TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಫೆ. 25 ರಂದು ಆಗೇರ ಸಮಾಜದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ

Feb 23, 2024 | ವಿಶೇಷ |

ಫೆ. 25 ರಂದು ಆಗೇರ ಸಮಾಜದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ

ವರದಿ : ಅವಿನಾಶ ಆಗೇರ. ಅವರ್ಸಾ.

ಅಂಕೋಲಾ : ಆಗೇರ ಸಮಾಜದ ಅಭಿವೃದ್ಧಿ ಹಾಗೂ ಸಾಮಾಜಿಕ ಜಾಗೃತಿಗಾಗಿ 30 ವರ್ಷದಿಂದ ಕ್ರೀಯಾಶೀಲವಾಗಿ ಜಿಲ್ಲಾ ಆಗೇರ ಸಮಾಜ ಅಭಿವೃದ್ಧಿ ಸಂಘ ಅನೇಕ ವಿದಾಯಕ ಕಾರ್ಯಕ್ರಮಗಳನ್ನು ಹಮ್ಮಿಕೊಳುತ್ತ ಬಂದಿದೆ. ಇದರ ಭಾಗವಾಗಿ ಫೆ. 25 ರ ಭಾನುವಾರ ಬೆಳಿಗ್ಗೆ 9-30 ಘಂಟೆಗೆ ಸ್ವಾತಂತ್ರö್ಯ ಸಂಗ್ರಾಮ ಸಭಾಭವನದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ನಿವೃತ್ತ ಪ್ರಾಚಾರ್ಯರು ಹಾಗೂ ಜಿಲ್ಲಾ ಆಗೇರ ಸಮಾಜ ಅಭಿವೃದ್ಧಿ ಸಂಘದ ಸಲಹಾ ಸಮಿತಿಯ ಅಧ್ಯಕ್ಷರು ಆದ ಡಾ. ಆರ್.ಜಿ. ಗುಂದಿ ಹೇಳಿದರು.
 

ಅವರು ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ ಆಗೇರ ಸಮಾಜವು ಶಿಕ್ಷಣ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಮುನ್ನುಗ್ಗಿ ಅಭಿವೃದ್ಧಿ ಸಾಧಿಸುತ್ತಿರುವದು ಆಶಾದಾಯಕ ಬೆಳವಣೆಗೆಯಾಗಿದೆ. ಇದಕ್ಕೆ ಪೂರಕವಾಗಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು 16 ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮೆರೆದ 40 ಸಾಧಕರನ್ನು ಗೌರವಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮ ನಡೆಯಲಿದೆ.

ಕಾರ್ಯದಿಂದಾಗಿ ಸಮಾಜದ ಅಭಿವೃದ್ಧಿಯ ಅವಲೋಕನವು ತೆರೆದುಕೊಳ್ಳಲಿದೆ. ಅಲ್ಲದೆ ಆಗೇರ ಸಮಾಜದವರು ಪ್ರಸ್ತುತವಾಗಿ ಸ್ವಾವಲಂಬಿಯಾಗಿ ಬದುಕು ಕಾಣುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಆಗೇರ ಸಮಾಜದ ಭಾಂದವರಿAದಲೆ ಆರ್ಥಿಕ ಸಂಪನ್ಮೂಲ ಕ್ರೋಡಿಕರಿಸಿ ನಡೆಸಲಾಗುತ್ತಿದೆ. ಕಾರ್ಯಕ್ರಮವನ್ನು ಲೊಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಮು ಅರ್ಗೆಕರ ಉದ್ಘಾಟಿಸಲಿದ್ದು, ಅಭಿವೃದ್ಧಿ ಸಂಘದ ಅಧ್ಯಕ್ಷ ಗುರು ಶೇಡಗೇರಿ ಅಧ್ಯಕ್ಷತೆವಹಿಸಿದ್ದಾರೆ. ಹಾಗೆ ಇನ್ನುಳಿದ ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

ಜಿಲ್ಲಾ ಆಗೇರ ಸಮಾಜ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಜಯಶೀಲ ಆಗೇರ ಮಾತನಾಡಿ ಸಭಾ ಕಾರ್ಯಕ್ರಮದ ನಂತರ ಮೊಟ್ಟ ಮೊದಲ ಬಾರಿಗೆ ಪ್ರಯೋಗಾತ್ಮಕವಾಗಿ ಆನಂದ ಅಂಕೋಲಾ ಅವರ ಸಾರಥ್ಯದಲ್ಲಿ ಸಮಾಜದ ಉದಯೋನ್ಮುಖ ಕಲಾವಿದರಿಂದ ಯಕ್ಷ ಅರ್ಥ ವೈಭವ ನಡೆಯಲಿದೆ. ನಂತರ ಸಮೂಹ ನೃತ್ಯ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮುಖ್ಯವಾಗಿ ಜೀವಮಾನದ ಉತ್ತಮ ಸಾಧನೆಯನ್ನು ಗುರುತಿಸಿ ಡಾ.ರಾಮಕೃಷ್ಣ ಗುಂದಿ ಅವರಿಗೆ ಪುರಸ್ಕಾರ ನೀಡಿ ಗೌರವಿಲಾಗುವದು ಎಂದರು.

ಜಿಲ್ಲಾ ಆಗೇರ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ಗುರು ಶೇಡಗೇರಿ, ಕಾರ್ಯಾಧ್ಯಕ್ಷ ಎಮ್.ಬಿ. ಆಗೇರ, ಗೌರವಾಧ್ಯಕ್ಷ ಅರುಣ ಶೇಡಗೇರಿ, ಉಪಾಧ್ಯಕ್ಷರಾದ ವಾಮನ ಆಗೇರ, ಮಾರುತಿ ಆಗೇರ, ಈಶ್ವರ ವಂದಿಗೆ, ಯಾಧವ ಲಕ್ಷೆö್ಮÃಶ್ವರ, ಖಜಾಂಚಿ ಹೊನ್ನಪ್ಪ ಆಗೇರ, ಸಮಿತಿಯ ದಿಗಂಬರ ಲಕ್ಷೆö್ಮÃಶ್ವರ, ಜಗಧೀಶ್ವರ ಸೂರ್ವೆ, ರವಿ ಲಕ್ಷೆö್ಮÃಶ್ವರ, ನಾಗರಾಜ್ ಆಗೇರ, ಭರತ ಪುರಲಕ್ಕೀಭೇಣ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Share:

Rate:

Previousಅವರ್ಸಾ ದಂಡೇಭಾಗ ಶಾಲೆಗೆ ಕಿಡಿಗೇಡಿಗಳ ಕಾಟ
Nextಹೆಗ್ಗಾರದಲ್ಲಿ ಮುಕ್ತವಾಗಿ ತೆರೆದುಕೊಂಡ ಅಕ್ರಮವಾಗಿ ಡಿಸೈಲ ಹಾಗೂ ಪೆಟ್ರೋಲ ಇಳಿಸುವ ದಂಧೆ..?

Related Posts

ಕಾಂಗ್ರೆಸ್ ಗ್ಯಾರೆಂಟಿ  ಯೋಜನೆಯ  ಪ್ರಾಧಿಕಾರದ ಉಪಾಧ್ಯಕ್ಷರಾಗಿ ಪುರುಷೋತ್ತಮ  ನಾಯ್ಕ  ನೇಮಕ

ಕಾಂಗ್ರೆಸ್ ಗ್ಯಾರೆಂಟಿ  ಯೋಜನೆಯ  ಪ್ರಾಧಿಕಾರದ ಉಪಾಧ್ಯಕ್ಷರಾಗಿ ಪುರುಷೋತ್ತಮ  ನಾಯ್ಕ  ನೇಮಕ

March 11, 2024

ಹಟ್ಟಿಕೇರಿಯ ಶಾಲೆಯಲ್ಲಿ ಗೋ ಪ್ರೇಮಿಗಳ ಕುಟುಂಬದ ವತಿಯಿಂದ 77 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಭಾಷಣ ಸ್ಪರ್ಧೆ

ಹಟ್ಟಿಕೇರಿಯ ಶಾಲೆಯಲ್ಲಿ ಗೋ ಪ್ರೇಮಿಗಳ ಕುಟುಂಬದ ವತಿಯಿಂದ 77 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಭಾಷಣ ಸ್ಪರ್ಧೆ

August 14, 2023

ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘಕ್ಕೆ 44 ಲಕ್ಷ ರು. ಲಾಭ | ಸತತ 6 ವರ್ಷಗಳಿಂದ “ಎ” ಗ್ರೇಡ್ ನಲ್ಲಿರುವ ಜಿಲ್ಲೆಯ ಅತ್ಯಂತ ಹಳೆಯ ಸೊಸೈಟಿ 

ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘಕ್ಕೆ 44 ಲಕ್ಷ ರು. ಲಾಭ | ಸತತ 6 ವರ್ಷಗಳಿಂದ “ಎ” ಗ್ರೇಡ್ ನಲ್ಲಿರುವ ಜಿಲ್ಲೆಯ ಅತ್ಯಂತ ಹಳೆಯ ಸೊಸೈಟಿ 

September 26, 2023

ಲಂಡನ ವಾಸಿಗಳ ಮನ ಸೋಲಿಸಿದ ಅಂಕೋಲೆಯ ಸಿಗಡಿ ಉಪ್ಪಿನ ಕಾಯಿ

ಲಂಡನ ವಾಸಿಗಳ ಮನ ಸೋಲಿಸಿದ ಅಂಕೋಲೆಯ ಸಿಗಡಿ ಉಪ್ಪಿನ ಕಾಯಿ

December 22, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
    ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
  • ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
    ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
  • ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
    ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
  • ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ
    ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ
  • ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ  ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
    ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy