ಅಂಕೋಲಾ. ಸ್ತಿçà ಶಕ್ತಿಗಳಿಗೆ ಸಾಲ ನೀಡಿ, ಅದನ್ನು ಸಂಘದವರು ಮರು ಪಾವತಿ ಮಾಡಿದರೂ ಸಹ, ಅದನ್ನು ದಾಖಲೆಗಳಲ್ಲಿ ನಮೂದಿಸದೇ ಕೆನರಾ ಬ್ಯಾಂಕನಿAದ ನಮಗೆ ಮೋಸಕ್ಕೆ ಒಳಗಾಗಿದ್ದೇವೆ. ಈ ಹಿನ್ನಲೆಯಲ್ಲಿ ವಂಚನೆಗೆ ಒಳಗಾದ ಸ್ತಿçà ಶಕ್ತಿ ಸಂಘಗಳ ನೂರಾರು ಮಹಿಳೆಯರು ಪೊರಕೆ ಹಿಡಿದು ಫೆ. 15 ರ ಗುರುವಾರದಂದು ಕೆನರಾ (ಸಿಂಡಿಕೇಟ್) ಬ್ಯಾಂಕ್ಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವದು ಎಂದು ವಂಚನೆಗೆ ಒಳಗಾದ ಸ್ತಿçà ಶಕ್ತಿ ಸಂಘಗಳ ಪ್ರಮುಖರು ತಿಳಿಸಿದ್ದಾರೆ.
ಸುಮಾರು 75 ಸ್ವ–ಸಹಾಯಗಳಿಗೆ ಪಟ್ಟಣದ ಸಿಂಡಿಕೇಟ್ (ಕೆನರಾ) ಬ್ಯಾಂಕ್ನಲ್ಲಿ ಅನ್ಯಾಯವಾಗಿದೆ. ಕಳೆದ 2023 ರ ಜನವರಿಯಂದು ಈ ಪ್ರಕರಣ ಬೆಳಕಿಗೆ ಬಂದಿತ್ತು. ನಮಗಾದ ಅನ್ಯಾಯವನ್ನು ಸರಿ ಪಡಿಸಿಕೊಡಿ ಎಂದು ಕಾರವಾರದ ರಿಜನಲ ಕಛೇರಿಗೆ ತೆರಳಿ ನಾವು ಪ್ರತಿಭಟಿಸಿದ್ದೇವು. ಆದರೆ ಇನ್ನು ತನಕ ಈ ಪ್ರಕರಣದಲ್ಲಿ ಮುಖ್ಯವಾಗಿ ಭಾಗಿಯಾದ ವ್ಯವಸ್ಥಾಪಕ ವೆಂಕಟೇಷ ಮಜ್ಜಿಗುಡ್ಡಾ ಅವರ ಮೇಲೆ ಇನ್ನು ತನಕ ಬ್ಯಾಂಕಿನಿAದ ಪೊಲೀಸ್ ಎ.ಎಫ್.ಆರ್ ದಾಖಲಿಸದೆ ಜಾಣ ಮೌನ ವಹಿಸಿದ್ದಾರೆ. ಇದರಿಂದ ನಮಗೆ ತೀವ್ರ ತೊಂದರೆ ಆಗಿದೆ.
ವ್ಯವಸ್ಥಾಪಕ ವೆಂಕಟೇಷ ಮಜ್ಜಿಗುಡ್ಡಾ ಅವರನ್ನು ಕೇವಲ ಅಮಾನತ್ ಮಾಡಲಾಗಿದೆ. ಆದರೆ ಇನ್ನು ತನಕ ಪೊಲೀಸ್ ಪ್ರಕರಣ ಬ್ಯಾಂಕಿನಿ0ದ ದಾಖಲಿಸಿಲ್ಲ. ಕೆನರಾ ಬ್ಯಾಂಕ ಈ ಬಗ್ಗೆ ನೀರ್ಲಕ್ಷ ಧೋರಣೆ ತಳೆದಿರುವದು ನಮ್ಮಲ್ಲಿ ಆತಂಕ ಹಾಗೂ ಅಸಮಾಧಾನವನ್ನು ತಂದಿದೆ.
ಕೆನರಾ ಬ್ಯಾಂಕಿನ ವ್ಯವಸ್ಥಾಪಕ ಮಜ್ಜಿಗಡ್ಡಾ ಅವರು ಹಣ ದುರಪಯೋಗ ಪಡಿಸಿದ ಬಗ್ಗೆ ಇಲಾಖಾ ತನಿಖೆಯಿಂದ ದೃಡಪಟ್ಟಿದೆ. ಆದರೆ ಬ್ಯಾಂಕಿನಿAದ ನಮಗೆ ಮಾತ್ರ ಇನ್ನು ತನಕ ನ್ಯಾಯ ಸಿಕ್ಕಿಲ್ಲಾ. ನಾವು ನಮ್ಮ ಜೀವನಕ್ಕಾಗಿಯೋ ಅಥವಾ ನಮ್ಮ ಮಕ್ಕಳ ಶಿಕ್ಷಣಕ್ಕಾಗಿ ಬೇರಡೆ ಸಾಲ ಮಾಡಲು ತೆರಳಿದರೆ ಲಕ್ಷಾಂತರ ರೂಪಾಯಿ ಸಾಲ ಇರುವದಾಗಿ ನಮ್ಮ ದಾಖಲೆಗಳಲ್ಲಿ ತೋರಿಸುತ್ತದೆ.
ಈ ಪ್ರಕರಣವನ್ನು ಕೆನರಾ ಬ್ಯಾಂಕಿನವರು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆಯೆ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ. ಪ್ರಕರಣ ನಡೆದು ಒಂದು ವರ್ಷ ಕಳೆಯುತ್ತ ಬಂದಿದೆ. ಈ ಬಗ್ಗೆ ಕೆನರಾ ಬ್ಯಾಂಕಗೆ ಸುತ್ತಾಡಿ ಸುತ್ತಾಡಿ ಸುಸ್ತಾಗಿ ಹೋಗಿದ್ದೇನೆ. ನಮ್ಮ ಸಹನೆಯ ಕಟ್ಟೆ ಒಡೆದಿದೆ. ನಮಗೆ ಕೆನರಾ ಬ್ಯಾಂಕಿನಿAದ ಆದ ಅನ್ಯಾಯದ ವಿರುದ್ದ ಪೊರಕೆ ಹಿಡಿದು ನೂರಾರು ಮಹಿಳೆಯರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದೇವೆ.
ಈ ಎಲ್ಲಾ ವಿದ್ಯಾಮಾನದ ಅಹಿತಕರ ಘಟನೆಗೆ ಕೆನರಾ ಬ್ಯಾಂಕ ನೇರವಾಗಿ ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸುತ್ತಿದ್ದೇವೆ ಎಂದು ವಂಚನೆಗೆ ಒಳಗಾದ ಸ್ತಿçà ಶಕ್ತಿ ಸಂಘಗಳ ಪ್ರಮುಖರು ತಿಳಿಸಿದ್ದಾರೆ.
ಈ ವೇಳೆ ನಾಗಮಣಿ ಸ್ವ–ಸಹಾಯ ಸಂಘ, ಭಾರತ ಸ್ತಿçà ಶಕ್ತಿ ಸ್ವಹಾಯ ಸಂಘ, ಶ್ರೀ ಗಣೇಶ ಸ್ವ–ಸಹಾಯ ಸಂಘ, ಚಾಂದ್ ಸ್ವ–ಸಹಾಯ ಸಂಘ, ಬಿಸ್ಮಿಲ್ಲಾ ಸ್ವ–ಸಹಾಯ ಸಂಘ, ನಬಿಯಾ ಸ್ವ–ಸಹಾಯ ಸಂಘ, ಬಿಲಾಲ ಸ್ವ–ಸಹಾಯ ಸಂಘ, ಮಹಾಲಕ್ಷಿö್ಮà ಸ್ವ–ಸಹಾಯ, ನಾಗವಲ್ಲಿ ಬಿಲಾಲ ಸ್ವ–ಸಹಾಯ ಸಂಘ, ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.