TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಅಸಭ್ಯವಾಗಿ ವರ್ತಿಸಿದ ಮಾವನ ವಿರುದ್ದ ಪ್ರಕರಣ ದಾಖಲಿಸಿದ ಸೊಸೆ

Apr 6, 2024 | ಅಪರಾಧ, ವಿಶೇಷ |

ಅಸಭ್ಯವಾಗಿ ವರ್ತಿಸಿದ ಮಾವನ ವಿರುದ್ದ ಪ್ರಕರಣ ದಾಖಲಿಸಿದ ಸೊಸೆ

ಅಸಭ್ಯವಾಗಿ ವರ್ತಿಸಿದ ಮಾವನ ವಿರುದ್ದ ಪ್ರಕರಣ ದಾಖಲಿಸಿದ ಸೊಸೆ

ಅಂಕೋಲಾ : ಮಾವನೆ ಸೊಸೆಯನ್ನ ಅಸಭ್ಯ ರೀತಿಯಲ್ಲಿ ನೋಡಿ, ತನಗೆ ಸಹಕರಿಸುವಂತೆ ಬೆದರಿಕೆ ಹಾಕಿದ ವಿಲಕ್ಷಣ ಘಟನೆಯ ಕುರಿತು ಅಂಕೋಲಾ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದೆ.

 ತಾಲೂಕಿನ ಹಿಚ್ಕಡದ ಮಹಿಳೆಯೊಬ್ಬಳು ತನ್ನ ಗಂಡ ಹಾಗೂ ಮಾವನ ವಿರುದ್ಧ ಪೊಲೀಸ್ ದೂರು ನೀಡಿದ್ದಾಳೆ. ಈ ಬಗ್ಗೆ ಪಿಎಸೈ ಜಯಶ್ರೀ ಪ್ರಭಾಕರ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

 ಎಫ್.ಐ.ಆರ್ ನಲ್ಲಿರುವ ದೂರಿನ ಸಾರಾಂಶ :

ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ 23 ವರ್ಷದ ನಿಧಿ ( ಹೆಸರು ಬದಲಾಯಿಸಲಾಗಿದೆ) ಬೆಳಗಾವಿ ಜಿಲ್ಲೆಯ ಕಾವೇರಿ ನಗರದ ಸಂಪ್ರೀತ ತಂದೆ ಕೇಶವ ನಾಯಕ ಇತನೊಂದಿಗೆ 19-03-2023 ರಂದು ಅಂಕೋಲಾ ತಾಲೂಕಾ ನಾಡವರ ಸಭಾ ಭವನದಲ್ಲಿ ಗುರು ಹಿರಿಯರ ಸಮ್ಮುಖದಲಿ ಹಿಂದೂ ಸಂಪ್ರದಾಯದAತೆ ಮದುವೆ ಮಾಡಿಕೊಂಡಿದ್ದರು.

 ಮದುವೆಯಾದ ನಂತರ ನಿಧಿ ತನ್ನ ಗಂಡನ ಮನೆಯಲ್ಲಿ ವಾಸವಾಗಿದ್ದು, ಮದುವೆಯಾದ ಹೊಸದರಲ್ಲಿ ಚೆನ್ನಾಗಿ ನೋಡಿಕೊಂಡಿದ್ದು ನಂತರ ಗಂಡ ಹಾಗೂ ಮಾವ ಸೇರಿ ಸಣ್ಣ ಪುಟ್ಟ ವಿಷಯಕ್ಕೆ ವಿನಾಕಾರಣ ಕೆಟ್ಟದಾಗಿ ಬೈದು ವಿನಾಕಾರಣ ತೊಂದರೆ ಕೊಡುತ್ತಿದ್ದರು ಎಂಬ ಆರೋಪವಿದೆ.

ಫಿರ್ಯಾದಿಯು ಬೆಳಗಾವಿಯಲಿ ತನ್ನ ಗಂಡನ ಮನೆಯಲಿ ಹಾಗೂ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾಗ ನಿಧಿಗೆ ಮಾನಸಿಕವಾಗಿ ದೈಹಿಕವಾಗಿ ಕಿರುಕುಳ ನೀಡುತ್ತಾ ಬಂದಿದ್ದಾರೆ.

