
ಮಾದನಗೇರಿಯಲ್ಲಿ ಮಟ್ಕಾ ಆಡಿಸುತ್ತಿದ್ದ ಬುಕ್ಕಿಯ ಮೇಲೆ ಪ್ರಕರಣ
ಅಂಕೋಲಾ : ತಾಲೂಕಿನ ಬಳಲೆ ಮಾದನಗೇರಿ ಗ್ರಾಮದಲ್ಲಿ ಹಾದು ಹೋಗಿರುವ ಅಂಕೋಲಾ ಗೋಕರ್ಣ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತು ಮಟಕಾ ಆಟ ನಡೆಸುತ್ತಿದ್ದಾಗ ಅಂಕೋಲಾ ಠಾಣೆಯ ಸಿಪಿಐ ಚಂದ್ರಶೇಖರ ಮಠಪತಿ ಅವರು ದಾಳಿ ನಡೆಸಿ ಓಸಿ ಆಡಿಸುತ್ತಿದ್ದ ಬುಕ್ಕಿಯ ಮೇಲೆ ಪ್ರಕರಣ ದಾಖಲಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಬಳಲೆ ಮಾದನಗೇರಿಯ ರಘುವೀರ ಕಮಲಾಕರ ನಾಯಕ (45 ವರ್ಷ) ಇವರ ಮೇಲೆ ಮಟಕಾ ಆಡಿಸುತ್ತಿದ್ದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ.
ರಘುವೀರ ಕಮಲಾಕರ ನಾಯಕ ಬಳಲೆ ಮಾದನಗೇರಿ ಗ್ರಾಮದಲ್ಲಿ ಹಾದು ಹೋಗಿರುವ ಅಂಕೋಲಾ ಗೋಕರ್ಣ ಸಾರ್ವಜನಿಕ ರಸ್ತೆಯ ಬದಿಯಲ್ಲಿ ನಿಂತು ಮಟಕಾ ಬರೆಯುತ್ತಿದ್ದಾಗ ಸಿಪಿಐ ಚಂದ್ರಶೇಖರ ಮಠಪತಿ ದಾಳಿ ಅವರು ಸಿಬ್ಬಂದಿಯೊAದಿಗೆ ದಾಳಿ ನಡೆಸಿದಾಗ ಮಟ್ಕಾದಿಂದ ಪಡೆದ ಅಕ್ರಮ ನಗದು ಹಣ ಮತ್ತು ಮಟಕಾ ಆಡಲು ಬಳಸಿದ್ದ ಪರಿಕರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಿಎಸೈ ಉದ್ದಪ್ಪ ಧರೆಪ್ಪನವರ್ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ. ಆರೋಪಿ ರಘುವೀರ ಕಮಲಾಕರ ನಾಯಕ ಅವರ ಮೇಲೆ ಕೆ.ಪಿ. ಆಕ್ಟ್ ಅನ್ವಯ 78(3) ಪ್ರಕರಣ ದಾಖಲಾಗಿದೆ.