TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಸಾಲವನ್ನು ಮರು ಪಾವತಿ ಮಾಡಿದರೂ, ಸಾಲಕ್ಕೆ ಅಡವಾಗಿ ಇಟ್ಟ ದಾಖಲೆಗಳನ್ನು ಹಿಂದುರಿಗಿಸಲು ಅಸಡ್ಡೆ :

Mar 14, 2024 | ಅಪರಾಧ, ವಿಶೇಷ |

ಸಾಲವನ್ನು ಮರು ಪಾವತಿ ಮಾಡಿದರೂ, ಸಾಲಕ್ಕೆ ಅಡವಾಗಿ ಇಟ್ಟ ದಾಖಲೆಗಳನ್ನು ಹಿಂದುರಿಗಿಸಲು ಅಸಡ್ಡೆ :

ಸಾಲವನ್ನು ಮರು ಪಾವತಿ ಮಾಡಿದರೂ, ಸಾಲಕ್ಕೆ ಅಡವಾಗಿ ಇಟ್ಟ ದಾಖಲೆಗಳನ್ನು ಹಿಂದುರಿಗಿಸಲು ಅಸಡ್ಡೆ :

ಬ್ಯಾಂಕ್‌ನ ವಿರುಧ್ಧ ಪ್ರತಿಭಟನೆ ನಡೆಸಿ, ಘೇರಾವ ಹಾಕಿದ ನಾಗರಿಕರು.

ರಾಘು ಕಾಕರಮಠ.

ಅಂಕೋಲಾ : ಸಾಲವನ್ನು ಮರು ಪಾವತಿ ಮಾಡಿದರೂ ಸಹ, ಸಾಲಕ್ಕೆ ಅಡವಾಗಿ ಇಟ್ಟ ದಾಖಲೆಗಳನ್ನು ಹಿಂದುರಿಗಿಸಲು ಸತಾಯಿಸುತ್ತಿದ್ದ ಇಲ್ಲಿನ ಕೆನರಾ (ಸಿಂಡಿಕೇಟ್) ಬ್ಯಾಂಕ್‌ನ ವಿರುಧ್ಧ ಪ್ರತಿಭಟನೆ ನಡೆಸಿ, ಘೇರಾವ ಹಾಕಿದ ಘಟನೆ ಗುರುವಾರ ನಡೆದಿದೆ.

ಹಾರವಾಡದ ಇಳಿ ವಯಸ್ಸಿನ ಇಂದು ಚಂದ್ರು ತಾಂಡೇಲ ಅವರ ಓಂ ನಮ: ಶಿವಾಯ ಬೋಟ್ ಮಾರ್ಚ ೪ ರಂದು ತಾಲೂಕಿನ ಕುಕ್ಕಡ ಗುಡ್ಡದ ಲೇವಲ ಸರ್ವೆ ವ್ಯಾಪ್ತಿಯಲ್ಲಿ ಆಳ ಸಮುದ್ರ ಪ್ರದೇಶದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಹವಾಮಾನ ವೈಪರೀತ್ಯ ಸಿಲುಕಿ ಸಂಪೂರ್ಣ ಮುಳಗಿ ಹೋಗಿತ್ತು. ಹೀಗಾಗಿ ಈ ಕುಟುಂಬದವರು ಅತಂತ್ರ ಸ್ಥಿತಿಗೆ ತಲುಪಿದ್ದರು.

ಈ ಬೋಟ್‌ನ ಮೇಲೆ ಮಾಡಿದ ಸಾಲವನ್ನು ಖಾಸಗಿ ಬ್ಯಾಂಕ್ ಹಾಗೂ ಕೈಗಡ ಸಾಲ ಮಾಡಿಕೊಂಡು ಸಾಲವನ್ನು ಬ್ಯಾಂಕಿಗೆ ಮರು ಪಾವತಿ ಮಾಡಿದ್ದರು. ಬ್ಯಾಂಕನಲ್ಲಿ ಸಾಲ ಮಾಡುವ ಸಂದರ್ಭದಲ್ಲಿ ಇಟ್ಟ ಬೋಟ್‌ನ ಆರ್.ಸಿ. ಮತ್ತು ಇತರೆ ದಾಖಲೆಗಳನ್ನು ಬ್ಯಾಂಕಿನ ವ್ಯವಸ್ಥಾಪಕಿ ಪ್ರತೀಕ್ಷಾ ಕಾರೆ ನೀಡದೆ ಸತಾಯಿಸುತ್ತಿದ್ದರು.

ಇಂದು ತಾಂಡೇಲ ಅವರು ಬ್ಯಾಂಕಗೆ ಎರಡು ಭಾರಿ ಬಂದು ಇಟ್ಟ ದಾಖಲೆಗಳನ್ನು ಹಿಂದುರಿಗಿಸಲು ಪರಿ ಪರಿಯಾಗಿ ಕೇಳಿಕೊಂಡರು ಕ್ಯಾರೆ ಎನ್ನದೆ ವ್ಯವಸ್ಥಾಪಕರು ಇಂದು ಬಾ, ನಾಳೆ ಬಾ ಎನ್ನುತ್ತಲೆ ಕಾಲ ಕಳೆದಿದ್ದರು. ಬ್ಯಾಂಕನ ಅಮಾನವೀಯ ವರ್ತನೆಯಿಂದ ರೋಸಿ ಹೋದ ನಾಗರಿಕರು ಬ್ಯಾಂಕಗೆ ಘೇರಾವ ಹಾಕಿ ಪ್ರತಿಭಟನೆ ನಡೆಸಿದರು.

 ನನಗೆ ಕನ್ನಡ ಬರೋದಿಲ್ಲ. ನಿಮ್ಮ ಹತ್ತಿರ ನಾನು ಮಾತನಾಡುವದಿಲ್ಲ ಎಂದು ಹೇಳಿ ಬ್ಯಾಂಕನ ಒಳ ಕೊಠಡಿಯಲ್ಲಿ ಬ್ಯಾಂಕಿನ ವ್ಯವಸ್ಥಾಪಕಿ ಹೋಗಿ ಕುಳಿತುಕೊಂಡು ಬಿಟ್ಟರು. ಬ್ಯಾಂಕನಲ್ಲಿ ಪ್ರತಿಭಟನೆಯ ಕಾವು ಜಾಸ್ತಿಯಾದ್ದಂತೆ ಪಿಎಸೈಗಳಾದ ಸುನೀಲ ಹುಲ್ಲೋಳ್ಳಿ ಮತ್ತು ಜಯಶ್ರೀ ಪ್ರಭಾಕರ ಅವರು ಬ್ಯಾಂಕಗೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ದೀಪಕ ಚಂದ್ರು ತಾಂಡೇಲ ಮಾತನಾಡಿ ನನ್ನ ತಾಯಿಯ ಹೆಸರಿನಲ್ಲಿದ್ದ ಸಾಲ ಮರುಪಾವತಿ ಆಗಿದೆ. ನಾವು ಬಹಳ ಕಷ್ಟದ ಪರಿಸ್ಥಿಯಲ್ಲಿ ಇದ್ದೇನೆ. ಸುಖಾಸುಮ್ಮನೆ ನಮಗೆ ತೊಂದರೆ ಕೊಡದೆ, ನಮ್ಮ ದಾಖಲೆಗಳನ್ನು ವಾಪಸ್ ಕೊಡಿ ಎಂದು ಕೇಳಿಕೊಂಡರು.

ವ್ಯವಸ್ಥಾಪಕಿ ಪ್ರತೀಕ್ಷಾ ಕಾರೆ ಮಾತನಾಡಿ ದಾಖಲೆಗಳನ್ನು ವಾಪಸ್ ನೀಡಲು ಬಹಳಷ್ಟು ಸಮಯ ಬೇಕಾಗತ್ತೆ. ಇಷ್ಟೆ ದಿನ ಅಂತಾ ಹೇಳೊಕೆ ಆಗಲ್ಲಾ. ಹುಡುಕಿ ಕೊಡುತ್ತೇನೆ ಎಂದು ಬೇಜವಬ್ದಾರಿ ಮಾತಿನಿಂದ ಕೋಪಗೊಂಡ ನಾಗರಿಕರು ವ್ಯವಸ್ಥಾಪಕಿಯನ್ನು ತೀವ್ರವಾಗಿ ತೆಗೆದುಕೊಂಡ ಘಟನೆಯು ನಡೆಯಿತು.

ಪಿಎಸೈಗಳಾದ ಸುನೀಲ ಹುಲ್ಲೋಳ್ಳಿ ಮತ್ತು ಜಯಶ್ರೀ ಪ್ರಭಾಕರ ಮಾತನಾಡಿ ನೋಡಿ ನೀವು ಈ ರೀತಿ ಹೇಳೊಕೆ ಆಗಲ್ಲಾ. ಸಾಲ ಮರು ಪಾವತಿ ಆಗಿದ್ದು ನಿಜ ಆಗಿರುವಾಗ, ಅವರ ದಾಖಲೆಗಳನ್ನು ವಾಪಸ್ ನೀಡಲು ಕಾನೂನಿನಲ್ಲಿ ತೊಂದರೆ ಇಲ್ಲ. ಇಲ್ಲದಿದ್ದರೆ ನಮ್ಮ ಭಾಷೆಯಲ್ಲೆ ಕಾನೂನು ಕ್ರಮ ಕೈಗೊಳ್ಳಬೇಕಾಗತ್ತೆ ಎಂದು ಎಚ್ಚರಿಸಿದ ಬೆನ್ನಲ್ಲೆ ಕಸಿವಿಸಿಗೊಂಡ ವ್ಯವಸ್ಥಾಪಕಿ ಪ್ರತೀಕ್ಷಾ ಕಾರೆ ನಾನು ಈಗಲೇ ದಾಖಲೆಗಳನ್ನು ವಾಪಸ್ ಕೊಡತೆನೆ. ಕನ್ನಡ ಸರಿಯಾಗಿ ಬರೋದೆ ಇರುವದರಿಂದ ನನಗೆ ತೊಂದರೆ ಆಗಿದೆ ವಿಷಾದಿಸಿ, ಈಗಲೆ ದಾಖಲೆಗಳನ್ನು ಮರಳಿಸುವದಾಗಿ ಹೇಳಿದರು.

ಅಂತೂ ಪಿಎಸೈ ಸುನೀಲ ಹುಲ್ಲೋಳ್ಳಿ ಮತ್ತು ಜಯಶ್ರೀ ಪ್ರಭಾಕರ, ಅಫರಾಧ ದಳದ ಸಿಬ್ಬಂದಿಗಳಾದ ಆಸೀಪ ಕುಂಕುರ, ರೋಹಿದಾಸ ದೇವಾಡಿಗ ಅವರ ವಿಶೇಷ ಸಹಕಾರದಲ್ಲಿ ಪ್ರಕರಣ ಇರ್ತಥ್ಯಗೊಂಡಿತು. ಸಹಾಯಕ ವ್ಯವಸ್ಥಾಪಕಿ ಶೀಲಾ ಎಚ್.ಎಸ್. ಇದ್ದರು.

ಈ ಸಂದರ್ಭದಲ್ಲಿ ವಿಘ್ನೇಶ ನಾಯ್ಕ, ಚಂದು ನಾಯ್ಕ, ಲಕ್ಷಿö್ಮÃದಾಸ ನಾಯ್ಕ, ಯಶಕುಮಾರ ನಾಯಕ, ಪ್ರವೀಣ ತಾಂಡೇಲ, ಬಾಳು ನಾಯ್ಕ, ರೋಹಿತ್ ತಾಂಡೇಲ, ಮೋಹನ ದುರ್ಗೆಕರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಬೋಟ್ ಮುಳಗಡೆಯಾಗಿದ್ದರಿಂದ ಇಂದು ತಾಂಡೇಲ ಕುಟುಂಬ ಕಣ್ಣಿರಲ್ಲಿ ಕೈ ತೊಳೆಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೆನರಾ ಬ್ಯಾಂಕನನ ವ್ಯವಸ್ಥಾಪಕಿ ಪ್ರತೀಕ್ಷಾ ಕಾರೆ ಅವರು ಅಮಾನವೀಯವಾಗಿ ಸಾಲ ಮರು ಪಾವತಿಸಿದರೂ ಸಹ, ದಾಖಲೆಗಳನ್ನು ಹಿಂತಿರಿಗಿಸದೆ ಸತಾಯಿಸುತ್ತಿರವ ಬಗ್ಗೆ ವ್ಯಾಪಕ ಚರ್ಚೆಯ ಜೊತೆಗೆ ಖಂಡನೀಯ ಮಾತುಗಳು ಕೆಳಿ ಬಂದವು. ಈ ಹಿಂದಿನ ಮ್ಯಾನೇಜ್‌ರ ವೆಂಕಟೇಷ ಮಜ್ಜಿಗುಡ್ಡಾ ಅವರು ಕೋಟ್ಯಾಂತರ ರೂಪಾಯಿ ಬ್ಯಾಂಕನ ಹಣ ಲಪಟಾಯಿಸಿಕೊಂಡು ಹೋಗುವ ಪ್ರಕರಣ ಮಾಸುವ ಮುನ್ನವೆ ಕೆನರಾ ಬ್ಯಾಂಕಗೆ ಈ ಪ್ರಕರಣ ಇನ್ನೊಂದು ಕಪ್ಪು ಚುಕ್ಕೆ ತಗಲಿದಂತಾಗಿದೆ.

Share:

Rate:

Previousಡ್ರಾಪ್ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಕುತ್ತಿಗೆಗೆ ಚಾಕು ಹಾಕಿದ ಪ್ರಕರಣ : ಮಣಿಕಂಠ ಗೌಡ ಅರೆಸ್ಟ್
Nextಅನಗತ್ಯ ಯಾವುದೇ ಕಡತ ಬಾಕಿ ಇಟ್ಟುಕೊಳದೀರಿ : ಶೀಘ್ರವಾಗಿ ತನಿಖೆ ನಡೆಸಿ : ಡಿವೈಎಸ್ಪಿ ಗಿರೀಶ ಎಸ್.ವಿ. ಸೂಚನೆ.

Related Posts

ಹಾವು ಕಚ್ಚಿ ಯುವಕ ಸಾವು

ಹಾವು ಕಚ್ಚಿ ಯುವಕ ಸಾವು

April 28, 2024

ವೃದ್ದ ದಂಪತಿಗಳನ್ನು ಭೀಕರವಾಗಿ ಕೊಲೆ ಮಾಡಿದ ಪ್ರಕರಣ : ಡಿ. 27 (ಇಂದು) ತೀರ್ಪು

ವೃದ್ದ ದಂಪತಿಗಳನ್ನು ಭೀಕರವಾಗಿ ಕೊಲೆ ಮಾಡಿದ ಪ್ರಕರಣ : ಡಿ. 27 (ಇಂದು) ತೀರ್ಪು

December 27, 2023

ಕೇಣಿಯಲ್ಲಿ ವಿಜೃಂಬಿಸಿದ ಶ್ರೀ ದತ್ತಾತ್ರೇಯ ದೇವರ ಪಲ್ಲಕಿ ಮಹೋತ್ಸವ

ಕೇಣಿಯಲ್ಲಿ ವಿಜೃಂಬಿಸಿದ ಶ್ರೀ ದತ್ತಾತ್ರೇಯ ದೇವರ ಪಲ್ಲಕಿ ಮಹೋತ್ಸವ

December 24, 2023

ಅಕ್ರಮ ಮರಳು ಮಾಫಿಯಾದ ಕರಾಳ ದೃಷ್ಠಿಗೆ ಬರಡಾದ ಗಂಗಾವಳಿ

ಅಕ್ರಮ ಮರಳು ಮಾಫಿಯಾದ ಕರಾಳ ದೃಷ್ಠಿಗೆ ಬರಡಾದ ಗಂಗಾವಳಿ

November 3, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
    ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
  • ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
    ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
  • ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
    ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
  • ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
    ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
  • ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.
    ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy