು ಸತ್ತ ನಂತರ ಕಾಲು ಕಟ್ಟಿ ಸ್ಮಶಾನದಲ್ಲಿ ಎಸೆದು ಹೋದ ನಿರ್ದಯಿ ಜನ

August 10, 2023

ಗಾಂಧೀಜಿಯ ಆದರ್ಶ ತತ್ವ ಮೇರು ಪರ್ವತ : ಗಂಗಾಧರ ಹಿರೇಗುತ್ತಿ

ಗಾಂಧೀಜಿಯ ಆದರ್ಶ ತತ್ವ ಮೇರು ಪರ್ವತ : ಗಂಗಾಧರ ಹಿರೇಗುತ್ತಿ

October 2, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
    ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
  • ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
    ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
  • ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
    ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
  • ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
    ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
  • ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.
    ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy