TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ನಿಮ್ಮ ನೋವುಗಳೊಂದಿಗೆ ನಾನಿದ್ದೇನೆ ಎಂದು ವಿಶೇಷ ಚೇತನರಿಗೆ ದೈರ್ಯ ತುಂಬಿದ ಶಾಸಕ ಸತೀಶ ಸೈಲ್

Oct 2, 2024 | ವಿಶೇಷ |

ನಿಮ್ಮ ನೋವುಗಳೊಂದಿಗೆ ನಾನಿದ್ದೇನೆ ಎಂದು ವಿಶೇಷ ಚೇತನರಿಗೆ ದೈರ್ಯ ತುಂಬಿದ ಶಾಸಕ ಸತೀಶ ಸೈಲ್

ನಿಮ್ಮ ನೋವುಗಳೊಂದಿಗೆ ನಾನಿದ್ದೇನೆ ಎಂದು ವಿಶೇಷ ಚೇತನರಿಗೆ ದೈರ್ಯ ತುಂಬಿದ ಶಾಸಕ ಸತೀಶ ಸೈಲ್

ವಿಶೇಷ ಚೇತನರನ್ನು ಗೌರವದಿಂದ ಕಾಣಬೇಕು : ಶಾಸಕ ಸತೀಶ ಸೈಲ್

ವರದಿ : ಗೋಪು ನಾಯಕ. ಅಡ್ಲೂರು.

ಕಾರವಾರ.: ವಿಶೇಷ ಚೇತನರನ್ನು ಗೌರವದಿಂದ ಕಾಣಬೇಕು. ಅವರಿಗೆ ಸರ್ಕಾರದಿಂದ ದೊರೆಯುವ ಸೌಲತ್ತುಗಳನ್ನು ಪ್ರಾಮಾಣಿಕವಾಗಿ ತಲುಪಿಸಬೇಕು. ಅಂತಹ ಉದ್ದೇಶದಿಂದಲೇ ನಮ್ಮ ಸರ್ಕಾರ ವಿಕಲಚೇತನರಿಗಾಗಿ ಹಲವು ಸವಲತ್ತುಗಳನ್ನು ಒದಗಿಸಿಕೊಡುವ ಕಾರ್ಯ ಮಾಡುತ್ತಿದೆ ಎಂದು ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ ಹೇಳಿದರು.

ತಾಲೂಕಿನ ಅಮದಳ್ಳಿ ಗ್ರಾಪಂ ವಿಶೇಷ ಗ್ರಾಮ ಸಭೆ ಹಾಗೂ ವಿಕಲಚೇತನರ ಗ್ರಾಮ ಸಭೆಯನ್ನು ಉದ್ಘಾಟಿಸಿ, ವಿಶೇಷ ಚೇತನರಿಗೆ ಗ್ರಾಪಂದ %5 ನಿಧಿಯಲ್ಲಿ ಆರು ತ್ರಿಚಕ್ರ ವಾಹನ 8 ಶ್ರವಣ ಸಾಧನ 13 ವೀಲ್ ಚೇರ್ ಮೂರು ಉರುಗೋಲು ನೀಡಿ ಮಾತನಾಡಿ ನಮ್ಮ ನಡುವೆ ನಮ್ಮ ಸಹೋದರ ಸಹೋದರಿಯರಂತೆ ಇರುವ ವಿಶೇಷ ಚೇತನರಿಗೆ ಪ್ರೀತಿ ತೋರಿಸಬೇಕು. ಅವರಿಗೆ ಸಮಸ್ಯೆ ಇರುವ ಸಂದರ್ಭದಲ್ಲಿ ಸಹಕರಿಸಬೇಕಾದದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯ. ನಾನು ಸಹ ನನ್ನ ಅನುದಾನದಲ್ಲಿ ನನ್ನ ಕ್ಷೇತ್ರದ ವಿಶೇಷ ಚೇತನರಿಗೆ ಹಿಂದಿನ ಅವಧಿಯಲ್ಲಿಯೂ ಹಲವಾರು ಸವಲತ್ತುಗಳನ್ನು ನೀಡಿದ್ದೇನೆ ಎನ್ನುವ ಆತ್ಮ ತೃಪ್ತಿ ನನ್ನಲ್ಲಿದೆ ಮುಂದೆಯೂ ನನ್ನ ಅಧಿಕಾರ ಅವಧಿಯಲ್ಲಿ ಮತ್ತು ವೈಯಕ್ತಿಕವಾಗಿ ವಿಶೇಷ ಚೇತನಿಗೆ ಸಹಕರಿಸಲು ನಾನು ಸದಾ ಸಿದ್ಧನಿದ್ದೇನೆ ಎಂದರು.

 ಹಮದಳ್ಳಿ ಗ್ರಾಪಂ ಅಧ್ಯಕ್ಷ ಪುರುಷೋತ್ತಮ್ ಗೌಡ ಮಾತನಾಡಿ ಶಾಸಕ ಸತೀಶ ಸೈಲ್ ಕರ್ತವ್ಯ ಮತ್ತು ಬದ್ಧತೆಗೆ ಶಿರೂರಿನ ಗುಡ್ಡ ಕುಸಿತದ ಸಂದರ್ಭದಲ್ಲಿ ಅವರು ತೋರಿಸಿದ ಕಳಕಳಿ ಸಾಕ್ಷಿಯಾಗಿದೆ. ಜನಪ್ರತಿನಿಧಿ ಅಂದಮೇಲೆ ಹೊಗಳಿಕೆ ತೆಗಳಿಕೆಗಳು ಸಾಮಾನ್ಯ. ನಮ್ಮ ಗ್ರಾಪಂ ವ್ಯಾಪ್ತಿಯಿಂದ ಹಿಡಿದು ಕಾರವಾರ ಅಂಕೋಲಾ ಕ್ಷೇತ್ರಕ್ಕೆ ತನಗೆ ಬಂದ ಅನುದಾನದಲ್ಲಿ 25 ಕೋಟಿ ರೂಪಾಯಿಗಳನ್ನು ದೇವಸ್ಥಾನಗಳ ಅಭಿವೃದ್ಧಿಗೆ ತೊಡಗಿಸಿ ವಿಶೇಷ ಕರ್ತವ್ಯ ಮೆರೆದಿದ್ದಾರೆ. ಅಭಿವೃದ್ಧಿಯಲ್ಲಿ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ ನಮ್ಮ ಶಾಸಕರು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರಾಘು ಭಟ್ಟ, ಪಾಪಂ ಕಾರ್ಯ ನಿರ್ವಹಣಾಧಿಕಾರಿ ವೀರಣ್ಣ ಗೌಡ

 ಗ್ರಾಪಂ ಸದಸ್ಯರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮಸ್ಥರು ವಿಶೇಷ ಚೇತನರು ಉಪಸ್ಥಿತರಿದ್ದರು

ನಮ್ಮ ಸಮಾಜದ ಓರ್ವ ಪ್ರಮುಖರಾದ ರಾಜು ತಾಂಡೆಲ್ ರವರನ್ನು ನಾವು ಅಗಲಿದ್ದೇವೆ. ಕೆಲವರು ತಮ್ಮ ಲಾಭಕ್ಕಾಗಿ ಶಾಸಕ ಸತೀಶ ಸೈಲ್ ರವರ ಹೆಸರನ್ನು ಈ ವಿಚಾರದಲ್ಲಿ ಕೆಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ರಾಜು ತಾಂಡೇಲ್ ಮತ್ತು ಶಾಸಕ ಸತೀಶ ಸೈಲ್ ರವರ ಬಾಂಧವ್ಯ ಅತ್ಯುತ್ತಮವಾಗಿತ್ತು. ಇಂತಹ ಉತ್ತಮ ಜನಪ್ರತಿನಿಧಿಗಳಿಗೆ ರಾಜು ತಾಂಡೇಲ್ ವಿಚಾರದಲ್ಲಿ ಕೆಟ್ಟ ಹೆಸರನ್ನು ತರುವ ಪ್ರಯತ್ನವನ್ನು ಮಾಡಿದರೂ ಯಾರು ನಂಬುವುದಿಲ್ಲ.

