ಪೊಲೀಸ್ ಸಿಬ್ಬಂದಿಗಳಿಗೆ ಅಫಘಾತಪಡಿಸಿ ನಾಪತ್ತೆಯಾದ ರಿಕ್ಷಾ
ಅಂಕೋಲಾ : ಬೈಕ್ನಲ್ಲಿ ಸಾಗುತ್ತಿದ ಇರ್ವರು ಪೊಲೀಸ್ ಸಿಬ್ಬಂದಿಗಳಿಗೆ, ರಿಕ್ಷಾವೊಂದು ಅಫಘಾತಪಡಿಸಿ ನಾಪತ್ತೆಯಾದ ಘಟನೆ ಪಟ್ಟಣದ ಬಸ್ ನಿಲ್ದಾಣ ಎದುರು ಗುರುವಾರ ಮದ್ಯಾಹ್ನ ನಡೆದಿದೆ.
ಅಂಕೋಲಾ ಠಾಣೆಯ ಎಸೈ ಬಾಬು ಆಗೇರ ಹಾಗೂ ಹವಾಲ್ದಾರ ಪ್ರೇಮಾನಂದ ಗಾಂವಕರ ಅವರಿಗೆ ಗಾಯಗಳಾಗಿದ್ದು ಅವರನ್ನು ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ವೈಧ್ಯರು ಚಿಕಿತ್ಸೆಗೆ ಒಳಪಡಿಸಿದ್ದಾರೆ.

ಎಸೈ ಬಾಬು ಆಗೇರ ಹಾಗೂ ಹವಾಲ್ದಾರ ಪ್ರೇಮಾನಂದ ಗಾಂವಕರ ಅವರು ಕರ್ತವ್ಯದ ನಿಮಿತ್ತ ವಾಸರಕುದ್ರಿಗೆ ಗ್ರಾಮಕ್ಕೆ ಭೈಕನಲ್ಲಿ ತೆರಳಿದ್ದರು. ತಮ್ಮ ಕರ್ತವ್ಯ ಮುಗಿಸಿ ಅಂಕೋಲಾ ಠಾಣೆಗೆ ಆಗಮಿಸುತ್ತಿದ್ದ, ವೇಳೆ ಕೆ.ಸಿ.ರಸ್ತೆಯಿಂದ ಒಮ್ಮೆಲೆ ಬಂದ ರಿಕ್ಷಾ ಇವರಿಗೆ ಗುದ್ದಿ ಅಘಘಾತಪಡಿಸಿದೆ. ಅಫಘಾತಪಡಿಸಿ ನಾಪತ್ತೆಯಾದ ರಿಕ್ಷಾದ ಹಾಗೂ ಅದರ ಚಾಲಕನ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಭೈಕ್ ರಿಕ್ಷಾದೊಳಗೆ ಸಿಲುಕಿಹಾಕಿಕೊಂಡಿತ್ತು ಎನ್ನಲಾಗಿದ್ದು, ಹತ್ತಿರದಲ್ಲೆ ಇದ್ದ ರಿಕ್ಷಾ ಚಾಲಕರು, ನೆಲಕ್ಕೆ ಬಿದ್ದ ಪೊಲೀಸ ಸಿಬ್ಬಂದಿಗಳನ್ನ ಉಪಚರಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಈ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
