TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಅವರ್ಸಾದಲ್ಲಿ ಜನಪ್ರತಿಯೊಬ್ಬನ ರಾಜಾತಿಥ್ಯದಲ್ಲಿ ತೆರೆದುಕೊಂಡಿರುವ ಮಟ್ಕಾ ದಂಧೆ

Feb 6, 2025 | ಅಪರಾಧ |

ಅವರ್ಸಾದಲ್ಲಿ ಜನಪ್ರತಿಯೊಬ್ಬನ ರಾಜಾತಿಥ್ಯದಲ್ಲಿ ತೆರೆದುಕೊಂಡಿರುವ ಮಟ್ಕಾ ದಂಧೆ

ಅವರ್ಸಾದಲ್ಲಿ ಜನಪ್ರತಿಯೊಬ್ಬನ ರಾಜಾತಿಥ್ಯದಲ್ಲಿ ತೆರೆದುಕೊಂಡಿರುವ ಮಟ್ಕಾ ದಂಧೆ

ಕೋಳಿ ಆಸಿಯಂತೆ ಘಮಘಮಿಸುತ್ತಿರುವ ಮಟ್ಕಾ ದಂಧೆಗೆ ಕಡಿವಾಣ ಹಾಕುವರ‍್ಯಾರು..?

ಅವರ್ಸಾದಲ್ಲಿ ಜನಪ್ರತಿಯೊಬ್ಬನ ರಾಜಾತಿಥ್ಯದಲ್ಲಿ ತೆರೆದುಕೊಂಡಿರುವ ಮಟ್ಕಾ ದಂಧೆ

ಕೋಳಿ ಆಸಿಯಂತೆ ಘಮಘಮಿಸುತ್ತಿರುವ ಮಟ್ಕಾ ದಂಧೆಗೆ ಕಡಿವಾಣ ಹಾಕುವರ‍್ಯಾರು..?

ದಿನಕರ ನಾಯ್ಕ. ಅಲಗೇರಿ.

ಅಂಕೋಲಾ : ತಾಲೂಕಿನ ಅವರ್ಸಾದಲ್ಲಿ ಮಟ್ಕಾ ದಂಧೆ ಎನ್ನುವದು ಕೋಳಿ ಆಸಿಯಂತೆ ಘಮಘಮಿಸುತ್ತಿದೆ. ಆಟೋ ರಾಜಾನ ಸುಪರ್ದಿಯಲ್ಲಿ ಮಟ್ಕಾ ದಂಧೆ ಎಗ್ಗಿಲ್ಲದೆ ಸಾಗಿದ್ದು ವ್ಯವಸ್ಥೆಯನ್ನೆ ಅಣುಕಿಸುವಂತಿದೆ.

 ಅವರ್ಸಾ, ದಂಡೇಭಾಗ ಹಾಗೂ ಸಕಲಬೇಣದಲ್ಲಿ ಮಟ್ಕಾ ಎನ್ನುವದು ಬಿಂದಾಸ್ ಆಗಿ ತೆರೆದುಕೊಂಡಿದೆ. ವಿಪರ್ಯಾಸವೆಂದರೆ ಇಲ್ಲಿ ಜಪ್ರತಿನಿಧಿಗಳು ಮಟ್ಕಾ ದಂಧೆಯ ಕಿರೀಟ ತೊಟ್ಟು, ಬುಕ್ಕಿಯಾಗಿ ಮರೆಯುತ್ತಿರುವದು ಚರ್ಚೆಗೀಡುಮಾಡಿದೆ.

 ಅವರ್ಸಾ ಎಂದರೆ ಅದೊಂದು ಪ್ರಜ್ಞಾವಂತರ ಹಾಗು ಧಾರ್ಮಿಕತೆಯ ಸೊಗಡನ್ನು ಹೊತ್ತ ನೆಲವದು. ಆದರೆ ಇಲ್ಲಿ ಮಟ್ಕಾ ತಲುಬಿಗೆ ಇಲ್ಲಿನ ಜನರನ್ನು ತಳ್ಳುತ್ತಿರುವದು ಕೂಡ ಕಪ್ಪು ಚುಕ್ಕೆಯಾಗಿ ಗಮನ ಸೆಳೆಯುತ್ತಿದೆ. ಕೆಲವೊಬ್ಬರು ಇಲ್ಲಿ ಹೇಳಿಕೊಳ್ಳೋಕೆ ಗ್ರಾಮ ಪಂಚಾಯತ ಸದಸ್ಯರು. ಆದರೆ ಮಾಡುವ ದಂಧೆ ಮಾತ್ರ ಮಟ್ಕಾ ಬುಕ್ಕಿಯ ದಂಧೆಕೋರರು.

ಸಮಾಜ ಸೇವೆಯ ಪೋಸು ಕೊಡುತ್ತ, ಮುಂದಿನ ಚುನಾವಣೆಗೆ ತಯಾರಿ ನಡೆಸಿರುವ ಈ ಕಿರಾತಕ ಬುಕ್ಕಿಗಳು, ರಾಜಕೀಯ ಎನ್ನುವದು ಇವರಿಗೆ ತೆವಲಿಗಾದರೆ, ಮಟ್ಕಾ ಎನ್ನುವದು ಚುನಾವಣೆಗೆ ಖರ್ಚು ಹೊಂದಿಸುವ ವೇದಿಕೆಯು ಆಗಿದೆ ಎನ್ನುತ್ತಾರೆ ಕಾತ್ಯಾಯನಿ ಗ್ರೌಂಡನಲ್ಲಿ ರಾತ್ರಿ ಸೇರುವ ಗೆಳೆಯರ ಬಳಗದವರು.

 ಇನ್ನು ಸಕಲಬೇಣದಲ್ಲಂತೂ ಮಟ್ಕಾ ಎಂದರೆ ಸಕ್ಕರೆ ತಿಂದಷ್ಟೆ ಸಲೀಸು. ಇಲ್ಲಿಯ ಬುಕ್ಕಿ ಮಾತ್ರ ಬಾರಿ ಚಾಲಾಕು. ಟೆನಷನ್ ಟ್ಲಾಬ್ಲೆಟೂ ಇತನ ಪ್ರೆಂಡೂ. ಹಾಗೆ ಅವರ್ಸಾ ದಂಢೇಭಾಗದಲ್ಲ0ತೂ ಇತನೆ ಜಗದೊಡೆಯ. ಒಟ್ಟಾರೆ ಅವರ್ಸಾದಲ್ಲಿ ಮಟ್ಕಾ ದಂಧೆ ಬೊಂಬೆಯ ಮಿಠಾಯಿಯಂತೆ ಚಪ್ಪರಿಕೆಗೆ ಒಳಗಾಗಿದೆ. ಆಟೋ ರಾಜಾ ಮಾತ್ರ ಬಿಂದಾಸ್ ಆಗಿದ್ದಾನೆ. ಅಂಕೋಲಾ ಠಾಣೆಯ ಪೊಲಿಸ್ ಇನ್‌ಪೆಕ್ಟರ ಚಂದ್ರಶೇಖರ ಮಠಪತಿ ಅವರು ವಿಶೇಷ ತಂಡ ರಚಿಸಿ ನಿಗ್ರಹಿಸುವಂತೆ ಆಗ್ರಹದ ಮಾತುಗಳು ಕೂಡ ಬಲವಾಗಿ ಕೇಳಿ ಬಂದಿದೆ.

Share:

Rate:

Previousಬಡವರ ಪ್ರಾಣ ಹಿಂಡುತ್ತಿದೆ ಮೈಕ್ರೋ ಫೈನಾನ್ಸ್ ಭೂತ :
Nextಸಾಲಕೊಡಿಸುವ ನೆಪದಲ್ಲಿ ಪಲ್ಲಂಗ ಏರಲು ಸಿದ್ದನಾದ ಬ್ಯಾಂಕ ಗುಮಾಸ್ತನಿಗೆ ಬಿತ್ತು ಧರ್ಮದೇಟು

Related Posts

ಸಾಲಕೊಡಿಸುವ ನೆಪದಲ್ಲಿ ಪಲ್ಲಂಗ ಏರಲು ಸಿದ್ದನಾದ ಬ್ಯಾಂಕ ಗುಮಾಸ್ತನಿಗೆ ಬಿತ್ತು ಧರ್ಮದೇಟು

ಸಾಲಕೊಡಿಸುವ ನೆಪದಲ್ಲಿ ಪಲ್ಲಂಗ ಏರಲು ಸಿದ್ದನಾದ ಬ್ಯಾಂಕ ಗುಮಾಸ್ತನಿಗೆ ಬಿತ್ತು ಧರ್ಮದೇಟು

February 8, 2025

ವೃದ್ದ ದಂಪತಿಗಳ ಭೀಕರ ಕೊಲೆಗೈದ ಸುಖೇಶ ನಾಯಕ ಗ್ಯಾಂಗ್‌ಗೆ ಜೀವಾವಧಿ ಶಿಕ್ಷೆ ಪ್ರಕಟ

ವೃದ್ದ ದಂಪತಿಗಳ ಭೀಕರ ಕೊಲೆಗೈದ ಸುಖೇಶ ನಾಯಕ ಗ್ಯಾಂಗ್‌ಗೆ ಜೀವಾವಧಿ ಶಿಕ್ಷೆ ಪ್ರಕಟ

January 9, 2024

ಕಾರ್ ಕೊಡಿಸುದಾಗಿ ವಂಚನೆ : ದೂರು ದಾಖಲು

ಕಾರ್ ಕೊಡಿಸುದಾಗಿ ವಂಚನೆ : ದೂರು ದಾಖಲು

December 21, 2023

ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ನಡೆಸುತ್ತಿದ್ದವನ ಬಂಧನ

ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ನಡೆಸುತ್ತಿದ್ದವನ ಬಂಧನ

April 7, 2024

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
    ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
  • ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
    ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
  • ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
    ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
  • ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
    ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
  • ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.
    ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy