ಅಂಕೋಲಾ : ಕ್ರೀಡೆಗಳನ್ನು,ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದಾಗ‌ ನಮ್ಮ ಸಂಘಟಿತ ಶಕ್ತಿಯಿಂದ ಸಾಧನೆ ಮಾಡಲು ನೆರವಾಗುತ್ತದೆ ನಾನು ಸಹಕಾರ ಕ್ಷೇತ್ರದಲ್ಲಿ ಸಾಧಿಸಲು ಸಂಘಟನಾ ಮನೋಭಾವ ಕಾರಣ ಎಂದು ಸಹಕಾರಿ ರತ್ನ ಬೆಂಗಳೂರಿನ ಕರ್ನಾಟಕ ಹಾಲು‌ ಮಹಾಮಂಡಳದ ಪಶುಸಂಗೋಪನಾ ವಿಭಾಗದ ಜಂಟಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ  ಡಾ: ಡಿ‌ ಎನ್ ಹೆಗಡೆ ಹಳವಳ್ಳಿ ಹೇಳಿದರು

ಅವರು  ತಾಲೂಕಿನ ಹಳವಳ್ಳಿ ಯಲ್ಲಿ ಅಂಚೆಯಣ್ಣನಾಗಿ ಕಾರ್ಯನಿರ್ವಹಿಸುತ್ತಿದ್ದ ಭಾಸ್ಕರ ಭಟ್ಟ ಸ್ಮರಣಾರ್ಥ ಕಿರಣ ಯುವಕ ಸಂಘ ಹಾಗೂ ಊರ ನಾಗರಿಕರು ಹಳವಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಮುಕ್ತ ಕೇರಂ ಪಂದ್ಯಾವಳಿ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಉದ್ಘಾಟಕರರಾಗಿ ಆಗಮಿಸಿದ ಪ್ರಸಿದ್ದ ಗಾಯಕರು ಸಂಘಟನಕಾರರು ಆದ ಪ್ರಸನ್ನ ವೈದ್ಯ ಮಾತನಾಡಿ
ಸಾಧನಾ ಸಭಾಭವನದಲ್ಲಿ ಸಾಧನ ಸಾಂಸ್ಕೃತಿಕ ನಿಕ್ಷೇಪದ ವ್ಯಕ್ತಿ, ಮಾಲಿಕನೋ‌ ಅಥವಾ ಜವಾನನೋ ಉದ್ಘಾಟಿಸಿದ ಸಾಧಕನ ನೆನಪಿನ ಕಾರ್ಯಕ್ರಮ ಇದು “ಸಾಧನ” ಸಾಧಕ ಸಮಾವೇಶ ಎಂದು ಬಣ್ಣಿಸಿದರು.

ಪ್ರಾಯೋಜಕರಾದ ಪ್ರಕಾಶ ಹೆಗಡೆ ಡೋಂಗ್ರಿ, ಗ್ರಾಪಂ ಸದಸ್ಯ ನಿತ್ಯಾನಂದ ಭಟ್ಟ,  ಡೋಂಗ್ರಿ ಗ್ರಾಪಂ ಅಧ್ಯಕ್ಷೆ ಲತಾ ನಾಯ್ಕ, ಕಿರಣ ಯುವಕ ಸಂಘದ ಅಧ್ಯಕ್ಷ ವಿಶ್ವನಾಥ ಹೆಬ್ಬಾರ್ ,ಶುಭಹಾರೈಸಿ ಮಾತನಾಡಿದರು..

ಈ ಸಂದರ್ಭದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಸಾಧಿಸಿ ಸಹಕಾರಿ ರತ್ನ ಪ್ರಶಸ್ತಿಗೆ ಪಾತ್ರರಾಗಿರುವ ಊರಿನ ಹೆಮ್ಮೆಯ ಸುಪುತ್ರ ಡಾ ಡಿ. ಎನ್. ಹೆಗಡೆ , ಐಎಪ್ಎಸ್ ನಲ್ಲಿ ಅತ್ಯುತ್ತಮ ಸಾಧನೆ ಮಾಡಿದ ನವೀನ ಹೆಗಡೆ ಹಬ್ಬಣಮನೆ ಅಚವೆ .ಎಸ್ ಎಸ್ ಎಲ್ ಸಿ ಯಲ್ಲಿ ಗಣನೀಯ ಸಾಧನೆ ಮಾಡಿದ ಮಾನ್ಯ ನರಸಿಂಹ ಹೆಗಡೆ ರಾಭಂಟ್ರಮನೆ ಅವರನ್ನು  ಸನ್ಮಾನಿಸಿ ಗೌರವಿಸಲಾಯಿತು.

ನಂತರದಲ್ಲಿ ನಡೆದ ಕೇರಂ ಮುಕ್ತ ಡಬಲ್ಸ್ ಪಂದ್ಯದಲ್ಲಿ ದೂರ ದೂರದ ಊರಗಳಿಂದ ಆಗಮಿಸಿದ 26 ತಂಡಗಳಲ್ಲಿ ಶಿರಶಿಯ ಮನು ಭಟ್ಟ  ಹಾಗೂ ನಿಸಾರ್ ಜೋಡಿ ಪ್ರಥಮ ಹಾಗೂ ಸಿರ್ಸಿಯ ಫಾಸಿಲ್ ಹಾಗೂ ಅಣ್ಣಪ್ಪ ಜೋಡಿ  ದ್ವಿತೀಯ ಸ್ಥಾನ ಪಡೆದರು. 

ಕಾರವಾರ ಟೈಮ್ಸ್ ನ್ಯೂಸ್  updates ಗಾಗಿ ಈ ಕೆಳಗಿನ ವಾಟ್ಸಪ್ ಲಿಂಕ್ ನ್ನು ಬಳಸಿಕೊಂಡು ಗ್ರೂಪ್ಗೆ ಸೇರಿಕೊಳ್ಳಿ…https://chat.whatsapp.com/HyQE3CIKWEICSXQCoirwQE