ಅಂಕೋಲಾ  : ತಾಲೂಕಿನ ಶಿರಕುಳಿಯ ಅಂಗನವಾಡಿಯ ಎದುರು ಸಾರ್ವಜನಿಕ ಸ್ಥಳದಲ್ಲಿ ಮಟಕಾ ಆಟ ನಡೆಸುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಇಲ್ಲಿನ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

        ಶಿರಕುಳಿಯ ದಿನೇಶ ದಯಾನಂದ ನಾಯ್ಕ 44 ವರ್ಷ ಇವರ ಮೇಲೆ ಮಟಕಾ ಆಡಿಸುತ್ತಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.

ಈತನು ಶಿರಕುಳಿಯ ಅಂಗನವಾಡಿಯ ಎದುರು ಸಾರ್ವಜನಿಕ ಸ್ಥಳದಲ್ಲಿ ಪಿಎಸೈ ಉದ್ದಪ್ಪ ಧರೆಪ್ಪನವರ್ ದಾಳಿ ಅವರು ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ ಪೊಲೀಸರು ೮೫೦ ರೂ ನಗದು ಹಣ ಮತ್ತು ಮಟಕಾ ಆಡಲು ಬಳಸಿದ್ದ ಪರಿಕರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪಿಎಸೈ ಸುಹಾಸ್ ಆರ್ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

ಪ್ರಕರಣದ ತನಿಖೆ ಕೈಗೊಂಡ ಪೊಲೀಸರಿಗೆ ಪುರಸಭೆಯ ಮಾಜಿ ಸದಸ್ಯರೊಬ್ಬರಿಗೆ ದಿನೇಶ ದಯಾನಂದ ನಾಯ್ಕ ಅವರು ಮಟ್ಕಾ ಚೀಟಿ ನೀಡಿತ್ತಿರುವ ಬಗ್ಗೆ ಅನುಮಾನದ ಹಿನ್ನಲೆಯಲ್ಲಿ ವಿಚಾರಣೆ ಕೈಗೊಂಡಿದ್ದಾರೆ. ಈ ಮಟ್ಕಾ ಬುಕ್ಕಿ ಅಂಕೋಲಾದ ಎಲ್ಲ ಪ್ರದೇಶದ ಮೇಲೂ ತನ್ನ ವಸಾಹತು ಸಾಧಿಸಲು ಹೊರಟಿರುವದು ಕೂಡ ತಾಲೂಕಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪೊಲೀಸರು ದೋಷಾರೋಪಣ ಪಟ್ಟಿಯಲ್ಲಿ ಪುರಸಭೆಯ ಮಾಜಿ ಸದಸ್ಯನ ಹೆಸರು ಮಾಯಾವಾಗುತ್ತದೊ ಅಥವಾ ಬಲಿಕಾ ಬಕ್ರಾ ದಿನೇಶ ದಯಾನಂದ ನಾಯ್ಕ ಅಷ್ಟೇ ಉಳಿಯುತ್ತಾನೋ ಎಂಬುದು ಪೊಲೀಸ ಕಾರ್ಯ ದಕ್ಷತೆಯ ಮೇಲೆ ನಿಂತಿದೆ.