TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಹೆಗ್ಗಾರದಲ್ಲಿ ಮುಕ್ತವಾಗಿ ತೆರೆದುಕೊಂಡ ಅಕ್ರಮವಾಗಿ ಡಿಸೈಲ ಹಾಗೂ ಪೆಟ್ರೋಲ ಇಳಿಸುವ ದಂಧೆ..?

Feb 24, 2024 | ಅಪರಾಧ, ವಿಶೇಷ |

ಹೆಗ್ಗಾರದಲ್ಲಿ  ಮುಕ್ತವಾಗಿ ತೆರೆದುಕೊಂಡ ಅಕ್ರಮವಾಗಿ ಡಿಸೈಲ ಹಾಗೂ ಪೆಟ್ರೋಲ ಇಳಿಸುವ ದಂಧೆ..?

ರಾಘು ಕಾಕರಮಠ.

ಅ0ಕೋಲಾ : ತಾಲೂಕಿನಲ್ಲಿ ಅಕ್ರಮವಾಗಿ ಡಿಸೈಲ ಹಾಗೂ ಪೆಟ್ರೋಲ ಇಳಿಸುವ ಜಾಲ ಸಕ್ರೀಯವಾಗಿದೆ. ಆರಕ್ಷಕ ಇಲಾಖೆಯ ಹಿರಿಯ ಅಧಿಕಾರಿಗಳ ಹೆಸರನ್ನು ಬಳಸಿಕೊಂಡು ಈ ಅಕ್ರಮ ದಂಧೆ ನಿರಾತಂಕವಾಗಿ ಸಾಗಿದ್ದು ವ್ಯವಸ್ಥೆಗೆ ಹಿಡಿದ ಕನ್ನಡಿಯಂತಾಗಿದೆ.

 ಯಲ್ಲಾಪುರ – ಬಾಳೆಗುಳಿಯ ನಡುವಿನ ಹೆಗ್ಗಾರದ ರಾಷ್ಟಿçÃಯ ಹೆದ್ದಾರಿ ಅಂಚಿನಲ್ಲಿ ಈ ದಂಧೆ ರಾಜಾರೋಷವಾಗಿ ತೆರೆದುಕೊಂಡಿದೆ. ಈ ವ್ಯವಹಾರವನ್ನು ಪ್ರಸನ್ನತೆಯಿಂದಲೆ ದಾದಾಗಿರಿಯಿಂದ ನಿರ್ವಹಿಸುತ್ತಿರುವ ಈ ವ್ಯಕ್ತಿಗೆ ಖಾಕಿ ಪಡೆಯ ಆರ್ಶಿವಾದ ಇರುವದು ಆತ ಮಾಡುವ ನಿರಾಂತಕ ವ್ಯವಹಾರದಿಂದಲೆ ಗೊತ್ತಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ನವಮಿ ಹೊಟೇಲ ಬಳಿ ಮತ್ತು ಅದರ ಹತ್ತಿರದಲ್ಲಿ ಯಾರಿಗೂ ಕಾಣದಂತೆ ಬೃಹತ ತಗಡಿನ ಸೀಟ್‌ಗಳನ್ನು ಅಳವಡಿಕೊಂಡು, ಅಕ್ರಮವಾಗಿ ಡಿಸೈಲ ಪೆಟ್ರೋಲಗಳನ್ನು ಅಕ್ರಮವಾಗಿ ತೆಗೆಯಲಾಗುತ್ತಿದೆ.

 ಪ್ರತಿ ದಿನ 60 ಕ್ಕೂ ಹೆಚ್ಚು ಲಾರಿಗಳಿಂದ ಡಿಸೈಲ ಮತ್ತು ಪೆಟ್ರೋಲಗಳನ್ನು ಅಕ್ರಮವಾಗಿ ಇಳಿಸಲಾಗುತ್ತಿದೆ. ಪ್ರತಿ ಲಾರಿಯಿಂದ 500 ರೂ ನಂತೆ ಸುಮ್ಮನಿರುವ ಇಲಾಖೆಗೆ ಸಂದಾಯವಾಗುತ್ತಿರುವ ಬಲವಾದ ಆರೋಪಗಳು ಕೂಡ ಕೇಳಿ ಬಂದಿದೆ. ಈ ಮೊದಲು ರಾತ್ರಿ ವೇಳೆ ಮಾತ್ರ ನಡೆಯುತ್ತಿದ್ದ ಈ ಅಕ್ರಮ ವ್ಯವಹಾರವು ಈಗ ಹಗಲಿನಲ್ಲಿಯೂ ತೆರೆದುಕೊಂಡಿದೆ.

 ಅಗತ್ಯ ವಸ್ತುಗಳ ಕಾಯ್ದೆಯ ಅಡಿ ಇತಂಹ ವ್ಯವಹಾರಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ ಸಹ ಅಕ್ರಮ ಪೆಟ್ರೋಲ– ಡಿಸೈಲ ದಂಧೆ ಖುಲಂ ಖುಲ್ಲಾ ಆಗಿ ನಡೆಯುತ್ತಿವ ಆರೋಪದ ಬಗ್ಗೆ ಜಿಲ್ಲಾ ಆರಕ್ಷಕ ಇಲಾಖೆ ಕ್ರಮ ಕೈಗೊಳ್ಳ ಬೇಕಿದೆ ಎಂಬ ಆಗ್ರಹದ ಮಾತು ಕೇಳಿ ಬಂದಿದೆ.

 ಡಿಸೈಲ ಹಾಗೂ ಪೆಟ್ರೋಲನ್ನು ಅಕ್ರಮವಾಗಿ ಇಳಿಸಿಕೊಳ್ಳಲು 7 ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ. ದಾದಾಗಿರಿಯಿಂದಲೆ ಈ ಅಕ್ರಮ ದಂಧೆ ನಡೆಯುತ್ತಿದೆ. ಸುಂಕಸಾಳದ ಉಪ ಠಾಣೆಯ ಪೊಲೀಸರು ಮಾತ್ರ ಇದರ ಸಹವಾಸಕ್ಕೂ ಹೋಗದೆ ಬೀಸುವ ದೊಣ್ಣೆಯಿಂದ ಪಾರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಅಪಾರ ಪ್ರಮಾಣದಲ್ಲಿ ಡೀಸೈಲ – ಪೆಟ್ರೋಲ ಶೇಖರಿಸುತ್ತಿರವದಿಂದ ಏನಾದೃಉ ಬೆಂಕಿ ಅವಘಡವಾದರೆ ಯಾರು ಹೊಣೆ ಎಂಬ ಪ್ರಶ್ನೆಯೂ ಇಲ್ಲಿ ಎದುರಾಗಿದೆ.

ಪೆಟ್ರೋಲ ಬಂಕಗಳಲ್ಲಿ ಇರುವ ದರಗಳಿಗಿಂದ 7 ರೂಪಾಯಿ ಕಡಿಮೆ ದರದಲ್ಲಿ ಇಲ್ಲಿ ಡಿಸೈಲ ಹಾಗೂ ಪೆಟ್ರೋಲಗಳನ್ನು ಮಾರಲಾಗುತ್ತಿದೆ ಎಂಬ ಆರೋಪವು ಕೇಳಿ ಬಂದಿದೆ. ಈ ಬಗ್ಗೆ ಆರಕ್ಷಕ ಇಲಾಖೆ ಕ್ರಮವಹಿಸಬೇಕಿದೆ. ಅಕ್ರಮ ಪೆಟ್ರೋಲ ಹಾಗೂ ಇಳಿಸುವ ಸಂಪೂರ್ಣ ದಾಖಲೆಗಳೊಂದಿಗೆ ಲೋಕಾಯುಕ್ತದ ಕದ ತಟ್ಟಲು ಇಲ್ಲಿಯ ನಾಗರಿಕರೊಬ್ಬರು ಸಿದ್ಧರಾಗಿದ್ದಾರೆ.

Share:

Rate:

Previousಫೆ. 25 ರಂದು ಆಗೇರ ಸಮಾಜದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ
Nextನೇಣಿಗೆ ಶರಣಾದ ಅಗಸೂರಿನ ಬಾಲಚಂದ್ರ ನಾಯಕ

Related Posts

ಅಂಕೋಲಾದಲ್ಲಿ ಹೆಚ್ಚುತ್ತಿರುವ ವಿವಾಹ ವಿಚ್ಛೇಧನ ಪ್ರಕರಣ

ಅಂಕೋಲಾದಲ್ಲಿ ಹೆಚ್ಚುತ್ತಿರುವ ವಿವಾಹ ವಿಚ್ಛೇಧನ ಪ್ರಕರಣ

January 5, 2024

ಶ್ರೀ ಹೋಲೆವೆಟರ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಲಗೇರಿಯ ನೂತನ ಅಧ್ಯಕ್ಷರಾಗಿ ಅಶೋಕ ರಾಮಚಂದ್ರ ನಾಯ್ಕ ಹಾಗೂ  ಕಾರ್ಯದರ್ಶಿಯಾಗಿ ಚಂದನ ಪಂಥ ಆಯ್ಕೆ

ಶ್ರೀ ಹೋಲೆವೆಟರ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಲಗೇರಿಯ ನೂತನ ಅಧ್ಯಕ್ಷರಾಗಿ ಅಶೋಕ ರಾಮಚಂದ್ರ ನಾಯ್ಕ ಹಾಗೂ ಕಾರ್ಯದರ್ಶಿಯಾಗಿ ಚಂದನ ಪಂಥ ಆಯ್ಕೆ

August 31, 2023

ಈ ಕಳ್ಳನನ್ನು ನೀವು ಗುರುತಿಸ್ತೀರಾ..?

ಈ ಕಳ್ಳನನ್ನು ನೀವು ಗುರುತಿಸ್ತೀರಾ..?

November 9, 2023

ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ.

ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ.

September 24, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
    ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
  • ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
    ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
  • ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
    ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
  • ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
    ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
  • ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.
    ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy