ಕುತ್ತಿಗೆಗೆ ಚಾಕು ಹಾಕಿ ಕೊಲೆ ಮಾಡಲು ಯತ್ನ

ಅಂಕೋಲಾ : ಕುತ್ತಿಗೆಗೆ ಚಾಕು ಹಾಕಿ ಕೊಲೆ ಮಾಡಲು ಯತ್ನಿಸಿದ ವ್ಯಕ್ತಿಯೊಬ್ಬನಿಂದ ಸಿನಿಮೀಯ ರೀತಿಯಿಂದ ತಪ್ಪಿಸಿಕೊಂಡು ಬಂದು ಪ್ರಾಣಾಪಾಯದಿಂದ ಪಾರದ ಘಟನೆ ಮಂಜಗುಣಿಯ ತಾರಿಯ ಬಳಿ ಭಾನುವಾರ ರಾತ್ರಿ ನಡೆದಿದೆ.
ಬೆಳಂಬಾರದ ಮುಡ್ರಾಣಿಯ ಗಂಗಾಧರ ಸುಕ್ರು ಗೌಡ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯಾಗಿದ್ದಾನೆ.
ಆಗಿದ್ದಾದರು ಏನು ಗೊತ್ತೆ..?
ಬೆಳಂಬಾರ ತಾಳೇಬೈಲನ ಗಂಗಾಧರ ಗೌಡ ಅವರು ಭಾನುವಾರ ರಾತ್ರಿ ತನ್ನ ಮನೆಗೆ ಹೋಗಲು ಕುಂಬಾರಕೇರಿಯ ಬಳಿ ನಿಂತಿದ್ದರು. ಈ ವೇಳೆ ಬೈಕ್ನಲ್ಲಿ ಬಂದ ವ್ಯಕ್ತಿಯೊಬ್ಬ, ಗಂಗಾಧರ ಗೌಡನನ್ನು ಬೆಳಂಬಾರಕ್ಕೆ ಬಿಡುತ್ತೇನೆ ಎಂದು ತನ್ನ ಬೈಕನಲ್ಲಿ ಕುಳಿಸಿಕೊಂಡು ಸಾಗಿದ್ದಾನೆ.
ಬೈಕ್ನಲ್ಲಿ ಸಾಗುತ್ತಿರುವಾಗ ಈ ವ್ಯಕ್ತಿ ಇಲ್ಲೆ ಮಂಜಗುಣಿಯಲ್ಲಿ ಬಳಿ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಮಂಜುಗುಣಿಯ ತಾರಿಯ ಬಳಿಯ ನಿರ್ಜನ ಪ್ರದೇಶಕ್ಕೆ ಗಂಗಾಧರ ಗೌಡನನ್ನು ಕರೆದುಕೊಂಡು ಹೋಗಿ ಹಿಂಬದಿಯಿ0ದ ಬಂದು ಕುತ್ತಿಗೆಯನ್ನು ಹಿಡಿದುಕೊಂಡು ನಿರ್ದಾಕ್ಷಿಣ್ಯವಾಗಿ ಕುತ್ತಿಗೆಯನ್ನೆ ಕುಯ್ದಿದ್ದಾನೆ.
ಆತನಿಂದ ತಪ್ಪಿಕೊಂಡು ಬಂದ ಗಂಗಾಧರ ಗೌಡ, ರಸ್ತೆಯ ಬದಿಯ ಚರಂಡಿಯೊಳಗೆ ಅವಿತುಕೊಂಡು ರಾತ್ರಿ ಕಳೆದಿದ್ದಾನೆ. ಬೆಳಿಗ್ಗೆ ಅಂಕೋಲಾ ಸರಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾನೆ. ಈ ಬಗ್ಗೆ ಗಂಗಾಧರ ಗೌಡ ಪೊಲೀಸ್ ದೂರನ್ನು ನೀಡಿದ್ದು ಈ ಬಗ್ಗೆ ಸೂಕ್ತ ಕೈಗೊಂಡು ರಕ್ಷಣೆ ಒದಗಿಸುವಂತೆ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಈ ವ್ಯಕ್ತಿಯನ್ನು ಪರಿಚಯಿಸುವದಾಗಿ ಗಂಗಾಧರ ಗೌಡ ದೂರಿನಲ್ಲಿ ವಿವರಿಸಿದ್ದು, ಪೊಲೀಸು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಈ ಘಟನೆಯಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಕಾರ್ಯಪ್ರವೃತ್ತರಾಗಿದೆ ಎಂಬ ಆಗ್ರಹದ ಮಾತು ಕೇಳಿ ಬಂದಿದೆ.
