TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಪೊಲೀಸರ ಮಹತ್ತರ ಸೇವೆಯ ಹಿಂದೆ ಪೊಲೀಸ ಕುಟುಂಬದ ತ್ಯಾಗವು ಮಹತ್ವದಾಗಿದೆ : ಸಂತೋಷ ಶೆಟ್ಟಿ.

Jan 2, 2024 | Uncategorized |

ಪೊಲೀಸರ ಮಹತ್ತರ ಸೇವೆಯ ಹಿಂದೆ ಪೊಲೀಸ ಕುಟುಂಬದ ತ್ಯಾಗವು ಮಹತ್ವದಾಗಿದೆ : ಸಂತೋಷ ಶೆಟ್ಟಿ.

ಅಂಕೋಲÁ : ಪೊಲೀಸರು ಒತ್ತಡ ಮಧ್ಯೆ ಕಾರ್ಯ ನಿರ್ವಹಿಸಿ ಈ ಸಮಾಜಕ್ಕೆ ಕೊಡುಗೆ ನೀಡುತ್ತಾರೆ. ಈ ಸೇವೆಯ ಹಿಂದೆ ಪೊಲೀಸರ ಕುಟುಂಬದ ತ್ಯಾಗವು ಮಹತ್ವದಾಗಿದೆ ಎಂದು ಅಂಕೋಲಾ ಠಾಣೆಯ ಸಿಪಿಐ ಸಂತೋಷ ಶೆಟ್ಟಿ ಹೇಳಿದರು.

ಅವರು ಪಟ್ಟಣದ ಪೊಲೀಸ್ ವಸತಿಗೃಹದ ರಾಮ ಮಂದಿರದ ಸಭಾಭವನದಲ್ಲಿ ಹಮ್ಮಿಕೊಂಡ “ ಪೊಲೀಸ್ ಸಾಂಸ್ಕೃತಿಕ ಕೂಟ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಂಕೋಲಾ ಪೊಲೀಸ್ ಠಾಣೆಯ ಸಿಬ್ಬಂದಿಗಳ ಪರಿಶ್ರಮದದ ಫಲವಾಗಿ ನಾವು ಅನೇಕ ಕ್ಲೀಷ್ಠಕರ ಪ್ರಕರಣಗಳನ್ನು ಭೇಧಿಸಿ ನಾಗರಿಕರ ನೆಮ್ಮದಿಗೆ ಕಾರಣರಾಗಿದ್ದೇವೆ ಎಂಬ ಆತ್ಮ ತೃಪ್ತಿ ಇದೆ. ತಮ್ಮ ಬದುಕನ್ನು ಒತ್ತಡದಲ್ಲಿ ಹಾಕಿಕೊಂಡು ಪೊಲೀಸ್ ಇಲಾಖೆಗೆ ಸೇವೆ ನೀಡುತ್ತಿರುವ ನಮ್ಮ ಸಿಬ್ಬಂದಿಗಳ ಕಾರ್ಯ ವೈಖರಿ ಮಾದರಿಯಾಗಿದೆ ಎಂದರು.

ಪಿಎಸೈ ಉದ್ದಪ್ಪ ಧರೆಪ್ಪನವರ ಮಾತನಾಡಿ ದಿನದ ೨೪ ಘಂಟೆಯೂ ಸಮಾಜದ ರಕ್ಷಣೆಗೆ ಕಣ್ಣಾಗಿ ದುಡಿಯುವ ಪೋಲಿಸರಿಗೆ ಅನ್ಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಹೊಸ ವರ್ಷದ ಸಂಭ್ರಮದಂದು ಸಾಂಸ್ಕೃತಿಕ ಕೂಟವನ್ನು ಹಮ್ಮಿಕೊಂಡು ಹೊಸ ಚೈತನ್ಯ ತುಂಬುವನ್ನು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.

ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ ಮಾತನಾಡಿ, ಪೊಲೀಸರು ತಮ್ಮ ವಿಶ್ರಾಂತ ರಹಿತ ಕರ್ತವ್ಯದಿಂದಾಗಿ ತಮ್ಮ ಖಾಸಗಿ ಬದುಕನ್ನ ಕಳೆದುಕೊಳ್ಳುತ್ತಿರವದು ಆತಂಕದ ಸಂಗತಿಯಾಗಿದೆ ಎಂದರು.

ಪಿಎಸೈ ಸುನೀಲ ಹುಲ್ಲೋಳ್ಳಿ, ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ ಶೆಟ್ಟಿ, ಪತ್ರಕರರ್ತರಾದ ಸುಭಾಷ ಕಾರೇಬೈಲ, ನಾಗರಾಜ್ ಜಾಂಬಳೇಕರ, ಅಕ್ಷಯ ನಾಯ್ಕ, ದಿನಕರ ನಾಯ್ಕ. ಅಲಗೇರಿ, ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ವ್ಹಾಯ್ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.

ಹವಾಲ್ದಾರ ಚಂದ್ರಕಾಂತ ಗೌಡ ನಿರೂಸಿದರು. ಹವಾಲ್ದಾರ ಸತೀಶ ಅಂಬಿಗ ಸ್ವಾಗತಿಸಿದರು. ಆರಕ್ಷಕ ಸಿಬ್ಬಂದಿ ಪರಮೇಶ ಕಂಟೆಪ್ಪನವರ ವಂದಿಸಿದರು, ಪೊಲೀಸ್ ಸಿಬ್ಬಂದಿಗಳು, ಕುಟುಂಬದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಂತರ ಆರಕ್ಷಕರ ಕುಟುಂಬದ ಸಾಂಸ್ಕ್ರತಿಕ ಮನರಂಜನೆ ಕಾರ್ಯಕ್ರಮ ನಡೆಯಿತು.

Share:

Rate:

Previousಹೆಲ್ಮಟ್ ಧರಿಸದ ಬೈಕ್ ಸವಾರರಿಗೆ ಗುಲಾಬಿ ಹೂ ನೀಡಿ ಜಾಗೃತಿ ಮೂಡಿಸಿದ ಅಂಕೋಲಾ ಪೊಲೀಸರು
Nextವೃದ್ದ ದಂಪತಿಗಳ ಭೀಕರ ಕೊಲೆಗೈದ ಸುಖೇಶ ನಾಯಕ ಗ್ಯಾಂಗ್‌ಗೆ ಗಲ್ಲೋ..? ಅಥವಾ ಜೀವಾವಧಿಯೋ..? ಜನವರಿ 9 ರಂದು ತಿರ್ಪು

Related Posts

ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಮೂಲಭೂತ ಸೌಕರ್ಯ ವಂಚಿತ ಕುಗ್ರಾಮಗಳಿಗೆ ರಸ್ತೆ ಸಂಪರ್ಕಕ್ಕೆ ಸೇತುವೆ ಮಾಡಿ ಕೊಡಲು ಶಾಸಕ ಸೈಲ್ ಗೆ ಮನವಿ

ಹಟ್ಟಿಕೇರಿ ಗ್ರಾಪಂ ವ್ಯಾಪ್ತಿಯ ಮೂಲಭೂತ ಸೌಕರ್ಯ ವಂಚಿತ ಕುಗ್ರಾಮಗಳಿಗೆ ರಸ್ತೆ ಸಂಪರ್ಕಕ್ಕೆ ಸೇತುವೆ ಮಾಡಿ ಕೊಡಲು ಶಾಸಕ ಸೈಲ್ ಗೆ ಮನವಿ

July 23, 2023

ಅಲಗೇರಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಸಂತೋಷ್ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಶೋಭಾ ಗೋವಿಂದ ಆಗೇರ ಜಯಭೇರಿ. ಕಾಂಗ್ರೆಸ್ ಗೆ ಅಭೂತಪೂರ್ವ ಮುನ್ನಡೆ: ಸೈಲ್ ಶುಭಾಶಯ

ಅಲಗೇರಿ ಗ್ರಾಮ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ಸಂತೋಷ್ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ಶೋಭಾ ಗೋವಿಂದ ಆಗೇರ ಜಯಭೇರಿ. ಕಾಂಗ್ರೆಸ್ ಗೆ ಅಭೂತಪೂರ್ವ ಮುನ್ನಡೆ: ಸೈಲ್ ಶುಭಾಶಯ

August 9, 2023

ಅಂಕೋಲಾದಲ್ಲಿ ಬಿಂದಾಸ್ ಆಗಿ ತೆರದುಕೊಂಡ ಕುಟಕುಟಿ

ಅಂಕೋಲಾದಲ್ಲಿ ಬಿಂದಾಸ್ ಆಗಿ ತೆರದುಕೊಂಡ ಕುಟಕುಟಿ

January 6, 2025

ಬೇಲೆಕೇರಿ ಬಂದರಿನಲ್ಲಿ ಮಟ್ಕಾ ಆಡಿಸುತ್ತಿದ್ದವನ ಬಂಧನ

ಬೇಲೆಕೇರಿ ಬಂದರಿನಲ್ಲಿ ಮಟ್ಕಾ ಆಡಿಸುತ್ತಿದ್ದವನ ಬಂಧನ

January 31, 2024

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
    ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
  • ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
    ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
  • ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
    ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
  • ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
    ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
  • ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.
    ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy