TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಶಿಕ್ಷಣ ಪ್ರೇಮಿ ಜಗಧೀಶ ಮಾಸ್ತರ ಇನ್ನಿಲ್ಲ

Feb 3, 2024 | ವಿಶೇಷ |

ಶಿಕ್ಷಣ ಪ್ರೇಮಿ ಜಗಧೀಶ ಮಾಸ್ತರ ಇನ್ನಿಲ್ಲ

ಅಂಕೋಲಾ : ಪುರಸಭೆಯ ಸದಸ್ಯ, ಶಿಕ್ಷಣ ಪ್ರೇಮಿ ಜಗಧೀಶ ಮಾಸ್ತರ ಅವರು ಶನಿವಾರ ಕಾರವಾರದ ವೈಧ್ಯಕೀಯ ಕಾಲೇಜಿನಲ್ಲಿ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಜಗಧೀಶ ನಾಯಕ ಅವರು ಕಾರವಾರದ ಸಿವಿಲ್ ಆಸ್ಪತ್ರೆಯಲ್ಲಿ ಹಲವು ದಿನಗಳಿಂದ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರು ಶನಿವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

     ಶಿಕ್ಷಣ ಪ್ರೇಮಿ :

ಶಿಕ್ಷಣ ರಂಗವನ್ನು ತನ್ನ ಉಸಿರಾಗಿ ತೊಡಗಿಸಿಕೊಂಡಿದ್ದ ಜಗಧೀಶ ನಾಯಕ ಅವರು ಜಗಧೀಶ ಮಾಸ್ತರ ಎಂದೇ ಚಿರಪರಿಚಿತರಾಗಿದ್ದರು. ತುಂಬು ಗಡ್ಡ, ನಗು ಮುಖ, ಎಲ್ಲರನ್ನು ಆತ್ಮೀಯರಾಗಿ ಮಾತನಾಡಿಸುವ ಜಗಧೀಶ ಮಾಸ್ತರ ಅವರ ವ್ಯಕ್ತಿತ್ವ ಅಪರೂಪವಾಗಿ ಗಮನ ಸೆಳೆಯುವಂತಾಗಿತ್ತು.

ಪೂರ್ಣಪ್ರಜ್ಞಾ ಶಿಕ್ಷಣ ಮಹಾ ವಿದ್ಯಾಲಯವನ್ನು ಸ್ಥಾಪಿಸಿ ಸಹಸ್ರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಜಗಧೀಶ ಮಾಸ್ತರ, ತನ್ನ ಜೀವನ ಕೊನೆಯವರೆಗೆ ಸಂಸ್ಥೆಯ ಅಭಿವೃದ್ಧಿಗೆ ಹಗಲಿರಳು ದುಡಿದು ಶಿಕ್ಷಣದ ಸಂತ ಎಂದರೆ ತಪ್ಪಾಗಲಾರದು.

ತನ್ನ ವಿಶೇಷ ವ್ಯಕ್ತಿತ್ವದ ಮೂಲಕ ಜನಪ್ರೀಯರಾದ ಜಗಧೀಶ ಮಾಸ್ತರ ಅವರು ಪುರಸಭೆಯ ಸದಸ್ಯರಾಗಿ ಆಯ್ಕೆಯಾಗಿ ತನ್ನ ಕ್ಷೇತ್ರದ ಅಭಿವೃದ್ಧಿಗೆ ವಿಶೇಷವಾಗಿ ದುಡಿದು ಮಾದರಿಯಾಗಿದ್ದರು. ಅಂಕೋಲೆ ಶಿಕ್ಷಣ, ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಜಗಧೀಶ ನಾಯಕ ವರ ಕೊಡುಗೆ ಅಚ್ಚಳಿಯದೆ ಉಳಿಯುವಂತಾಗಿದ್ದು, ಜಗಧೀüಶ ಮಾಸ್ತರ ಅವರ ನಿಧನ ಸುದ್ದಿ ಅವರ ಆತ್ಮೀಯ ವಲಯದಲ್ಲಿ ಕರಿ ನೆರಳು ಚೆಲ್ಲಿದಂತಾಗಿದೆ.

ಜಗಧೀಶ ನಾಯಕ ಅವರು ತನ್ನ ಶರೀರವನ್ನು ಕಾರವಾರದ ವೈಧ್ಯಕೀಯ ಕಾಲೇಜಿನ ದಾನವಾಗಿ ನೀಡಿ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ.

Share:

Rate:

Previousಅಂಕೋಲಾ ಠಾಣೆಯ ನೂತನ ಸಿಪಿಐ ಆಗಿ ಶ್ರೀಕಾಂತ ತೋಟಗಿ
Nextಬಾಗಿಲು ತೆರೆದುಕೊಂಡೆ ಬೆತ್ತಲೆ ಸ್ನಾನ ಮಾಡುತ್ತಿದ್ದ ಭೂಪನಿಗೆ ಬಿತ್ತು ಎಫ್.ಐ.ಆರ್.

Related Posts

ಅಪಘಾತದಲ್ಲಿ ಕಾಲು ಕಳೆದುಕೊಂಡ ಚಾಲಕನಿಗೆ ನೆರವಾದ  ಸಹೃದಯಿಗಳು

ಅಪಘಾತದಲ್ಲಿ ಕಾಲು ಕಳೆದುಕೊಂಡ ಚಾಲಕನಿಗೆ ನೆರವಾದ ಸಹೃದಯಿಗಳು

August 16, 2023

ನಿಲೇಕಲ್ಲು ತೆಗೆಯಲು ಹೋದಾಗ 12 ವರ್ಷದ ಬಾಲಕಿ ನೀರಿನಲ್ಲಿ ಮುಳುಗಿ ಸಾವು 

ನಿಲೇಕಲ್ಲು ತೆಗೆಯಲು ಹೋದಾಗ 12 ವರ್ಷದ ಬಾಲಕಿ ನೀರಿನಲ್ಲಿ ಮುಳುಗಿ ಸಾವು 

April 11, 2024

ವರ್ಗಾವಣೆಗೊಂಡ ಜನಮೆಚ್ಚಿದ ಶಿಕ್ಷಕಿ ಸೀಮಾ ಉಮೇಶ ನಾಯ್ಕರಿಗೆ ಸನ್ಮಾನ

ವರ್ಗಾವಣೆಗೊಂಡ ಜನಮೆಚ್ಚಿದ ಶಿಕ್ಷಕಿ ಸೀಮಾ ಉಮೇಶ ನಾಯ್ಕರಿಗೆ ಸನ್ಮಾನ

July 28, 2023

ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ

ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ

November 8, 2025

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
    ಅಮಾನವೀಯತೆ ಮೆರೆದ ನಿರ್ವಾಹಕಿಯ ಮೇಲೆ ಸಾರಿಗೆ ಇಲಾಖೆಯಿಂದ ಆಗದ ಕ್ರಮ
  • ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
    ಮಧ್ಯರಸ್ತೆಯಲ್ಲಿ ವಿದ್ಯಾರ್ಥಿಯನ್ನು ಇಳಿಸಿ ಅಮಾನವೀಯತೆ ಮೆರೆದ ನಿರ್ವಾಹಕಿ
  • ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
    ಅಂಕೋಲಾದಲ್ಲಿ ಗಫ್‌ಚುಪ್ ಆಗಿ ನಡೆದ ಬಾಲ್ಯ ವಿವಾಹ ಬಯಲು
  • ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ
    ಗುಂಡು ಹಾರಿಸಿಕೊಂಡು ವೈದ್ಯ ಆತ್ಮಹತ್ಯೆ
  • ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ  ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ
    ಸೀಬರ್ಡ್ ಯೂನಿಯನ್‌ನ ಮುಖಂಡ ಹಾರವಾಡದ ದೀಪಕ ತಾಂಡೇಲ ಅವರ ಮೇಲೆ ಹಲ್ಲೆ ನಡೆಸಿದ ಗುರುರಾಜ್ ಕೊಳ್ಳೊಂಲ್ಲಿ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy