ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
ಪ್ರತಿಭಟನೆಗೆ ಸಜ್ಜಾದ ವಿದ್ಯಾರ್ಥಿ ಸಂಘಟನೆಗಳು

ಅ0ಕೋಲಾ: ಸಾರಿಗೆ ಬಸ್ನ ಹಿಂಭಾಗದಲ್ಲಿ ಅಳವಡಿಸಲಾಗಿದ್ದ ನಾಮಫಲಕ (ಬೋರ್ಡ್) ಬಿದ್ದು ವಿದ್ಯಾರ್ಥಿ ಗಾಯಗೊಂಡ ಸಂಧರ್ಭದಲ್ಲಿ, ಆತನನ್ನು ಪ್ರಥಮ ಚಿಕಿತ್ಸೆ ನೀಡದೆ ಮಧ್ಯರಸ್ತೆಯಲ್ಲಿಯೇ ಇಳಿಸಿ ಅಮಾನವೀಯತೆ ಮರೆದ ನಿರ್ವಾಹಕಿಯ ಮೇಲೆ ಎಫ್ಐಆರ್ ದಾಖಲಾದರೂ ಸಾರಿಗೆ ಇಲಾಖೆ ಮಾತ್ರ ಆಕೆಯ ಮೇಲೆ ಯಾವುದೇ ಕ್ರಮಕೈಗೊಳ್ಳದೇ ಇರುವದರಿಂದ ನ್ಯಾಯವಾದಿ ಉಮೇಶ ನಾಯ್ಕ ನೇತ್ರತ್ವದಲ್ಲಿ ವಿದ್ಯಾರ್ಥೀ ಸಂಘಟನೆಗಳು ಪ್ರತಿಭಟನೆ ಕೈಗೊಳ್ಳಲು ಮುಂದಾಗಿದೆ.
ಪೂಜಗೇರಿ ಪ್ರಥಮ ದರ್ಜೆ ಕಾಲೇಜಿನ ಬಿ.ಎ. ದ್ವಿತೀಯ ವರ್ಷದ ವಿದ್ಯಾರ್ಥಿ ತ್ರೀಮೂರ್ತಿ ಶಾಂತಾ ನಾಯ್ಕ ಅವರ ಮೇಲೆ ನಿರ್ವಾಹಕಿ ಅಮಾನವೀಯತೆ ಮೆರೆದು ದೌರ್ಜನ್ಯ ಎಸೆಗಿದರು, ಭಟ್ಕಳ ಡಿಪೋ ಮ್ಯಾನೇಜರ ಮಾತ್ರ ಯಾವುದೇ ಕ್ರಮ ಕೈಗೊಳ್ಳದಿರುವದು ವಿವಿಧ ಅನುಮಾನಗಳಿಗೆ ಕಾರಣವಾಗಿದೆ.
ಘಟನೆ ಏನಾಗಿತ್ತು..?
ಫೆಬ್ರವರಿ 23 ರಂದು ಸೋಮವಾರ, ಕಾಲೇಜು ಮುಗಿಸಿಕೊಂಡು ಮನೆಗೆ ತೆರಳಲು ತ್ರೀಮೂರ್ತಿ ನಾಯ್ಕ ಭಟ್ಕಳ–ಕಾರವಾರ ಮಾರ್ಗದ ಬಸ್ ಏರಿದ್ದರು. ಮಧ್ಯಾಹ್ನ 2.15 ಕ್ಕೆ ಅಂಕೋಲಾ ಬಸ್ ನಿಲ್ದಾಣದಿಂದ ಹೊರಟ ಬಸ್ ಅಜ್ಜಿಕ್ಕಟ್ಟೆ ಬಳಿಸಾಗುತ್ತಿರುವ ವೇಳೆ ಹಿಂಭಾಗದಲ್ಲಿ ಅಳವಡಿಸಿದ್ದ ನಾಮಫಲಕ ಬಿದ್ದು ತಲೆಗೆ ಬಡಿದ ಪರಿಣಾಮ ವಿದ್ಯಾರ್ಥಿಗೆ ತೀವ್ರ ರಕ್ತ ಸ್ರಾವವಾಗಿತ್ತು.
ರಕ್ತ ಸ್ರಾವವಾಗುತ್ತಿರುವುದನ್ನು ಕಂಡಿದ್ದರೂ ನಿರ್ವಾಹಕಿ ಸುನೀತಾ ತಕ್ಷಣ ಪ್ರಥಮ ಚಿಕಿತ್ಸೆ ನೀಡದೆ, ಸ್ವಲ್ಪ ದೂರದಲ್ಲೇ ವಿದ್ಯಾರ್ಥಿಯನ್ನು ಬಸ್ನಿಂದ ಕೆಳಗಿಳಿಸಿ ಮುಂದಕ್ಕೆ ತೆರಳಿದ್ದಾರೆ ಎಂಬ ಆರೋಪ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿಯ ನೋವಿಗೆ ಸ್ಪಂದಿಸಿ ಕೂಡಲೇ ಅಂಕೋಲಾ ಪೊಲೀಸರು ಎಫ್ಐಆರ್ದಾ ಖಲಿಸಿಕೊಂಡಿದ್ದಾರೆ. ಆದರೆ ಸಾರಿಗೆ ಇಲಾಖೆ ಮಾತ್ರ ನಿರ್ವಾಹಕಿಯ ರಕ್ಷಣೆ ಹೊರಟಿರುವ, ಒಳ ಅರ್ಥ ಮಾತ್ರ ಎಲ್ಲರಿಗೂ ತಿಳಿದಿರುವ ವಿಚಾರವು ಆಗಿದೆ.
