ರಾಘು ಕಾಕರಮಠ.
ಅಂಕೋಲಾ : ಇಲ್ಲಿಯ ಪೊಲೀಸ್ ಠಾಣೆಯ ನೂತನ ಪೊಲೀಸ್ ನೀರಿಕ್ಷಕ ( ಸಿಪಿಐ ) ಆಗಿ ಶ್ರೀಕಾಂತ ತೋಟಗಿ ಅವರನ್ನು ನೇಮಕ ಮಾಡಿ ಕರ್ನಾಟಕ ಸರಕಾರ ಆದೇಶ ಮಾಡಿದೆ.
ಕಡಕ್ ಅಧಿಕಾರಿಯಾಗಿ ಗುರುತಿಕೊಂಡ ಶ್ರೀಕಾಂತ ಎಫ್ ತೌಟಗಿ ಅವರು ಜನಸ್ನೇಹಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಖ್ಯಾತಿ ಇವರದ್ದಾಗಿದೆ.
2003 ರ ಬ್ಯಾಚಿನಲ್ಲಿ ಪಿಎಸೈ ಆಗಿ ಕರ್ತವ್ಯಕ್ಕೆ ನೇಮಕಗೊಂಡ ಶ್ರೀಕಾಂತ ತೋಟಗಿ ಅವರು ಹುಬ್ಬಳ್ಳಿ- ದಾರವಾಡ, ಬೈಲಹೊಂಗಲ, ಕಿತ್ತೂರು, ಬೆಂಗಳೂರಿನ ಅಶೋಕನಗರದಲ್ಲಿ ಸಿಪಿಐ ಆಗಿ ಕರ್ತವ್ಯ ನಿರ್ವಹಿಸಿ, ಕರ್ತವ್ಯಗೈದ ಪ್ರತಿ ಠಾಣೆಗಳಲ್ಲೂ ಸಿಬ್ಬಂದಿಗಳಲ್ಲಿ ಮತ್ತು ನಾಗರಿಕರಲ್ಲಿ ಉತ್ತಮ ಭಾಂಧವ್ಯ ರೂಪಿಸಿ, ಉತ್ತಮ ಕೆಲಸ ರೂಪಿಸಿದ ಹೆಗ್ಗಳಿಕೆಯ ಕನ್ನಡಿಯಾಗಿದ್ದರು ಎಂಬ ಆತ್ಮೀಯ ಮಾತು ಸಾರ್ವಜನಿಕ ವಲಯದಲ್ಲಿದೆ.
ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಂತೋಷ ಶೆಟ್ಟಿ ಅವರು ಚಿಕ್ಕಮಂಗಳೂರಿನ ತರಿಕೆರೆ ಟೌನ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಸ್ನೇಹಜೀವಿಯಾಗಿ ಗುರುತಿಸಿಕೊಂಡಿದ್ದ ಸಂತೋಷ ಶೆಟ್ಟಿ ಅವರು ಅಂಕೋಲಾದಲ್ಲಿ ಸಾಮರಸ್ಯಕ್ಕೆ ಪ್ರತೀಕವಾಗಿ ಕರ್ತವ್ಯ ನಿರ್ವಹಿಸಿದ್ದರು. ಎಷ್ಟೋ ಪ್ರಕರಣಗಳನ್ನು ಮಾನವೀಯ ನೆಲೆಯಲ್ಲಿ ತಮ್ಮ ಕಾನೂನಿನ ಇತಿಮಿತಿಯಲ್ಲೆ ಬಗೆಹರಿಸಿ ಕೊಟ್ಟ ಸಂತೋಷ ಶೆಟ್ಟಿ ಅಂಕೋಲೆಯ ಜನರ ಪ್ರೀತಿಗೆ ಪಾತ್ರರಾಗಿದ್ದರು.
ಇತ್ತೀಚಿಗೆ ಅಯೋಧ್ಯೆಯ ರಾಮ ಮಂದಿರದ ವಿಚಾರವಾಗಿ ವಿವಾಧಿತ ಪೋಸ್ಟ್ ಮಾಡಿದ ರಾದ್ದಾಂತದಲ್ಲಿ ಅಂಕೋಲಾದಲ್ಲಿ ಹಿಂದೂ- ಮುಸ್ಲಿಂ ಭಾಂದವರ ನಡುವೆ ಭಾರಿ ಸಂಘರ್ಷಕ್ಕೆ ಕಾರಣವಾಗುವ ಸಂದರ್ಭವು ಸೃಷ್ಠಿಯಾಗಿತ್ತು. ಅದನ್ನು ತನ್ನದೇ ಆದ ಪೊಲೀಸಿಂಗ್ ಸ್ಟೆöÊಲನಲ್ಲಿ, ಅತ್ಯಂತ ನಾಚೂಕಾಗಿ ಪ್ರಕರಣವನ್ನು ಬಗೆಹರಿಸಿ ಅಂಕೋಲಾದಲ್ಲಿ ಸೌಹಾರ್ದತೆಯ ಸಾಮರಸ್ಯಕ್ಕೆ ಸಂತೋಷ ಶೆಟ್ಟಿ ಕೊಟ್ಟ ಕೊಡುವೆ ಸ್ಮರಿಸುವಂತಾಗಿದೆ.
ಒಟ್ಟಾರೆ ಸಂತೋಷ ಶೆಟ್ಟಿ ಅವರು ಅಂಕೋಲಾದ ನೆಲದಲ್ಲಿ ಎರಡುವರೆ ವರ್ಷ ಉತ್ತಮವಾಗಿ ಕಾರ್ಯ ನಿರ್ವಹಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
