TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಡಿವೈಎಸ್ಪಿಯಾಗಿ ಎಚ್ ಜಯರಾಜ್ ಪದೋನ್ನತಿ

Mar 1, 2025 | ವಿಶೇಷ |

ಡಿವೈಎಸ್ಪಿಯಾಗಿ ಎಚ್ ಜಯರಾಜ್ ಪದೋನ್ನತಿ

ಡಿವೈಎಸ್ಪಿಯಾಗಿ  ಎಚ್  ಜಯರಾಜ್  ಪದೋನ್ನತಿ

ಡಿವೈಎಸ್ಪಿಯಾಗಿ  ಎಚ್  ಜಯರಾಜ್  ಪದೋನ್ನತಿ

ರಾಘು ಕಾಕರಮಠ.

ಅಂಕೋಲಾ ; ರಾಷ್ಟ್ರಪತಿ ಪದಕಕ್ಕೆ ಭಾಜನರಾದ ಡೈನಾಮಿಕ ಪೊಲೀಸ್ ಇನ್ಸ್ಪೆಕ್ಟರ್ ಜಯರಾಜ್ ಹೆಚ್ ಅವರು ಡಿವೈಎಸ್ಪಿಯಾಗಿ ಪದೋನ್ನತರಾಗಿದ್ದಾರೆ.

       ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 30 ಸಿವಿಲ್ ಪೊಲೀಸ್ ಇನ್ಸ್ಪೆಕ್ಟರ್‌ಗಳಿಗೆ ರಾಜ್ಯ ಸರಕಾರ ಡಿವೈಎಸ್ಪಿಯಾಗಿ ಪದೋನ್ನತಿ ನೀಡಿ ಆದೇಶ ಹೊರಡಿಸಿದೆ. ಇದರಲ್ಲಿ ಬೆಂಗಳೂರು ಸಿಟಿ ಗೋವಿಂದಪುರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯದಲ್ಲಿರುವ ಜಯರಾಜ್ ಹೆಚ್ ಅವರು ಪದೋನ್ನತರಾಗಿ ಹೆಮ್ಮೆ ಮೂಡಿಸಿದ್ದಾರೆ.

      2002 ನೇ ಬ್ಯಾಚಿನಲ್ಲಿ ಪಿಎಸೈ ಆಗಿ ಕರ್ನಾಟಕ ಪೊಲೀಸ್ ಇಲಾಖೆಗೆ ಸೇರಿದ ಜಯರಾಜ್ ಅವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಅಂಕೋಲಾ, ಶಿವಮೊಗ್ಗ ರೌಡಿ ನಿಗ್ರಹ ದಳ, ಹೊಳೆನರಸಿಪುರ, ಬೆಂಗಳೂರಿನ ಕೆ.ಆರ್.ಪುರಂ ಮತ್ತು ಸಿಐಡಿ ಘಟಕ ಮತ್ತು ಬಾಣಸವಾಡಿ, ಗೋವಿಂದಪುರ ಠಾಣೆಗಳಲ್ಲಿ ಜನಸ್ನೇಹಿ ಅಧಿಕಾರಿ ಕರ್ತವ್ಯ ನಿರ್ವಹಿಸಿ, ಅನೇಕ ಕ್ಲೀಷ್ಠಕರ ಅಫರಾಧ ಪ್ರಕರಣಗಳನ್ನು ಭೇಧಿಸಿದ ಕಿರ್ತಿ ಜಯರಾಜ್ ಅವರಿಗೆ ಸಲ್ಲುತ್ತದೆ.

ಅಂಕೋಲಾದ ಹೆಮ್ಮೆಯಾಗಿರುವ ಪೊಲೀಸ್ ಇನ್ಸ್ಪೆಕ್ಟರ್ ಜಯರಾಜ್ ಎಚ್ ಅವರ ವಿಶೇಷ ಕರ್ತವ್ಯ ಪ್ರಜ್ಞೆಗೆ ರಾಷ್ಟçಪತಿ ಪದಕವು ಸಹ ಕಳೆದ ಒಂದು ತಿಂದಷ್ಟೇ ಬಾಜನವಾಗಿರುವದು ವಿಶೇಷವಾಗಿದೆ. ಜನಪರ ಕಾರ್ಯ, ದಕ್ಷತೆ, ಮತ್ತು ಪ್ರಾಮಾಣಿಕತೆಗೆ ಹೆಸರಾಗಿರುವ ಜಯರಾಜ್ ಅವರಿಗೆ ಶಿವಮೊಗ್ಗ ನಗರದಲ್ಲಿ ರೌಢಿಸಂ ವಿರುದ್ಧ ಕೈಗೊಂಡ ದಿಟ್ಟ ಕಾನೂನು ಕ್ರಮಗಳನ್ನು ಗುರುತಿಸಿ ರಾಜ್ಯ ಸರ್ಕಾರ 2015 ಸಾಲಿನಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕ ನೀಡಿ ಗೌರವಿಸಿದ್ದು ಕೂಡ ಸ್ಮರಣೀಯವಾಗಿದೆ.

ಸಾಂಸ್ಕೃತಿಕ ರಾಯಭಾರಿಯಾಗಿರುವ ಜಯರಾಜ್ ಎಚ್. ಅವರು ಡಿವೈಎಸ್ಪಿ ಪದೋನ್ನತಗೊಂಡಿರುವದು ಅವರ ಆಪ್ತ ವಲಯದಲ್ಲಿ ಹರ್ಷಕ್ಕೆ ಕಾರಣವಾಗಿದೆ.

Share:

Rate:

Previousಸಾಲಕೊಡಿಸುವ ನೆಪದಲ್ಲಿ ಪಲ್ಲಂಗ ಏರಲು ಸಿದ್ದನಾದ ಬ್ಯಾಂಕ ಗುಮಾಸ್ತನಿಗೆ ಬಿತ್ತು ಧರ್ಮದೇಟು
Nextಅಂಗಡಿಬೈಲನಲ್ಲಿ ಕೋಳಿ ಅಂಕ ನಡೆಸಿ ಪಾರುಪತ್ಯ ಮರೆದ ಜೂಜುಕೋರರು

Related Posts

ಕಾರವಾರದ ಕಿಮ್ಸ್ ನಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿದ್ದ ಅಂಕೋಲಾದ ಯುವತಿ ನಾಪತ್ತೆ

ಕಾರವಾರದ ಕಿಮ್ಸ್ ನಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿದ್ದ ಅಂಕೋಲಾದ ಯುವತಿ ನಾಪತ್ತೆ

November 17, 2023

ವಿನೋದ ಗಾಂವಕರ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ :ಮೂರು ವರ್ಷಗಳಿಂದ ಜಾತಿ ಪ್ರಮಾಣ ಪತ್ರಕ್ಕಾಗಿ ಅಲೆದಾಟ: ಸರಕಾರದ ಸವಲತ್ತುಗಳಿಂದ ವಂಚಿತವಾಗಿರುವ ಭೋವಿ ವಡ್ಡರ ಜನಾಂಗ

ವಿನೋದ ಗಾಂವಕರ ನೇತೃತ್ವದಲ್ಲಿ ಸಾಂಕೇತಿಕ ಪ್ರತಿಭಟನೆ :ಮೂರು ವರ್ಷಗಳಿಂದ ಜಾತಿ ಪ್ರಮಾಣ ಪತ್ರಕ್ಕಾಗಿ ಅಲೆದಾಟ: ಸರಕಾರದ ಸವಲತ್ತುಗಳಿಂದ ವಂಚಿತವಾಗಿರುವ ಭೋವಿ ವಡ್ಡರ ಜನಾಂಗ

August 12, 2023

ಬಂಗಾರಪ್ಪ ಅಭಿಮಾನಿಗಳ ಬಳಗದ ವತಿಯಿಂದ ಬಂಗಾರಪ್ಪನವರ ಜನ್ಮ ಜಯಂತಿ

ಬಂಗಾರಪ್ಪ ಅಭಿಮಾನಿಗಳ ಬಳಗದ ವತಿಯಿಂದ ಬಂಗಾರಪ್ಪನವರ ಜನ್ಮ ಜಯಂತಿ

October 26, 2023

ಸಾರಿಗೆ ಇಲಾಖೆಯ ಎಸ್.ಆರ್. ಬಂಟರಿಗೆ ಉತ್ತಮ ಸಿಬ್ಬಂದಿ ಪ್ರಶಸ್ತಿ

ಸಾರಿಗೆ ಇಲಾಖೆಯ ಎಸ್.ಆರ್. ಬಂಟರಿಗೆ ಉತ್ತಮ ಸಿಬ್ಬಂದಿ ಪ್ರಶಸ್ತಿ

August 16, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ  ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
    ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
  • ಕೊಡ್ಲಗದ್ದೆಯಲ್ಲಿ ಹೆಚ್ಚಿದ ಚಿರತೆ ಹಾವಳಿ: ಗ್ರಾಮಸ್ಥರಲ್ಲಿ ಭೀತಿ
    ಕೊಡ್ಲಗದ್ದೆಯಲ್ಲಿ ಹೆಚ್ಚಿದ ಚಿರತೆ ಹಾವಳಿ: ಗ್ರಾಮಸ್ಥರಲ್ಲಿ ಭೀತಿ
  • ಮಹಿಳೆ ಸ್ನಾನ ಮಾಡುವವದನ್ನು ಇಣಕಿ ನೋಡಲು ಹೋಗಿ ಸಿಕ್ಕಿಬಿದ್ದ ಮಾಜಿ ಮಟ್ಕಾ ಬುಕ್ಕಿ
    ಮಹಿಳೆ ಸ್ನಾನ ಮಾಡುವವದನ್ನು ಇಣಕಿ ನೋಡಲು ಹೋಗಿ ಸಿಕ್ಕಿಬಿದ್ದ ಮಾಜಿ ಮಟ್ಕಾ ಬುಕ್ಕಿ
  • ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
    ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
  • ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
    ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy