
ಯಕ್ಷಲೋಕದ ಬೆಳಕು ಅವರ್ಸಾದ ಪ್ರೀತಂ ನಾಯ್ಕ
ಕೃತಿಗೂ ಸೈ….. ಪಾತ್ರಕ್ಕೂ ಸೈ
ಅಂಕೋಲಾ : ಯಕ್ಷಗಾನದ ರಂಗ ಭೂಮಿಕೆ ಹಾಗೂ ನಾಟಕ ರಂಗಕ್ಕೆ ತನ್ನ ಕಲಾ ಸೇವೆಯನ್ನು ಮುಡಿಪಿಟ್ಟು, ಎಲೆ ಮರೆಯ ಕಾಯಿಯಂತೆ ಪ್ರಜ್ವಲಿಸುತ್ತಿರುವ ಯುವ ಕಲಾವಿದ ಅವರ್ಸಾದ ಪ್ರೀತಂ ರೋಹಿದಾಸ ನಾಯ್ಕ ಆರು ಯಕ್ಷಗಾನದ ಕೃತಿ ಹಾಗೂ ನೂರಾರೂ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾನೆ.
ಯಕ್ಷಲೋಕಕ್ಕೆ 6 ಕೃತಿಗಳ ಸಮರ್ಪಣೆ :
30 ರ ಹರೆಯದ ಪ್ರೀತಂ ನಾಯ್ಕ ಭಾಗ್ಯ ವಿಧಾತಾ, ಮರಳು ಗಂಗಾ, ಮಂಗಳ ಭೈರವಿ, ಇಂದ್ರ ಪುಷ್ಪ, ಹಾಗೂ ಪುಷ್ತಯನಿೆ ಎಂಬ ಕಾಲ್ಪನಿಕ ಕಥಾ ಪ್ರಸಂಗಗಳನ್ನು ಅತ್ಯಂತ ಸೊಗಸಾಗಿ ಹಸ್ತ ಕೃತಿಗಳನ್ನು ರೂಪಿಸಿ ಯಕ್ಷಲೋಕಕ್ಕೆ ಬಳವಳಿ ನೀಡಿದ ಕಿರ್ತಿ ಇವರದ್ದಾಗಿದೆ. ಈ 6 ಕೃತಿಗಳು ಸುಮಾರು 250 ಕ್ಕೂ ಹೆಚ್ಚು ಪ್ರದರ್ಶನಗೊಂಡಿರುವದು ಕೃತಿಗೆ ಅಭಿಮಾಣಿಗಳಿಂದ ಸಿಕ್ಕ ಪ್ರೇರಣೆಯು ಆಗಿದೆ.
ಯಕ್ಷ ಕೃತಿಗಳ ಜೊತೆಗೆ ಮನೋಜ್ಞವಾಗಿ ಪಾತ್ರಗಳಲ್ಲಿಯೂ ಅಭಿನಯಿಸಿ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಸ್ತಿçà ಹಾಗೂ ಹಾಸ್ಯ ಪಾತ್ರಗಳನ್ನು ಹೊರತು ಪಡಿಸಿ ಎಲ್ಲ ಪಾತ್ರಕ್ಕೂ ಜೀವ ತುಂಬುವ ಕಲಾ ನೈಪುಣ್ಯತೆಯು ಪ್ರೀತಂ ನಾಯ್ಕರದ್ದಾಗಿದೆ.
ವೃತ್ತಿಯಲ್ಲಿ ಎಲೆಕ್ಷಿಕಕಲ್ ಆಗಿ ಪ್ರೀತಂ ತನ್ನ 8 ನೇ ವಯಸ್ಸಿಗೆ ಬಣ್ಣ ಹಚ್ಚಿ ಕಲಾ ರಂಗಕ್ಕೆ ಪಾದಾರ್ಪಣೆ ಮಾಡಿದ ಪ್ರೀತಂ ಅವರ ತಂದೆ ಹಾರವಾಡದ ದಿ. ರೋಹಿದಾದ ಖೇಮು ನಾಯ್ಕ ಯಕ್ಷಗಾನದ ಖ್ಯಾತ್ ಭಾಗವತರು ಹಾಗೂ ಕಲಾವಿದರು ಆಗಿದ್ದರು. ಯುವ ಕಲಾವಿದರು ಪಾತ್ರ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಪೌರಾಣಿಕ ಪ್ರಸಂಗಗಳ ಪದ್ಯಕ್ಕೆ ಅರ್ಥ ಬರೆದು ಕೊಡುವ ರೋಹಿದಾಸ ನಾಯ್ಕ ಅವರು ಪದ್ಯಗಳಿಗೆ ಅರ್ಥ ಹೇಳುತ್ತ ಹೋದಂತೆ ಮಗ ಪ್ರೀತಂ ಬರೆದು ಕೊಡುತ್ತಿದ್ದರಂತೆ. ಈ ಹವ್ಯಾಸವೆ ತನಗೆ ಯಕ್ಷಗಾನ ಕೃತಿ ಹಾಗೂ ಪಾತ್ರ ನಿರ್ವಹಿಸಲು ಸ್ಪೂರ್ತಿಯಾಯಿತು ಎನ್ನುತ್ತಾರೆ.

ಪ್ರಾರಂಭದಲ್ಲಿ ಕೃಷ್ಣ ಬಂಡಾರಿ ಗುಣವಂತೆ ಅವರಿಂದ ತಾಳಬ್ಯಾಸದ ತರಭೇತಿ ಪಡೆದ ಪ್ರೀತಂ ನೂರಾರು ಯುವ ಕಲಾವಿದರರಿಗೆ ಯಕ್ಷ ರಂಗಕ್ಕೆ ಹಜ್ಜೆ ಹಾಕಲು ತರಭೇತಿ ನೀಡಿದ್ದಾರೆ. ಕಾರವಾರ ಅಮದಳ್ಳಿ, ಮುದಗಾ, ಅಂಕೋಲಾದ ಹೆಗ್ಗರಣಿ ಭಾಗಗಳಲ್ಲಿ ಉಚಿತ ತರಭೇತಿಗಳನ್ನು ನೀಡಿದ ಶ್ರೇಯಸ್ಸು ಕೂಡ ಇವರಿಗೆ ಸಲ್ಲುತ್ತದೆ.
ಯಕಗಾನ ಉಳಿದರೆ ನಮ್ಮ ಸಂಸ್ಕçತಿ ಪರಂಪರೆ ಉಳಿಯುತ್ತದೆ. ಈ ನಿಟ್ಟಿನಲ್ಲಿ ನನ್ನ ತಂದೆಯ ದಿವ್ಯಾರ್ಶಿವಾದದೊಂದಿಗೆ ನಾನು ಯಕ್ಷಲೋಕದ ಸೇವೆ ನಿರತನಾಗಿದ್ದೇನೆ. ಈ ಸೇವೆಯಿಂದ ನನಲ್ಲಿ ಏನೋ ಖುಷಿ ಇದೆ.
ಪ್ರೀತಂ ನಾಯ್ಕ.
ಯಕ್ಷ ಪ್ರೇಮಿ.
ಯಾವ ಪ್ರಚಾರದ ಹಿಂದೆ ಬೀಳದೆ ಪ್ರಿತಂ ಯಕ್ಷ ಲೋಕ ಹಾಗೂ ರಂಗಭೂಮಿಗೆ ಅಗ್ರಗಣ್ಯ ಸೇವೆ ನಿಡುತ್ತಿರುವದು ಮಾದರಿಯಾಗಿದೆ. ಯುವ ಸಮೂದಾಯಕ್ಕೆ ಪ್ರೇರಣೆಯಾಗಿ ಕಲಾ ಸೇವೆ ನೀಡುತ್ತಿರುವದು ಸಂತಸ ತಂದಿದೆ.
ನಾಗರಾಜ್ ಜಾಂಬಳೇಕರ. ಅಧ್ಯಕ್ಷರು ರಂಗಭೂಮಿ ಕಲಾವಿದರ ವೇದಿಕೆ ಅಂಕೋಲಾ.