 ದೇವಾನಂದ ಚಂಡೇಕರ್

 ಸದಸ್ಯರು ಗ್ರಾಪಂ ಅಮದಳ್ಳಿ

Share:

Rate:

Previousಪ್ರಾಣಿ ವಧೆಯ ನಿಷೇಧ ದಿನದಂದು ಅಂಕೋಲಾದಲ್ಲಿ ಮಾಂಸ ಮಾರಾಟ :
Nextಅಂಕೋಲಾ ಬಸ್  ನಿಲ್ದಾಣದಲ್ಲಿ  ಯುವತಿ ನಾಪತ್ತೆ

Related Posts

ಅಂಕೋಲಾದಲ್ಲಿ ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಮೊಹರಂ

ಅಂಕೋಲಾದಲ್ಲಿ ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಮೊಹರಂ

July 29, 2023

ಇನ್ಟಾಗ್ರಾಮ್‌ನಲ್ಲಿ ಪ್ರೇಮದ ಬಲೆಗೆ ಸಿಲುಕಿ  ನಾಪತ್ತೆಯಾಗಿದ್ದ ಯುವತಿಯನ್ನು ರಕ್ಷಿಸಿದ ಅಂಕೋಲಾ ಪೊಲೀಸರು

ಇನ್ಟಾಗ್ರಾಮ್‌ನಲ್ಲಿ ಪ್ರೇಮದ ಬಲೆಗೆ ಸಿಲುಕಿ ನಾಪತ್ತೆಯಾಗಿದ್ದ ಯುವತಿಯನ್ನು ರಕ್ಷಿಸಿದ ಅಂಕೋಲಾ ಪೊಲೀಸರು

July 15, 2024

ಅಂಕೋಲೆಯ ಹೆಮ್ಮೆಯ ಅಂಜುಮಾಲಾ ನಾಯಕ ಅವರಿಗೆ ರಾಷ್ಟ್ರಪತಿ ಪದಕ

ಅಂಕೋಲೆಯ ಹೆಮ್ಮೆಯ ಅಂಜುಮಾಲಾ ನಾಯಕ ಅವರಿಗೆ ರಾಷ್ಟ್ರಪತಿ ಪದಕ

August 14, 2023

ಪದ್ಮಶ್ರೀ ಸುಕ್ರಿ ಗೌಡ ಅವರನ್ನು ಸನ್ಮಾನಿಸಿ ಗೌರವಿಸಿದ  ವಜ್ರಕೋಶದ ಕಮಾಂಡಿಂಗ್ ಆಫೀಸರ್ ಆರ್.ಕೆ. ಸಿಂಗ್

ಪದ್ಮಶ್ರೀ ಸುಕ್ರಿ ಗೌಡ ಅವರನ್ನು ಸನ್ಮಾನಿಸಿ ಗೌರವಿಸಿದ  ವಜ್ರಕೋಶದ ಕಮಾಂಡಿಂಗ್ ಆಫೀಸರ್ ಆರ್.ಕೆ. ಸಿಂಗ್

July 17, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಕ್ಯಾಷಿಯರ್  ಮೇಲೆ  ಅತ್ಯಾಚಾರಕ್ಕೆ ಯತ್ನ ;
    ಕ್ಯಾಷಿಯರ್ ಮೇಲೆ  ಅತ್ಯಾಚಾರಕ್ಕೆ ಯತ್ನ ;
  • ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
    ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
  • ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
    ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
  • ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
    ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
  • ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ
    ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy