ಕಾನೂನು ರಕ್ಷಕರ ವೇಷದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆನ್ಲೈನ್ ವಂಚಕರಿAದ ಹಣ ವಸೂಲಿ ದಂಧೆ

ರಾಘು ಕಾಕರಮಠ.
ಅಂಕೋಲಾ : ಖಾಕಿ ಕಂಡೊಡನೆ ಭಯ ಬೀಳುವ ಜನರನ್ನು ವಂಚಿಸಲು ಹೆಚ್ಚಿನದಾಗಿ ಕಾನೂನು ರಕ್ಷಕರ ವೇಷದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಂಚನೆ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ಹೆಚ್ಚಿನ ಆನ್ಲೈನ್ ಆರ್ಥಿಕ ವಂಚನೆ ಪ್ರಕರಣಗಳು ಕಾನೂನು ರಕ್ಷಕರ ವೇಷದಲ್ಲೇ ನಡೆಯುತ್ತಿರುವದು ಆತಂಕಕಾರಿಯಾಗಿ ಗಮನ ಸೆಳೆದಿದೆ.
ಉಕ ಜಿಲ್ಲೆಯಲ್ಲೆ 6 ಕ್ಕೂ ಪೊಲೀಸ್ ಅಧಿಕಾರಗಳ ಹೆಸರಿನಲ್ಲಿ ನಕಲಿ ಪೇಸ್ಬುಕ್ ಹಾಗೂ ಇನಸ್ಟಾಗ್ರಾಂಗಳು ತೆರೆದುಕೊಂಡಿದೆ. ಉಕ ಜಿಲ್ಲೆಯ ಎಸ್ಪಿ ಎಮ್ ನಾರಾಯಣ, ಈ ಹಿಂದಿನ ನಿಕಟಪೂರ್ವ ಎಸ್ಪಿ ವಿಷ್ಣುವರ್ಧನ, ಕರಾವಳಿ ಕಾವಲು ಪಡೆಯ ಪೊಲೀಸ್ ನೀರಿಕ್ಷಕ ಸಂಪತಕುಮಾರ, ಸಿಪಿಐ ಎಚ್. ಜಯರಾಜ್, ಪಿಎಸೈಗಳಾದ ಪ್ರವೀಣಕುಮಾರ, ಸಿದ್ದು ಗುಡಿ, ಮುಸಾಯಿದ್ದೀನ, ಅನಿಲ ಮಾದರ ಸೇರಿದಂತೆ ಇನ್ನು ಅನೇಕ ಅಧಿಕಾರಿಗಳು ಪೇಸ್ಬುಕ್ ಖಾತೆಗಳು ನಕಲಿಯಾಗಿ ಆತಂಕ ಸೃಷ್ಠಿ ಮಾಡಿದೆ.
ಪೊಲೀಸ್ ಅಧಿಕಾರಗಳದ್ದೆ ಹೆಚ್ಚೇಕೆ ನಕಲಿ :
ಪೊಲೀಸ್ ಅದಿಕಾರಿಗಳೆಂದರೆ ಅದರದೆ ಆದ ನಂಬಿಕೆ, ಗತ್ತು ಇದೆ. ಪೊಲೀಸ ಅಧಿಕಾರಗಳ ಸ್ನೇಹವಿತ್ತೆಂದರೆ ಅದೆನೋ ಒಂಥರಾ ಗೌರವ ಎಂಬ ಭಾವನೆ ಇದೆ. ಹೀಗಾಗಿ ಸಹಜವಾಗಿ ಪೊಲೀಸ್ ಅಧಿಕಾರಗಳ ಹೆಸರಿನಲ್ಲಿ ಪ್ರೆಂಡ್ ರಿಕ್ವೆಸ್ಟ್ ಬಂದೊಡನೆ ಸಹಜವಾಗಿ ಗೌರವ ಮನೋಭಾವನೆಯಿಂದ ಅದನ್ನು ಸ್ವೀಕರಿಸತ್ತಾರೆ. ಹೀಗಾಗಿ ಪೊಲೀಸ್ ಅಧಿಕಾರಗಳ ನಕಲಿ ಖಾತೆಯೆ ನಮ್ಮ ಆನ್ಲೈನ್ ಟೋಪಿ ವ್ಯವಹಾರಕ್ಕೆ ಸೇಫ್ ಎಮದು ಹೆಚ್ಚಿನ ನಕಲಿ ಖಾತೆಗಳು ಸೃಷ್ಠಿಯಾಗುತ್ತದೆ ಎಂದು ಪೊಲೀಸ್ ಅಧಿಕಾರಿಗಳೆ ಸ್ಪಷ್ಠಪಡಿಸುತ್ತಾರೆ.

ಪೊಲೀಸ್ ನಕಲಿ ಪೇಸ್ಬುಕ್ ಇನಸ್ಟಾಗ್ರಾಂ ಖಾತೆ :
ಸೈಬರ್ ವಂಚಕರು ಪೊಲೀಸ್ ಅಧಿಕಾರಿಗಳ ಪೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪಡೆದುಕೊಂಡು, ಅವರ ಹೆಸರಿನಲ್ಲಿಯೆ ನಕಲಿ ಖಾತೆಗಳನ್ನ ಮೊದಲಿಗೆ ಸೃಷ್ಠಿ ಮಾಡುತ್ತಾರೆ. ಆನಂತರದಲ್ಲಿ ಪ್ರೇಂಡ್ ರಿಕ್ವೆಕ್ಟ್ಗಳನ್ನು ಕಳಿಸಿ ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಳ್ಳುತ್ತಾರೆ. ನಂತರ ನನಗೆ ಹಣದ ಅವಶ್ಯಕತೆ ಇದೆ. ನಿಮಗೆ 2-3 ದಿನದಲ್ಲಿ ಹಣ ವಾಪಸ್ ನೀಡುವದಾಗಿ ಸಾಮಾಜಿಕ ಜಾಲತಾನದಲ್ಲೆ ವ್ಯಹವರಿಸುತ್ತಾರೆ.
ಇದನ್ನು ನಂಬಿದ ಅನೇಕರು ಇವರು ನೀಡುವ ನಕಲಿ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡುತ್ತಾರೆ. ಹಣ ಸಂದಾಯ ಮಾಡಿದ್ದೆ ತಡ ಇವರ ಪ್ರೆಂಡ್ ಲೀಸ್ಟ್ನ್ನು ಇನ್ಎಕ್ವಿವ್ಗೊಳಿಸಿದಾಗಲೆ ವಂಚನೆಗೊಳಗಾದವರಿಗೆ ತಾವು ಮೋಸಕ್ಕೆ ಹೋಗಿರುವದಾಗಿ ಅರಿವಿಗೆ ಬರುತ್ತದೆ.
ಅಧಿಕಾರಿಗಳೆಂದು ನಕಲಿ ವಿಡಿಯೋ ಕಾಲ್:
ವಂಚಕರು ಕಾನೂನು ಪಾಲನಾ ಅಧಿಕಾರಿಗಳು ಎಂದು ನಕಲಿ ವಿಡಿಯೋ ಕಾಲ್ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಜನಸಾಮಾನ್ಯರಿಗೆ ಪೊಲೀಸ್ ಅಧಿಕಾರಿಗಳೆಂಬ ಭಯ, ಕಾನೂನು ಬಗ್ಗೆ ಅರಿವಿಲ್ಲದಿರುವುದು ಮೊದಲಾದವುಗಳನ್ನು ಮುಂದಿಟ್ಟುಕೊ0ಡು ಆನ್ ಲೈನ್ ಮೂಲಕ ಹಣ ದೋಚಲಾಗುತ್ತಿದೆ. ಅಶ್ಲೀಲ ಸೈಟ್ ವೀಕ್ಷಿಸುವವರನ್ನು ಕ್ಯೆçöÊಂ ಕಂಟ್ರೋಲ್ ಬ್ಯೂರೋ ಹೆಸರಿನಲ್ಲಿ ವಂಚನೆಗೊಳಪಡಿಸಲಾಗುತ್ತಿದೆ.
ಹೀಗೆ ಅನೇಕ ರೀತಿಯಲ್ಲಿ ಪೊಲೀಸ್ ಅಧಿಕಾರಿಗಳ ನಕಲಿ ಐಡಿ ಸೃಷ್ಠಿಸಿಕೊಂಡು ವಂಚನಾ ಜಾಲ ಹಣೆಯಲಾಗುತ್ತಿದೆ. ತಾನು ಉನ್ನತ ಪೊಲೀಸ್ ಅಧಿಕಾರ ಎಂಬುದಾಗಿ ವಂಚಕರು ನಂಬಿಸುತ್ತಾರೆ. ಆಧಾರ್ ಕಾರ್ಡ್, ಬ್ಯಾಂಕ್ ಮಾಹಿತಿಗಳನ್ನು ಬಳಸಿಕೊಳ್ಳುವ ವಂಚಕರು ಕಾನೂನು ಬಾಹಿರ ವಸ್ತುಗಳನ್ನೊಳಗೊಂಡ ಕೊರಿಯರ್ ಬುಕ್ ಮಾಡಿರುವದಾಗಿ ಹೇಳಿ ಹಣ ದೋಚುತ್ತಾರೆ. ವಂಚನೆಗೊಳಗಾದ ಅನೇಕರು ದೂರು ನೀಡಲು ಕೂಡ ಮುಂದಾಗುವುದಿಲ್ಲ ಎಂಬ ಸಂಗತಿಯನ್ನ ಪೊಲೀಸ್ ಇಲಾಖೆಯ ಅಧಿಕಾರಿಗಳೆ ತಿಳಿಸುತ್ತಾರೆ.
ನನ್ನ ಹೆಸರಿನಲ್ಲಿಯೂ ಪೇಸ್ಬುಕ್ ಖಾತೆ ಸೃಷ್ಠಿಯಾಗಿತ್ತು. ಜನತೆಯೆ ಜಾಗೃತರಾಗಬೇಕಾದ ಅವಶ್ಯಕತೆ ಇದೆ. ಯಾರು ಕೂಡ ಆನ್ಲೈನ್ನಲ್ಲಿ ಅಪರಿಚಿತಗಳೊಂದಿಗೆ ವ್ಯಹರಿಸದೆ ಇರುವದು ಉತ್ತಮ. ಪೊಲೀಸ್ ಅಧಿಕಾರಿಗಳು ಎಂಬ ಭಯದಿಂದ ಇಂತಹ ವಿಡಿಯೋ `ಕಾಲ್ ಅಥವಾ ಸಂದೇಶ ಲಭಿಸಿದರೆ ಭಯಪಡಬೇಕಾದ ಅಗತ್ಯವಿಲ್ಲ ಅವರು ಹೇಳುವ ಖಾತೆಗೆ ಹಣ ರವಾನಿಸಬಾರದು. ಯಾವುದೇ ತನಿಖಾ ಏಜೆನ್ಸಿ ತನಿಖೆಗಾಗಿ ಹಣ ಕಳುಹಿಸಲು ಕೇಳುವುದಿಲ್ಲ, ವಂಚನೆಗೊಳಗಾದರೆ ಒಂದು ಗಂಟೆ ಯೊಳಗೆ (ಗೋಲ್ಡನ್ ಅವರ್) 1930 ಎಂಬ ನಂಬರ್ ಮಾಹಿತಿ ನೀಡಬಹುದು.
ಎಚ್.ಜಯರಾಜ್. ಸಿಪಿಐ ಗೋವಿಂದಪುರ ಬೆಂಗಳೂರು.