ಅಂಕೋಲಾ : ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಮತ್ತೆ ಪ್ರಧಾನಿಯಾಗಬೇಕು ಎನ್ನುವ ಕಾರಣಕ್ಕಾಗಿ ನಮೋ ಬ್ರಿಗೇಡ್ ತಂಡ ಫೆ 10 ರ ಶನಿವಾರದಂದು ನಗರದ ಪಿ ಎಮ್ ಹೈಸ್ಕೂಲ ಆವರಣದಲ್ಲಿ ಸಂಜೆ 4.30 ಗಂಟೆಗೆ ನಮೋ ಭಾರತ್ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಅಂಕೋಲಾ ತಾಲೂಕ ನಮೋ ಬ್ರಿಗೇಡ್ನ ಸಂಚಾಲಕ ಸಂದೀಪ ಗಾಂವಕರ ಹೇಳಿದರು.

ಅವರು ದೈವಜ್ಞ ಸಭಾಭವನದಲ್ಲಿ ಕರೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿ ಚಿಂತಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.
ನಮೋ ಬ್ರಿಗೇಡ್ ತಂಡದ ಜಿಲ್ಲಾ ಸಂಚಾಲಕ ಅಣ್ಣಪ್ಪ ನಾಯ್ಕ ಮಾತನಾಡಿ ಕಾರ್ಯಕ್ರಮದಲ್ಲಿ ವಿಶೇಷವಾಗಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮೋದಿ ಪ್ರಧಾನಿಯಾಗಿ ಹತ್ತು ವರ್ಷಗಳಾಗುತ್ತ ಬಂದರೂ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವುದು ಪ್ರತಿಯೊಬ್ಬರ ಆಶಯವಾಗಿದೆ. ಅದರ ಅಂಗವಾಗಿ ರಾಜ್ಯಾಧ್ಯಂತ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ದೇಶವನ್ನು ಬಲಿಷ್ಠವಾಗಿ ಕಟ್ಟಲು ಮೋದಿ ಅವರ ನಾಯಕತ್ವ ಅಗತ್ಯವಿದೆ. ಭಾರತದ ಭಾಗ್ಯ ವಿಧಾತನ ಸಾಧನೆ ತಿಳಿಸಲು ನಮೋ ಬ್ರಿಗೇಡ್ ತಂಡ ರಾಜ್ಯದಾದ್ಯಂತ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಂಕೋಲಾದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪತ್ರಕರ್ತ ರಾಘು ಕಾಕರಮಠ, ಅವರ್ಸಾದ ದಿನೇಶ ಮೇತ್ರಿ, ಸಂಜಯ ತಳೇಕರ, ಸುರೇಶ ವೆರ್ಣೇಕರ ಅಲಗೇರಿ ಹಾಗೂ ಪುರುಷೋತ್ತಮ ನಾಯಕ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ಪ್ರಮುಖರಾದ ಗಣೇಶ ಕುಡ್ತಲಕರ ಹಾಗೂ ನಾಗರಾಜ ಐಗಳ ಮಾತನಾಡಿದರು ರಾಘವೇಂದ್ರ ಗಾಂವಕರ ಸ್ವಾಗತಿಸಿದರು. ರಾಘು ನಾಯ್ಕ್ ವಂದಿಸಿದರು. ಪ್ರಮುಖರಾದ ಪ್ರವೀಣ ನಾಯ್ಕ, ಸುರೇಶ ಗೌಡ, ಸಂತೋಷ ನಾಯ್ಕ, ಪವನ ಗಾಂವಕರ, ನಾಗರಾಜ ನಾಯ್ಕ್, ಸುಬ್ರಮಣ್ಯ ರೇವಣಕರ, ಸುಪ್ರೀತ ಗಾಂವಕರ, ಕರಣ ನಾಯ್ಕ, ಪ್ರವೀಣ ಗೌಡ, ವಿನಾಯಕ ಗುಡಿಗಾರ, ಗಜಾನನ ನಾಯ್ಕ್,ಪುಷ್ಪಾ ಶೆಟ್ಟಿ,ಸುಲಕ್ಷಾ ಭೋ ಸೇರಿದಂತೆ ನಮೋ ಬ್ರಿಗೇಡನ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು.