ನಿಧಿ ಬೆಳಗಾವಿ ತನ್ನ ಗಂಡ ಮನೆಯಲ್ಲಿ ಒಬ್ಬಳೇ ಮಲಗಿದ್ದಾಗ ಮಾವ ಕೆಟ್ಟ ರೀತಿಯಲ್ಲಿ ನೋಡಿ ತಾನು ಹೇಳಿದಂತೆ ಕೆಳದಿದ್ದಲ್ಲಿ ಇಲ್ಲ ಸಲ್ಲದ ಆಪಾದನೆ ಮಾಡಿ ಏನಾದರೂ ಮಾಡುತ್ತೇನೆ ಅಂತಾ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

ಹಾಗೆ ತನ್ನ ತವರು ಮನೆಯಲ್ಲಿ ಬಂದು ವಾಸವಾಗಿದ್ದಾಗಲೂ 14-05-2023 ರಂದು ರಾತ್ರಿ ತನ್ನ ಗಂಡ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಮಾನಸಿಕ-ದೈಹಿಕ ಕಿರುಕುಳ ನೀಡಿದ್ದಾನೆ. ಈ ಎಲ್ಲ ಕಹಿ ಘಟನೆಯನ್ನು ಸಹಿಸಿಕೊಂಡು ಬಂದರು ನನಗೆ ಕಿರುಕುಳ ಮಾತ್ರ ನಿಂತಿರಲಿಲ್ಲ.

ಅಂಕೋಲಾದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಹೋಗಿ ನನಗಾದ ಅನ್ಯಾಯ ವಿನಂತಿಸಿಕೊAಡಾಗ, ಅಲ್ಲಿಯೂ ಸಹ ನನ್ನ ಗಂಡ ಹೊಂದಾಣಿಕೆ ಮಾಡಿಕೊಂಡಿಲ್ಲ. ಹೀಗಾಗಿ ಮನೆಯವರೊಂದಿಗೆ ಚರ್ಚಿಸಿದ ನಂತರ ವಿಳಂಬವಾಗಿ ದೂರು ನೀಡುತ್ತಿದ್ದೇನೆ ಎಂದು ಸಂತ್ರಸ್ತ ಮಹಿಳೆ ತನ್ನ ದೂರಿನ ಸಾರಾಂಶದಲ್ಲಿ ವಿವರಿಸಿದ್ದಾಳೆ.

Share:

Rate:

Previousಪ್ಲಿಪ್ಲಿಪ್ಕಾರ್ಟ್ನಲ್ಲಿಟೂಲ್ಕಿಟ್ಖರೀದಿ, ಮನೆಗೆಬಂದಿದ್ದುಕಲ್ಲುತುಂಬಿದಬಾಕ್ಸ್:
Nextಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ನಡೆಸುತ್ತಿದ್ದವನ ಬಂಧನ

Related Posts

ಅರೆ ಬೆತ್ತಲೆಯಾಗಿ ತಿರುಗುತ್ತಿದ್ದ ಯುವಕನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ಅರೆ ಬೆತ್ತಲೆಯಾಗಿ ತಿರುಗುತ್ತಿದ್ದ ಯುವಕನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

September 5, 2023

ಸಾಹಿತಿ ವಿಷ್ಣು ನಾಯ್ಕರನ್ನು ಸನ್ಮಾನಿಸಿ ಗೌರವಿಸಿದ ಡಾ. ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನ

ಸಾಹಿತಿ ವಿಷ್ಣು ನಾಯ್ಕರನ್ನು ಸನ್ಮಾನಿಸಿ ಗೌರವಿಸಿದ ಡಾ. ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನ

July 10, 2023

ಅಂಕೋಲಾದಲ್ಲಿ ಮಹಿಳಾ ಕಂಡಕ್ಟರಳಿಂದ ಡಿಶುಂ.. ಡಿಶುಂ..

ಅಂಕೋಲಾದಲ್ಲಿ ಮಹಿಳಾ ಕಂಡಕ್ಟರಳಿಂದ ಡಿಶುಂ.. ಡಿಶುಂ..

July 11, 2023

ಅಂಕೋಲಾದಲ್ಲಿ ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಮೊಹರಂ

ಅಂಕೋಲಾದಲ್ಲಿ ಕೋಮು ಸೌಹಾರ್ದತೆಗೆ ಸಾಕ್ಷಿಯಾದ ಮೊಹರಂ

July 29, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಕ್ಯಾಷಿಯರ್  ಮೇಲೆ  ಅತ್ಯಾಚಾರಕ್ಕೆ ಯತ್ನ ;
    ಕ್ಯಾಷಿಯರ್ ಮೇಲೆ  ಅತ್ಯಾಚಾರಕ್ಕೆ ಯತ್ನ ;
  • ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
    ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
  • ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
    ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
  • ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
    ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
  • ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ
    ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy