TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಫೆ 10 ರಂದು ಅಂಕೋಲಾಕ್ಕೆ ಚಕ್ರವರ್ತಿ ಸೂಲಿಬೆಲೆ

Feb 9, 2024 | ವಿಶೇಷ |

ಫೆ 10 ರಂದು ಅಂಕೋಲಾಕ್ಕೆ ಚಕ್ರವರ್ತಿ ಸೂಲಿಬೆಲೆ

ಅಂಕೋಲಾ : ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಮತ್ತೆ ಪ್ರಧಾನಿಯಾಗಬೇಕು ಎನ್ನುವ ಕಾರಣಕ್ಕಾಗಿ ನಮೋ ಬ್ರಿಗೇಡ್ ತಂಡ ಫೆ 10 ರ ಶನಿವಾರದಂದು ನಗರದ ಪಿ ಎಮ್ ಹೈಸ್ಕೂಲ ಆವರಣದಲ್ಲಿ ಸಂಜೆ 4.30 ಗಂಟೆಗೆ ನಮೋ ಭಾರತ್ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಅಂಕೋಲಾ ತಾಲೂಕ ನಮೋ ಬ್ರಿಗೇಡ್‌ನ ಸಂಚಾಲಕ ಸಂದೀಪ ಗಾಂವಕರ ಹೇಳಿದರು.

ಅವರು ದೈವಜ್ಞ ಸಭಾಭವನದಲ್ಲಿ ಕರೆದ ಪೂರ್ವಭಾವಿ ಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿ ಚಿಂತಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.

ನಮೋ ಬ್ರಿಗೇಡ್ ತಂಡದ ಜಿಲ್ಲಾ ಸಂಚಾಲಕ ಅಣ್ಣಪ್ಪ ನಾಯ್ಕ ಮಾತನಾಡಿ ಕಾರ್ಯಕ್ರಮದಲ್ಲಿ ವಿಶೇಷವಾಗಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮೋದಿ ಪ್ರಧಾನಿಯಾಗಿ ಹತ್ತು ವರ್ಷಗಳಾಗುತ್ತ ಬಂದರೂ ಅವರ ಜನಪ್ರಿಯತೆ ಕಡಿಮೆಯಾಗಿಲ್ಲ. ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವುದು ಪ್ರತಿಯೊಬ್ಬರ ಆಶಯವಾಗಿದೆ. ಅದರ ಅಂಗವಾಗಿ ರಾಜ್ಯಾಧ್ಯಂತ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ದೇಶವನ್ನು ಬಲಿಷ್ಠವಾಗಿ ಕಟ್ಟಲು ಮೋದಿ ಅವರ ನಾಯಕತ್ವ ಅಗತ್ಯವಿದೆ. ಭಾರತದ ಭಾಗ್ಯ ವಿಧಾತನ ಸಾಧನೆ ತಿಳಿಸಲು ನಮೋ ಬ್ರಿಗೇಡ್ ತಂಡ ರಾಜ್ಯದಾದ್ಯಂತ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಂಕೋಲಾದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪತ್ರಕರ್ತ ರಾಘು ಕಾಕರಮಠ, ಅವರ್ಸಾದ ದಿನೇಶ ಮೇತ್ರಿ, ಸಂಜಯ ತಳೇಕರ, ಸುರೇಶ ವೆರ್ಣೇಕರ ಅಲಗೇರಿ ಹಾಗೂ ಪುರುಷೋತ್ತಮ ನಾಯಕ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಪ್ರಮುಖರಾದ ಗಣೇಶ ಕುಡ್ತಲಕರ ಹಾಗೂ ನಾಗರಾಜ ಐಗಳ ಮಾತನಾಡಿದರು ರಾಘವೇಂದ್ರ ಗಾಂವಕರ ಸ್ವಾಗತಿಸಿದರು. ರಾಘು ನಾಯ್ಕ್ ವಂದಿಸಿದರು. ಪ್ರಮುಖರಾದ ಪ್ರವೀಣ ನಾಯ್ಕ, ಸುರೇಶ ಗೌಡ, ಸಂತೋಷ ನಾಯ್ಕ, ಪವನ ಗಾಂವಕರ, ನಾಗರಾಜ ನಾಯ್ಕ್, ಸುಬ್ರಮಣ್ಯ ರೇವಣಕರ, ಸುಪ್ರೀತ ಗಾಂವಕರ, ಕರಣ ನಾಯ್ಕ, ಪ್ರವೀಣ ಗೌಡ, ವಿನಾಯಕ ಗುಡಿಗಾರ, ಗಜಾನನ ನಾಯ್ಕ್,ಪುಷ್ಪಾ ಶೆಟ್ಟಿ,ಸುಲಕ್ಷಾ ಭೋ ಸೇರಿದಂತೆ ನಮೋ ಬ್ರಿಗೇಡನ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು.

Share:

Rate:

Previousಗಂಡನ ತಮ್ಮನಿಂದ ದೈಹಿಕವಾಗಿ ಹಲ್ಲೆ ಹಾಗೂ ಬಟ್ಟೆ ಹರಿದು ಮಾನಕ್ಕೆ ಕುಂದು : ಮಹಿಳೆಯಿಂದ ದೂರು
Nextಫೆ. 15 ರಂದು ಕೆನರಾ ಬ್ಯಾಂಕ ಎದುರು ಮಹಿಳೆಯರಿಂದ ಪೊರಕೆ ಹಿಡಿದು ಪ್ರತಿಭಟನೆ

Related Posts

ಹಾಸ್ಯ ಕಲಾವಿದ ಅಲಗೇರಿಯ ಮಂಜುಗೆ ಹಾವು ಕಡಿತ : ಪ್ರಾಣಾಪಾಯದಿಂದ ಪಾರು

ಹಾಸ್ಯ ಕಲಾವಿದ ಅಲಗೇರಿಯ ಮಂಜುಗೆ ಹಾವು ಕಡಿತ : ಪ್ರಾಣಾಪಾಯದಿಂದ ಪಾರು

August 28, 2023

ಮಟ್ಕಾ ತೆವಲಿಗೆ ಪತ್ನಿಯ ಮಾಂಗಲ್ಯ ಸರ ಮಾರಿದ ಭೂಪ್..!

ಮಟ್ಕಾ ತೆವಲಿಗೆ ಪತ್ನಿಯ ಮಾಂಗಲ್ಯ ಸರ ಮಾರಿದ ಭೂಪ್..!

August 13, 2024

ನಾಪತ್ತೆಯಾದ ಅಧಿಕಾರಿಗಳು : ರದ್ದಾದ ಹಟ್ಟಿಕೇರಿ ಗ್ರಾಪಂನ ಗ್ರಾಮ ಸಭೆ

ನಾಪತ್ತೆಯಾದ ಅಧಿಕಾರಿಗಳು : ರದ್ದಾದ ಹಟ್ಟಿಕೇರಿ ಗ್ರಾಪಂನ ಗ್ರಾಮ ಸಭೆ

November 28, 2023

ಗಣೇಶ ಹಬ್ಬದ ಹಿನ್ನಲೆ ಮದ್ಯ ಮಾರಾಟಕ್ಕೆ ನಿಷೇಧ :

ಗಣೇಶ ಹಬ್ಬದ ಹಿನ್ನಲೆ ಮದ್ಯ ಮಾರಾಟಕ್ಕೆ ನಿಷೇಧ :

September 18, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
    ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
  • ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
    ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
  • ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
    ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
  • ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
    ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
  • ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.
    ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy