TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಮೂಲೆಮನೆಯಲ್ಲಿ ಬಿಂದಾಸ ಆಗಿ ತೆರದುಕೊಂಡ ಮಿಕ್ಸಿಂಗ್ ಡಾಂಬರ ಅಡ್ಡೆಯ ದಂಧೆ..!

Mar 22, 2024 | ಅಪರಾಧ, ವಿಶೇಷ |

ಮೂಲೆಮನೆಯಲ್ಲಿ ಬಿಂದಾಸ ಆಗಿ ತೆರದುಕೊಂಡ ಮಿಕ್ಸಿಂಗ್ ಡಾಂಬರ ಅಡ್ಡೆಯ ದಂಧೆ..!

ಮೂಲೆಮನೆಯಲ್ಲಿ ಬಿಂದಾಸ ಆಗಿ ತೆರದುಕೊಂಡ ಮಿಕ್ಸಿಂಗ್ ಡಾಂಬರ ಅಡ್ಡೆಯ ದಂಧೆ..!

ರಾಘು ಕಾಕರಮಠ.

ಚುನಾವಣೆಯ ನೀತಿ ಸಂಹಿತೆಯ ಕಾವು ಒಂದಡೆ ಬಿಗಿಗೊಳುತ್ತಿದೆ. ಆದರೆ ಇನ್ನೊಂದಡೆ ತಾಲೂಕಿನ ಮೂಲೆಮನೆಯಲ್ಲಿ ಮಾತ್ರ ಮಿಕ್ಸಿಂಗ್ ಡಾಂಬರ ಅಡ್ಡೆಯ ದಂಧೆ ಮುಕ್ತವಾಗಿ ತೆರೆದುಕೊಂಡಿದ್ದು ಆಡಳಿತ ವ್ಯವಸ್ಥೆಯನ್ನೆ ಅಣಕಿಸುವಂತಿದೆ.

 ರಾಜಸ್ಥಾನದಿಂದ ಬಂದ ಮಿಕ್ಸಿಂಗ್ ಪರಿಣಿತರು :

ಈ ಅಡ್ಡ ಕಳ್ಳ ದಂಧೆಯ ಡಾಂಬರ್ ಮಿಕ್ಸಿಂಗ್ ಮಾಡಲು ರಾಜಸ್ಥಾನದಿಂದ ಇಬ್ಬರು ಪರಿಣಿತರನ್ನು ಕರೆಯಿಸಿಕೊಂಡು ಈ ಕುಕೃತ್ಯ ನಡೆಸಲಾಗುತ್ತಿದೆ. ಹಾಗೆ ವಾಹನದಿಂದ ಡಾಂಬರ್ ಇಳಿಸಲು ಓರಿಸ್ಸಾದ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ.

 ಮೂಲೆಮನೆಯಲ್ಲಿ ಅಪಾರ ಪ್ರಮಾಣದಲ್ಲಿ ಡಾಂಬರಗೆ ಮಿಕ್ಸಿಂಗ್ ಮಾಡಲು ಕೆಮಿಕಲ್‌ನನ್ನು ಸಂಗ್ರಹಣಾ ಮಾಡಿ ಇಡಲಾಗಿದ್ದು, ಖಾಕಿಯ ರಕ್ಷಣೆಯ ಮೇರೆಗೆ ಈ ಅಡ್ಡೆಯ ಕಳ್ಳದಂಧೆ ನಡೆಯುತ್ತಿರುವ ಕುರಿತು ಆರೋಪದ ಮಾತುಗಳು ಕೇಳಿ ಬಂದಿದೆ.

 ಡಾಂಬರ್ ವಾಹನದ ಚಾಲಕರನ್ನು ಪಟಾಯಿಸಿಕೊಂಡು, ಅವರಿಗೆ ಹಣದ ಆಮಿಷ ಹಾಕಿ ಪ್ರತಿ ದಿನ ಸುಮಾರು 30 ಕ್ಕೂ ಹೆಚ್ಚು ಲಾರಿಗಳಿಂದ ಅಕ್ರಮವಾಗಿ ಡಾಂಬರನ್ನು ಇಳಿಸಿಕೊಳ್ಳಲಾಗುತ್ತದೆ. ಇಳಿಸಿಕೊಂಡ ಡಾಂಬರಿಗೆ ಬಿಳಿಯ ಬಣ್ಣದ ರಾಸಾಯನಿಕ ಪೌಡರನ್ನು ಮಿಶ್ರಣಗೊಳಿಸಿ ಮತ್ತೆ ಕಳ್ಳಾಟದಲ್ಲಿ ಬೇರೆಯವರಿಗೆ ಮಾರಲಾಗುತ್ತದೆ.

ಈ ಅಕ್ರಮಕ್ಕೆ ಸಂಬ0ಧ ಪಟ್ಟ ಕೆಲವು ಇಲಾಖೆಯ ಶಾಮೀಲಾತಿಯು ಕೂಡ ಎದ್ದು ಕಾಣುತ್ತಿದೆ. ಜಿಲ್ಲಾ ಚುನಾವಣಾಧಿಕಾರಿಗಳಿಗೆ ಈ ಬಗ್ಗೆ ದೂರು ಸಲ್ಲಿಕೆಯು ಆಗಿದೆ ಎಂದು ಗೊತ್ತಾಗಿದೆ. ನೀವು ಅಸಲಿ ಡಾಂಬರಗೆ ಏನಾದರೂ ಮಿಕ್ಸಿಂಗ್ ಮಾಡಿಕೊಳ್ಳಿ ನಮ್ಮನ್ನು ಮಾತ್ರ ಸರಿಯಾಗಿ ನೋಡಿಕೊಳ್ಳಿ ಎಂದು ಅಧಿಕಾರಿಯೊಬ್ಬರು ನೀಡಿದ ಆಸ್ವಾಹನೆಯ ಮೇರೆಗೆ ಯಾವುದೇ ಭಯವಿಲ್ಲದೆ ಮೂಲೆಮನೆಯಲ್ಲಿ ಬಿಂದಾಸ ಆಗಿ ಮಿಕ್ಸಿಂಗ್ ಡಾಂಬರ ಅಡ್ಡೆಯ ದಂಧೆ ತೆರೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

Share:

Rate:

Previousನೀತಿ ಸಂಹಿತೆ ಜಾರಿ : ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆ ತೀವ್ರ
Nextನಿಗಧಿತ ಸಮಯಕ್ಕಿಂತ ಮುಂಚಿತವಾಗಿ ಓಪನ್ ಆದ ಪಿಕಾಕ ಬಾರ್

Related Posts

ಹುಲಿದೇವರವಾಡಾದಲ್ಲಿ ರಾತ್ರಿಯಾದೊಡನೆ ಮನೆಯಿಂದ ಹೊರ ಬೀಳಲು ಹೆದರುತ್ತಿರುವ ಜನ

ಹುಲಿದೇವರವಾಡಾದಲ್ಲಿ ರಾತ್ರಿಯಾದೊಡನೆ ಮನೆಯಿಂದ ಹೊರ ಬೀಳಲು ಹೆದರುತ್ತಿರುವ ಜನ

June 20, 2024

ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಪಿಎಸೈ ಜಯಶ್ರೀ ಪ್ರಭಾಕರ ಕೊಡುಗೆ ಅಪಾರ :

ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಪಿಎಸೈ ಜಯಶ್ರೀ ಪ್ರಭಾಕರ ಕೊಡುಗೆ ಅಪಾರ :

October 24, 2023

ಅಂಕೋಲಾದಲ್ಲಿ ನಡೆಯುತ್ತಿದ್ದ ಮನೆಗಳ್ಳತನ ಹಾಗೂ ದ್ವಿಚಕ್ರ ವಾಹನ ಕಳ್ಳತನದ ಆರೋಪಿಗಳನ್ನ ಬಂಧಿಸಿದ ಪೊಲೀಸರು

ಅಂಕೋಲಾದಲ್ಲಿ ನಡೆಯುತ್ತಿದ್ದ ಮನೆಗಳ್ಳತನ ಹಾಗೂ ದ್ವಿಚಕ್ರ ವಾಹನ ಕಳ್ಳತನದ ಆರೋಪಿಗಳನ್ನ ಬಂಧಿಸಿದ ಪೊಲೀಸರು

August 29, 2023

ಅಂಕೋಲೆಯ ಅಚವೆಯೊಲ್ಲೊಬ್ಬ ಸತ್ಯಾನಂದ ಪರಮಶಿವ ಶೇಖರಸ್ವಾಮೀಜಿ..!<br>ನಕಲಿ ಸ್ವಾಮಿಗೆ ಧರ್ಮದೇಟು ನೀಡಿಕಾವಿ ಕಳಚಿಸಿದ ಭಜರಂಗದಳದ ಕಾರ್ಯಕರ್ತರು

ಅಂಕೋಲೆಯ ಅಚವೆಯೊಲ್ಲೊಬ್ಬ ಸತ್ಯಾನಂದ ಪರಮಶಿವ ಶೇಖರಸ್ವಾಮೀಜಿ..!
ನಕಲಿ ಸ್ವಾಮಿಗೆ ಧರ್ಮದೇಟು ನೀಡಿಕಾವಿ ಕಳಚಿಸಿದ ಭಜರಂಗದಳದ ಕಾರ್ಯಕರ್ತರು

July 24, 2022

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
    ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
  • ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
    ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
  • ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
    ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
  • ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
    ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
  • ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.
    ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy