TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಅಂಗಡಿಬೈಲನಲ್ಲಿ ಕೋಳಿ ಅಂಕ ನಡೆಸಿ ಪಾರುಪತ್ಯ ಮರೆದ ಜೂಜುಕೋರರು

Mar 27, 2025 | ಅಪರಾಧ, ವಿಶೇಷ |

ಅಂಗಡಿಬೈಲನಲ್ಲಿ ಕೋಳಿ ಅಂಕ ನಡೆಸಿ ಪಾರುಪತ್ಯ ಮರೆದ ಜೂಜುಕೋರರು

ಅಂಕೋಲಾಕ್ಕೆ ಗ್ರಹ ಸಚಿವರು ಬಂದ ಹಿನ್ನಲೆಯಲ್ಲಿ ಬ್ಯೂಸಿ ಆದ ಪೊಲೀಸರು.

ಅಂಗಡಿಬೈಲನಲ್ಲಿ ಕೋಳಿ ಅಂಕ ನಡೆಸಿ ಪಾರುಪತ್ಯ ಮರೆದ ಜೂಜುಕೋರರು

ಅಂಕೋಲಾಕ್ಕೆ ಗ್ರಹ ಸಚಿವರು ಬಂದ ಹಿನ್ನಲೆಯಲ್ಲಿ ಬ್ಯೂಸಿ ಆದ ಪೊಲೀಸರು.

ಅಂಗಡಿಬೈಲನಲ್ಲಿ ಕೋಳಿ ಅಂಕ ನಡೆಸಿ ಪಾರುಪತ್ಯ ಮರೆದ ಜೂಜುಕೋರರು

ಅಂಕೋಲಾ : ತಾಲೂಕಿನ ಅಂಗಡಿಬೈಲನ ಕಪ್ಪನಗದ್ದೆಯಲ್ಲಿ ಕೋಳಿ ಅಂಕದ ಜೂಜಾಟವು ಬುಧವಾರ ರಂಗೇರಿತ್ತು. ಇತ್ತ ಅಂಕೋಲಾದಲ್ಲಿ ಗ್ರಹ ಸಚಿವ ಜಿ. ಪರಮೇಶ್ವರ ಅವರು ಕಾರ್ಯಕ್ರಮದ ನಿಮಿತ್ತ ಪೊಲೀಸರು ಬ್ಯೂಸಿಯಾಗಿದ್ದಾರೆ ಎಂದು ಅರಿತ ಕೋಳಿ ಅಂಕದ ಜೂಜುಗಾರರು ತಮ್ಮದೆ ಆದ ಕೂಟ ರಚಿಸಿಕೊಂಡು ಬಿಂದಾಸ ಆಗಿ ಅರಣ್ಯ ಪ್ರದೇಶದಲ್ಲಿ ಕೋಳಿ ಜೂಜು ನಡೆಸಿ ಪಾರುಪತ್ಯ ಮರೆದ ಘಟನೆ ವರದಿಯಾಗಿದೆ.

ಪೊಲೀಸ್ ವರಿಷ್ಠಾಧಿಕಾರಿ ಎಮ್. ನಾರಾಯಣ ಅವರ ಕಟ್ಟುನಿಟ್ಟಿನ ಸೂಚನೆಯ ಮೇರೆಗೆ ಅಂಕೋಲಾದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ಅಂಕೋಲಾ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ಮಠಪತಿ ಅಂಕುಶ ಹಾಕಿ ಜೂಜುಕೋರರು ಹುಟ್ಟಡಗಿಸಿದ್ದರು. ಆದರೆ ಬುಧವಾರ ಮಾತ್ರ ಅಂಕೋಲಾದ ಪೊಲೀಸರಿಗೆ ಕರೆದುಕೊಳ್ಳಲಿಕ್ಕೂ ಪುರುಸೋತ್ತು ಇರಲಿಲ್ಲ. ತಮ್ಮ ಇಲಾಖೆಯ ಸಚಿವರು ಅಂಕೋಲಾಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಬಂದೋಬಸ್ತನಲ್ಲಿ ಅಲರ್ಟ್ ಆಗಿದ್ದರು.

 ಈ ಸಂದರ್ಭವನ್ನೆ ಬಳಸಿಕೊಂಡ ಕಿಲಾಡಿ ಕೋಳಿ ಅಂಕ ಜೂಜಾಟಗಾರರು ಅಂಗಡಿಬೈಲನ ಕಪ್ಪನಗದ್ದೆಯಲ್ಲಿ 18 ಕೋಳಿಗಳನ್ನು ಅಂಕಕ್ಕೆ ಒಡ್ಡಿ, ತಮಗಾವ ಖಾಕಿಯ ಅಡ್ಡಿ ಇಲ್ಲ ಎಂದು ನಸುನಗುತ್ತಲೆ ಕೋಳಿ ಅಂಕದಲ್ಲಿ ಮೈಮರೆತಿದ್ದರು. ಅಂಕೋಲಾ ಮಾದನಗೇರಿ ಗೋಕರ್ಣ ಹಾಗೂ ಕುಮಟಾ ಭಾಗದಿಂದ ಕೋಳಿಗಳನ್ನು ತಂದ ಜೂಜಾಟಗಾರರು, ಕೋಳಿ ಕಾದಾಟ ನೋಡುತ್ತಲೆ ಜೂಜಿನ ಅಮಲಿನೊಂದಿಗೆ ತೇಲಿ ಹೋಗಿದ್ದರು.

 ಬೋರಳ್ಳಿಯ ಕೋಳಿ ಬಿಡುವ ಪಾಪು ಎಂದೇ ನಾಮಾಂಕಿತನಾದ ಈತ ಕೋಳಿ ಅಂಕದ ನೇತ್ರತ್ವವಹಿಸಿದ್ದ. ವಾರದಲ್ಲಿ ಒಂದು ಅಥವಾ ಎರಡು ಭಾರಿ ರಾತ್ರಿ ವೇಳೆಯಲ್ಲಿ ಪೊಲೀಸರ ಕಣ್ಣು ತಪ್ಪಿಸಿ ಬೋರಳ್ಳಿಯ ತನ್ನ ಮನೆಯ ಬಳಿಯೆ ಕೋಳಿ ಅಂಕ ನಡೆಸುತ್ತಿರುವದು ಕೂಡ ಆಪ್ತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

 ತಾಲೂಕಿನ ಅಂಗಡಿಬೈಲನ ಕಪ್ಪನಗದ್ದೆಯ ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಪೊಲೀಸ್ ಸಹಾಯವಾಣಿ 112 ಗೆ ಕೂಡ ನಾಗರಿಕರು ಪೋನ್ ಮಾಡಿ ದೂರು ನೀಡಿದ್ದರು. 112 ಪೊಲೀಸರು ಸ್ಥಳಕ್ಕೆ ಹೋಗಿ ಖಾಲಿ ಕೈಯಲ್ಲಿ ಮರಳಿದ್ದರು. ಪೊಲೀಸರು ಬಂದ ದಾರಿಗೆ ಸುಂಕ ಇಲ್ಲಾ ಎಂದು ತೆರಳಿದ ಬೆನ್ನಲ್ಲೆ ಮತ್ತೆ ಕೋಳಿ ಅಂಕ ನಡೆಸಿ ಪೊಲೀಸರು ಮಂಕುಬೂದಿ ಎರಚಿದ್ದಾರೆ ಎಂದು ಗೊತ್ತಾಗಿದೆ.

ಇನ್ನು ಈ ಜೂಜಾಟದಲ್ಲಿ ನೇತ್ರತ್ವಹಿಸಿದ್ದ ಪಾಪು 948241—- ಹಾಗೂ ಲಕ್ಷ್ಮಣನ ತಮ್ಮನಂತಿರುವ 944842—- ಇವರು ಕೋಳಿ ಅಂಕದ ಜೂಜಾಜದ ವೇದಿಕೆ ಸಿದ್ದಪಡಿಸಿದ್ದರು ಎಂದು ಗೊತ್ತಾಗಿದೆ. ಅಂತೂ ಗ್ರಹ ಸಚಿವ ಪರಮೇಶ್ವರ ಅಂಕೋಲಾಕ್ಕೆ ಭೇಟಿಯು ಜೂಜುಕೋರರಿಗೆ ಹಬ್ಬವಾಗಿ ಪರಿಗಣಿಸಿತ್ತು ಮಾತ್ರ ಸುಳ್ಳಲ್ಲ.

Share:

Rate:

Previousಡಿವೈಎಸ್ಪಿಯಾಗಿ ಎಚ್ ಜಯರಾಜ್ ಪದೋನ್ನತಿ
Nextರಾಮನಗುಳಿಯಲ್ಲಿ ಅಕ್ರಮ ಡಿಸೈಲ- ಪೆಟ್ರೋಲ ಮಿಕ್ಸಿಂಗ್ ದಂಧೆ..?

Related Posts

ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ

ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ

November 8, 2025

32 ವರ್ಷದ ತರುಣ ನಾರಾಯಣ ನಾಯಕ ಹೃದಯಾಘಾತಕ್ಕೆ ಬಲಿ

32 ವರ್ಷದ ತರುಣ ನಾರಾಯಣ ನಾಯಕ ಹೃದಯಾಘಾತಕ್ಕೆ ಬಲಿ

November 7, 2023

ಅಂಕೋಲಾ ಹವ್ಯಕ ಸಂಘದಿಂದ  ನೂತನ ತಹಸೀಲ್ದಾರ ಅಶೋಕ ಭಟ್ ಅವರಿಗೆ  ಸ್ವಾಗತ – ಸನ್ಮಾನ

ಅಂಕೋಲಾ ಹವ್ಯಕ ಸಂಘದಿಂದ ನೂತನ ತಹಸೀಲ್ದಾರ ಅಶೋಕ ಭಟ್ ಅವರಿಗೆ ಸ್ವಾಗತ – ಸನ್ಮಾನ

August 14, 2023

ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಬೆನ್ನಲ್ಲೆ ಅರಳಿದ ಬ್ರಹ್ಮ ಕಮಲ

ನರೇಂದ್ರ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಬೆನ್ನಲ್ಲೆ ಅರಳಿದ ಬ್ರಹ್ಮ ಕಮಲ

June 10, 2024

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
    ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
  • ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
    ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
  • ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
    ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
  • ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ
    ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ
  • ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ  ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
    ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy