TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಅಸಭ್ಯವಾಗಿ ವರ್ತಿಸಿದ ಮಾವನ ವಿರುದ್ದ ಪ್ರಕರಣ ದಾಖಲಿಸಿದ ಸೊಸೆ

Apr 6, 2024 | ಅಪರಾಧ, ವಿಶೇಷ |

ಅಸಭ್ಯವಾಗಿ ವರ್ತಿಸಿದ ಮಾವನ ವಿರುದ್ದ ಪ್ರಕರಣ ದಾಖಲಿಸಿದ ಸೊಸೆ

ಅಸಭ್ಯವಾಗಿ ವರ್ತಿಸಿದ ಮಾವನ ವಿರುದ್ದ ಪ್ರಕರಣ ದಾಖಲಿಸಿದ ಸೊಸೆ

ಅಂಕೋಲಾ : ಮಾವನೆ ಸೊಸೆಯನ್ನ ಅಸಭ್ಯ ರೀತಿಯಲ್ಲಿ ನೋಡಿ, ತನಗೆ ಸಹಕರಿಸುವಂತೆ ಬೆದರಿಕೆ ಹಾಕಿದ ವಿಲಕ್ಷಣ ಘಟನೆಯ ಕುರಿತು ಅಂಕೋಲಾ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ.

 ತಾಲೂಕಿನ ಹಿಚ್ಕಡದ ಮಹಿಳೆಯೊಬ್ಬಳು ತನ್ನ ಗಂಡ ಹಾಗೂ ಮಾವನ ವಿರುದ್ಧ ಪೊಲೀಸ್ ದೂರು ನೀಡಿದ್ದಾಳೆ. ಈ ಬಗ್ಗೆ ಪಿಎಸೈ ಜಯಶ್ರೀ ಪ್ರಭಾಕರ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

 ಎಫ್.ಐ.ಆರ್ ನಲ್ಲಿರುವ ದೂರಿನ ಸಾರಾಂಶ :

ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ 23 ವರ್ಷದ ನಿಧಿ ( ಹೆಸರು ಬದಲಾಯಿಸಲಾಗಿದೆ) ಬೆಳಗಾವಿ ಜಿಲ್ಲೆಯ ಕಾವೇರಿ ನಗರದ ಸಂಪ್ರೀತ ತಂದೆ ಕೇಶವ ನಾಯಕ ಇತನೊಂದಿಗೆ 19-03-2023 ರಂದು ಅಂಕೋಲಾ ತಾಲೂಕಾ ನಾಡವರ ಸಭಾ ಭವನದಲ್ಲಿ ಗುರು ಹಿರಿಯರ ಸಮ್ಮುಖದಲಿ ಹಿಂದೂ ಸಂಪ್ರದಾಯದAತೆ ಮದುವೆ ಮಾಡಿಕೊಂಡಿದ್ದರು.

 ಮದುವೆಯಾದ ನಂತರ ನಿಧಿ ತನ್ನ ಗಂಡನ ಮನೆಯಲ್ಲಿ ವಾಸವಾಗಿದ್ದು, ಮದುವೆಯಾದ ಹೊಸದರಲ್ಲಿ ಚೆನ್ನಾಗಿ ನೋಡಿಕೊಂಡಿದ್ದು ನಂತರ ಗಂಡ ಹಾಗೂ ಮಾವ ಸೇರಿ ಸಣ್ಣ ಪುಟ್ಟ ವಿಷಯಕ್ಕೆ ವಿನಾಕಾರಣ ಕೆಟ್ಟದಾಗಿ ಬೈದು ವಿನಾಕಾರಣ ತೊಂದರೆ ಕೊಡುತ್ತಿದ್ದರು ಎಂಬ ಆರೋಪವಿದೆ.

ಫಿರ್ಯಾದಿಯು ಬೆಳಗಾವಿಯಲಿ ತನ್ನ ಗಂಡನ ಮನೆಯಲಿ ಹಾಗೂ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾಗ ನಿಧಿಗೆ ಮಾನಸಿಕವಾಗಿ ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿದ್ದಾರೆ.

ನಿಧಿ ಬೆಳಗಾವಿ ತನ್ನ ಗಂಡ ಮನೆಯಲ್ಲಿ ಒಬ್ಬಳೇ ಮಲಗಿದ್ದಾಗ ಮಾವ ಕೆಟ್ಟ ರೀತಿಯಲ್ಲಿ ನೋಡಿ ತಾನು ಹೇಳಿದಂತೆ ಕೆಳದಿದ್ದಲ್ಲಿ ಇಲ್ಲ ಸಲ್ಲದ ಆಪಾದನೆ ಮಾಡಿ ಏನಾದರೂ ಮಾಡುತ್ತೇನೆ ಅಂತಾ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

ಹಾಗೆ ತನ್ನ ತವರು ಮನೆಯಲ್ಲಿ ಬಂದು ವಾಸವಾಗಿದ್ದಾಗಲೂ 14-05-2023 ರಂದು ರಾತ್ರಿ ತನ್ನ ಗಂಡ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಮಾನಸಿಕ-ದೈಹಿಕ ಕಿರುಕುಳ ನೀಡಿದ್ದಾನೆ. ಈ ಎಲ್ಲ ಕಹಿ ಘಟನೆಯನ್ನು ಸಹಿಸಿಕೊಂಡು ಬಂದರು ನನಗೆ ಕಿರುಕುಳ ಮಾತ್ರ ನಿಂತಿರಲಿಲ್ಲ.

ಅಂಕೋಲಾದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಹೋಗಿ ನನಗಾದ ಅನ್ಯಾಯ ವಿನಂತಿಸಿಕೊAಡಾಗ, ಅಲ್ಲಿಯೂ ಸಹ ನನ್ನ ಗಂಡ ಹೊಂದಾಣಿಕೆ ಮಾಡಿಕೊಂಡಿಲ್ಲ. ಹೀಗಾಗಿ ಮನೆಯವರೊಂದಿಗೆ ಚರ್ಚಿಸಿದ ನಂತರ ವಿಳಂಬವಾಗಿ ದೂರು ನೀಡುತ್ತಿದ್ದೇನೆ ಎಂದು ಸಂತ್ರಸ್ತ ಮಹಿಳೆ ತನ್ನ ದೂರಿನ ಸಾರಾಂಶದಲ್ಲಿ ವಿವರಿಸಿದ್ದಾಳೆ.

Share:

Rate:

Previousಪ್ಲಿಪ್ಲಿಪ್ಕಾರ್ಟ್ನಲ್ಲಿಟೂಲ್ಕಿಟ್ಖರೀದಿ, ಮನೆಗೆಬಂದಿದ್ದುಕಲ್ಲುತುಂಬಿದಬಾಕ್ಸ್:
Nextಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ನಡೆಸುತ್ತಿದ್ದವನ ಬಂಧನ

Related Posts

ಅಂಕೋಲಾದಲ್ಲಿ ಮಹಿಳಾ ಕಂಡಕ್ಟರಳಿಂದ ಡಿಶುಂ.. ಡಿಶುಂ..

ಅಂಕೋಲಾದಲ್ಲಿ ಮಹಿಳಾ ಕಂಡಕ್ಟರಳಿಂದ ಡಿಶುಂ.. ಡಿಶುಂ..

July 11, 2023

ವೃದ್ದ ದಂಪತಿಗಳನ್ನು ಭೀಕರವಾಗಿ ಕೊಲೆ ಮಾಡಿದ ಪ್ರಕರಣ : ಡಿ. 27 (ಇಂದು) ತೀರ್ಪು

ವೃದ್ದ ದಂಪತಿಗಳನ್ನು ಭೀಕರವಾಗಿ ಕೊಲೆ ಮಾಡಿದ ಪ್ರಕರಣ : ಡಿ. 27 (ಇಂದು) ತೀರ್ಪು

December 27, 2023

ಉಕ ಜಿಲ್ಲಾ ಗೃಹರಕ್ಷಕ ದಳದ ಉಕ ಜಿಲ್ಲಾ ಗೌರವ ಸಮಾದೇಷ್ಟರಾಗಿ ಡಾ. ಸಂಜು ಟಿ. ನಾಯಕ

ಉಕ ಜಿಲ್ಲಾ ಗೃಹರಕ್ಷಕ ದಳದ ಉಕ ಜಿಲ್ಲಾ ಗೌರವ ಸಮಾದೇಷ್ಟರಾಗಿ ಡಾ. ಸಂಜು ಟಿ. ನಾಯಕ

September 13, 2023

ಆಭರಣ ನೀಡದೆ ವಂಚನೆ : ಕಾರವಾರದ ಗಾಂಧಿ ಮಾರ್ಕೆಟ್‌ನಲ್ಲಿರುವ ವೆಂಕಟೇಶ ಜ್ಯುವೇಲರ್ಸ್ ನ ಪ್ರವೀಣ  ಕುಡ್ತಲಕರ ಅವರ ಮೇಲೆ ಪ್ರಕರಣ

ಆಭರಣ ನೀಡದೆ ವಂಚನೆ : ಕಾರವಾರದ ಗಾಂಧಿ ಮಾರ್ಕೆಟ್‌ನಲ್ಲಿರುವ ವೆಂಕಟೇಶ ಜ್ಯುವೇಲರ್ಸ್ ನ ಪ್ರವೀಣ ಕುಡ್ತಲಕರ ಅವರ ಮೇಲೆ ಪ್ರಕರಣ

July 7, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
    ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
  • ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
    ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
  • ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
    ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
  • ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
    ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
  • ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.
    ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy