ಧರ್ಮದ ಬೇಲಿ ದಾಟಿ ಒಂದಾದ ಪ್ರೇಮಿಗಳು

ರಾಘು ಕಾಕರಮಠ.
ಅಂಕೋಲಾ : ತಮ್ಮ ವಿವಾಹಕ್ಕೆ ಎದುರಾದ ಭಿನ್ನ ಧರ್ಮಗಳ ತಡೆಗೋಡೆ, ಪೋಷಕರ ವಿರೋಧದ ಅಡ್ಡಿ ಎಲ್ಲವನ್ನೂ ದಾಟಿದ ಜೋಡಿಯೊಂದು ವಿವಾಹ ಬಂಧನಕ್ಕೆ ಒಳಗಾಗುವ ಮೂಲಕ ಬಾಳ ಬಂಡಿಯ ಪಯಣಕ್ಕೆ ಮುಂದಡಿ ಇಟ್ಟಿದೆ.
ಪ್ರೀತಿಗೆ ಜಾರಿಸಿದ ಪೇಸ್ಬುಕ್ :
ಅಂಕೋಲಾ ತಾಲೂಕಿನ ಕೇಂದ್ರದಿಂದ ೩೦ ಕೀಮಿ ಅಂತರದಲ್ಲಿರುವ ಯುವಕನಿಗೆ, ಸಮುದ್ರ ತಡಿಯಂಚಿನ ಯುವತಿಯೊಂದಿಗೆ ಪೇಸ್ಬುಕ್ನಲ್ಲಿ ಮೊದಮೊದಲು ಸ್ನೇಹಿತರಾಗಿಯೆ ಪರಿಚಿತವಾಗಿದ್ದರು. ಬರು ಬರುತ್ತಲೆ ತಮ್ಮ ಭಾವನೆಗಳನ್ನು ಪರಸ್ಪರ ಹಂಚಿಕೊಂಡು ಪ್ರೀತಿಯ ಬಲೆಗೆ ಬಿದ್ದರು. ಪರಸ್ಪರ ಮೋಬೈಲ ಸಂಖ್ಯೆಯನ್ನು ಮಾಡಿಕೊಂಡು ನವಿನವಿರಾಗಿ ಸಂದೇಶ ವಿನಿಮಯ ಮಾಡಿಕೊಂಡು ತಮ್ಮದೇ ಆದ ಪ್ರಪಂಚದಲ್ಲಿ ೩ ವರ್ಷ ಕಳೆದಿದ್ದರು.
ಪ್ರೀತಿಗೆ ಅಡ್ಡಿಯಾದ ಧರ್ಮದ ಗೋಡೆ :
ಈ ಪ್ರೀತಿಗೆ ಯುವಕನ ಮನೆಯಲ್ಲಿ ಅಷ್ಟಾಗಿ ವಿರೋಧ ಇರಲಿಲ್ಲ. ಆದರೆ ಯುವತಿಯ ಮನೆಯಲ್ಲಿ ಈ ಪ್ರೀತಿಗೆ ಒಪ್ಪಿಗೆ ಇರಲಿಲ್ಲ. ಏನಾದರೂ ಮಾಡಿ ತಮ್ಮ ಪ್ರೀತಿಯ ವಾಖ್ಯೆಗೆ ದಾಂಪತ್ಯ ಸಮರಸ ಬೆಸುಗೆಯನ್ನು ಬೆಸೆಯಲು ಈ ಯುವ ಜೋಡಿ ಮುಂದಾಗಿದ್ದರು. ಈ ವಿಷಯವನ್ನು ತಿಳಿದ ಯುವತಿಯ ಮನೆಯವರು ಯುವತಿಯನ್ನು ಮನೆಯಲ್ಲಿಯೆ ದಿಗ್ಬಂಧಕ್ಕೆ ಒಳಪಡಿಸಿ, ಮೊಬೈಲ ಕಿತ್ತುಕೊಂಡು ೩ ತಿಂಗಳ ಕಾಲ ಯುವಕನ ಸಂಪರ್ಕಕ್ಕೆ ಬರದಂತೆ ನೋಡಿಕೊಂಡಿದ್ದರು.
ಠಾಣೆಗೆ ಆಗಮಿಸಿದ ಪ್ರೇಮಿ :
ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಮನೆಯವರು ಮನೆಯಲ್ಲಿ ಕೂಡಿ ಹಾಕಿದ್ದಾರೆ. ಅವಳನ್ನು ನನ್ನದೊಂದಿಗೆ ಜೀವನ ಮಾಡಲು ಅವಕಾಶ ಮಾಡಿಕೊಡಿ ಎಂದು ಯುವಕ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದ. ಯುವಕನ ದೂರಿನ ಮೇರೆಗೆ ಯುವತಿಯ ಮನೆಯವರನ್ನು ಠಾಣೆಗೆ ಕರೆದು ಪೊಲೀಸರು ವಿಚಾರಿಸಿದ್ದಾರೆ. ಈ ವೇಳೆ ಯುವತಿ ತಾನು ಪ್ರೀತಿಸುವ ಪ್ರೇಮಿಯೊಂದಿಗೆ ಬಾಳುತ್ತೇನೆ ಎಂದು ಪೊಲೀಸರ ಎದುರು ಹೇಳಿಕೊಂಡಿದ್ದಾಳೆ.
ಹಿಂದು ಧಾರ್ಮಿಕ ಪದ್ದತಿಯಂತೆ ವಿವಾಹ :
ಬಿನ್ನ ಧರ್ಮಗಳ ತಡೆಗೋಡೆಯಿಂದ ಬೇರೆ ಆದ ಪ್ರೇಮಿಗಳು ಹಿಂದು ಧಾರ್ಮಿಕ ಪದ್ಧತಿಯಂತೆ ಸಪ್ತಪದಿ ತುಳಿದು ನವ ಜೀವನಕ್ಕೆ ಕಾಲಿಟ್ಟು ಒಂದಾದರು. ಕುರುಡು ಪ್ರೀತಿಗೆ ಧರ್ಮದ ಹಂಗು ಕಾಣದೆ ಯುವಕ- ಯುವತಿ ಜೊತೆಯಾಗಿ ಕೈ ಹಿಡಿದು ಹುಡುಗನ ಮನೆಯತ್ತ ಹೆಜ್ಜೆ ಹಾಕಿ ಗಮನ ಸೆಳೆದರು.