
ಸೇಲ್ಪಿ ತೆಗೆಯುತ್ತಿದ್ದ ವೇಳೆ ಮೊಸಳೆ ಪ್ರತ್ಯಕ್ಷ : ಮೂರ್ಚೆ ಹೋದ ಯುವತಿ
ರಾಘು ಕಾಕರಮಠ.@9449999775
ಅಂಕೋಲಾ : ನದಿಯ ಬಳಿಯಲ್ಲಿ ಪ್ರವಾಸಿಗ ಯುವತಿಯೊಬ್ಬಳು ಸೇಲ್ಪಿ ತೆಗೆಯುತ್ತಿದ್ದ ವೇಳೆ ಬೃಹತ ಗಾತ್ರದ ಮೊಸಳೆಯನ್ನು ಕಂಡು ಎಚ್ಚರ ತಪ್ಪಿ ಬಿದ್ದ ಘಟನೆ ಹೊಸಕಂಬಿಯಲ್ಲಿ ಗುರುವಾರ ನಡೆದಿದೆ.
ನಡೆದದ್ದೇನು..?
ಧಾರವಾಡದ ಶಂಕರ ದೊಡ್ಮನಿ ಕುಟುಂಬದವರು ಪ್ರವಾಸಕ್ಕೆಂದು ವಾಹನದಲ್ಲಿ ವಿಭೂತಿ ಪಾಲ್ಸ್ ಹಾಗೂ ಗೋಕರ್ಣಕ್ಕೆ ಆಗಮಿಸಿದ್ದರು. ಈ ವೇಳೆ ವಿಭೂತಿ ಪಾಲ್ಸ್ಗೆ ಸಾಗುವ ಮಾರ್ಗ ಮಧ್ಯೆ ಹೊಸಕಂಬಿ ಬ್ರೀಜ್ ಬಳಿ ಯುವತಿ ನದಿಯ ವಿಹಂಗಮ ನೋಟದ ಸೇಲ್ಪಿ ತೆಗೆಯುತ್ತಿದ್ದಾಗ, ಮೊಬೈಲ ಪರದೆಯೊಳಗೆ ಬೃಹತ ಗಾತ್ರದ ಮೊಸಳೆ ಕಾಣಿಸಿಕೊಂಡಿದೆ.
ಮೊಸಳೆಯನ್ನು ಕಂಡು ಭಯಭೀತರಾದ ಯುವತಿ ಒಮ್ಮೆಲೆ ಎಚ್ಚರ ತಪ್ಪಿ ಬಿದ್ದಿದ್ದಾಳೆ. ಇದರಿಂದ ಪ್ರವಾಸಕ್ಕೆ ಬಂದ ಕುಟುಂಬದವರು ತೀವ್ರ ಆತಂಕದ ಒಳಗಾದ ಘಟನೆಯು ನಡೆಯಿತು. ನಂತರ ಯುವತಿಯನ್ನು ಅಂಕೋಲಾದ ಖಾಸಗಿ ಆಸ್ಪತ್ರೆಗೆ ತರುವಷ್ಟರಲ್ಲಿ ಯುವತಿ ಚೇತರಿಸಿಕೊಂಡಿದ್ದಾಳೆ.
ಹೊಸಕಂಬಿ ಬೀಜ್ನ ಹಿನ್ನೀರು ಪ್ರದೇಶದಲ್ಲಿ ಮೊಸಳೆ ಪ್ರತ್ಯಕ್ಷವಾಗಿದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಇಲ್ಲಿನ ನದಿಯಲ್ಲಿ ಮೀನು ಹಿಡಿಯಲು, ಈಜಾಡಲು ಹಾಗೂ ಇಲ್ಲಿ ಹೆರಳವಾಗಿ ಸಿಗುವ ನೀಲೆಕಲ್ಲು ತೆಗೆಯಲು ಇಲ್ಲಿ ನೆರೆ ಹೊರೆಯ ಗ್ರಾಮದ ಜನರು ಆಗಮಿಸುತ್ತಾರೆ. ಈಗ ಇಲ್ಲಿ ಬೃಹತ ಮೊಸಳೆಯ ಕಂಡು ಬಂದಿದ್ದರಿ0ದ ಜನ-ಜಾನುವಾರುಗಳು ನದಿ ತೀರಕ್ಕೆ ತೆರಳಲು ಆತಂಕಪಡುವ0ತಾಗಿದೆ.
ಸ0ಬ0ಧಪಟ್ಟ ಇಲಾಖೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಿ ಇಲ್ಲಿ ವಾಸವಾಗಿರುವ ಮೊಸಳೆಯನ್ನು ಬೆರೆಡೆ ಸಾಗಿಸಲು ಕ್ರಮ ಕೈಗೊಳ್ಳುವಂತಾಗಬೇಕು ಎಂದು ಹೊಸಕಂಬಿ ನಾಗರಿಕರು ಆಗ್ರಹಿಸಿದ್ದಾರೆ.
