TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಬಾಗಿಲು ತೆರೆದುಕೊಂಡೆ ಬೆತ್ತಲೆ ಸ್ನಾನ ಮಾಡುತ್ತಿದ್ದ ಭೂಪನಿಗೆ ಬಿತ್ತು ಎಫ್.ಐ.ಆರ್.

Feb 4, 2024 | ಅಪರಾಧ, ವಿಶೇಷ |

ಬಾಗಿಲು ತೆರೆದುಕೊಂಡೆ ಬೆತ್ತಲೆ ಸ್ನಾನ ಮಾಡುತ್ತಿದ್ದ ಭೂಪನಿಗೆ ಬಿತ್ತು ಎಫ್.ಐ.ಆರ್.

ವರದಿ : ದಿನಕರ ನಾಯ್ಕ. ಅಲಗೇರಿ.

ಅಂಕೋಲಾ: ಸಾಮಾನ್ಯವಾಗಿ ಹುಡುಗರಾಗಲಿ ಹುಡುಗಿಯರಾಗಲಿ ಬಾಗಿಲು ಹಾಕಿಕೊಂಡು ಕನಿಷ್ಟ ಉಡುಪನ್ನಾದರೂ ಧರಿಸಿ ಸ್ನಾನ ಮಾಡುವುದು ಮರ್ಯಾದೆ. ಅದರೆ ಇಲ್ಲೊಬ್ಬ ಅಂತರ ಪಿಶಾಚಿ ಅತ್ತ ಬಾಗಿಲನ್ನೂ ಹಾಕದೆ ಇತ್ತ ಬಟ್ಟೆಯನ್ನು ಹಾಕದೆ ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದ. ಬಾಗಿಲು ಹಾಕಿ ಸ್ನಾನ ಮಾಡು ಎಂದು ಹೇಳಿದ್ದಕ್ಕೆ ತನ್ನ ತಮ್ಮನ ಹೆಂಡತಿಯನ್ನೇ ಬೈದು ಎಳೆದಾಡಿದ ಭಾವನ ಮೇಲೆ ಪೊಲೀಸರು ಎಫ್.ಐ.ಆರ್. ದಾಖಲಿಸಿದ್ದಾರೆ.

ತಾಲೂಕಿನ ಕಾಕರಮಠದ ಇಸಾಕ್ ಅಹಮ್ಮದ ಶೇಖ (45) ತನ್ನ ತಮ್ಮನ ಹೆಂಡತಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದು, ನೊಂದ ಮಹಿಳೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಎಫ್.ಐ.ಆರ್. ನಲ್ಲಿ ಏನಿದೆ.. ?

38 ರ ಪ್ರಾಯದ ಈ ಮಹಿಳೆಯು ತಾಲೂಕಿನ ಕಾಕರಮಠದಲ್ಲಿ ಕುಟುಂಬದೊAದಿಗೆ ವಾಸವಾಗಿದ್ದು, ಕಳೆದ 29 ಜನವರಿ 2024 ರಂದು ಮದ್ಯಾಹ್ನ 1 ಗಂಟೆಗೆ ಗಂಡನ ಅಣ್ಣ ಇಸಾಕ್ ಅಹ್ಮದ ಶೇಖ ಈತ ತನ್ನ ತಮ್ಮನ ಹೆಂಡತಿ ಅಡಿಗೆ ಕೋಣೆಯಲ್ಲಿ ಅಡುಗೆ ಮಾಡುವಾಗ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾತರೂಮಿನಲ್ಲಿ ಬಾಗಿಲು ಹಾಕದೆ ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದ. ಇತನ ಕಾಣಬಾರದ ರೂಪ ಕಂಡ ಈಕೆ ಬಾಗಿಲು ಹಾಕಿಕೊಂಡು ಸ್ನಾನ ಮಾಡು ಎಂದು ಹೇಳಿದ್ದಾಳೆ.

 ಇಸಾಕ್ ಶೇಖ ಬಟ್ಟೆ ಹಾಕಿಕೊಂಡು ಬಾತರೂಮಿನಿಂದ ಹೊರ ಬಂದು, ನಾನು ಬೆತ್ತಲೆಯಾದರೂ ಸ್ನಾನ ಮಾಡುತ್ತೇನೆ, ಬಟ್ಟೆ ಹಾಕಿಕೊಂಡಾದರೂ ಸ್ನಾನ ಮಾಡುತ್ತೇನೆ ಅದನ್ನು ಕೇಳಲು ನೀನು ಯಾರು..? ಎಂದು ಅವಾಚ್ಯವಾಗಿ ಬೈದು ಕೈ ಹಿಡಿದು ತಿರುಗಿಸಿ, ಮೈ ಮೇಲಿದ್ದ ಚೂಡಿದಾರದ ವೇಲನ್ನು ಎಳೆದು ಅವಮಾನ ಪಡಿಸುತ್ತಿರುವಾಗ, ಗಂಡನ ತಮ್ಮ ಮೋಸಿನ ಶೇಖ ಬಂದು ಜಗಳ ಬಿಡಿಸಿದ್ದಾನೆ. ಆಗ ಈ ದಿವಸ ನೀನು ಬಚಾವಾದೆ ಇನ್ನೊಮ್ಮೆ ಸಿಕ್ಕರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಅಂತ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.

 ಆರೋಪಿ ಇಸಾಕ್ ಅಹಮ್ಮದ ಶೇಖ ಅವರ ವಿರುದ್ಧ ಐಪಿಸಿ 506, 504, 323, 354 ಕಲಂ ಅಡಿಯಲ್ಲಿ ಪಿಎಸೈ ಉದ್ದಪ್ಪ ಧರೆಪ್ಪನವರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

Share:

Rate:

Previousಶಿಕ್ಷಣ ಪ್ರೇಮಿ ಜಗಧೀಶ ಮಾಸ್ತರ ಇನ್ನಿಲ್ಲ
Nextಕೇಣಿ ಕ್ರಾಸ್‌ನಲ್ಲಿ ಮಟ್ಕಾ ಆಡಿಸುತ್ತಿದ್ದವನ ಬಂಧನ

Related Posts

ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಉಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ

ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯವನ್ನು ಖಂಡಿಸಿ ಉಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ

July 28, 2023

ಎಸೈ ಮನೆಯಲ್ಲಿ ಚಿನ್ನ ಕದ್ದ ಇಬ್ಬರು ಚಾಲಾಕಿ ಯುವತಿಯರು ಪೊಲೀಸ್ ವಶಕ್ಕೆ

ಎಸೈ ಮನೆಯಲ್ಲಿ ಚಿನ್ನ ಕದ್ದ ಇಬ್ಬರು ಚಾಲಾಕಿ ಯುವತಿಯರು ಪೊಲೀಸ್ ವಶಕ್ಕೆ

January 11, 2024

ಅಂಕೋಲಾದಲ್ಲಿ ಚಿರತೆಗಳ ರಂಪಾಟ : 51 ಜಾನುವಾರುಗಳನ್ನು ತಿಂದು ತೇಗಿದ ಚಿರತೆಗಳು

ಅಂಕೋಲಾದಲ್ಲಿ ಚಿರತೆಗಳ ರಂಪಾಟ : 51 ಜಾನುವಾರುಗಳನ್ನು ತಿಂದು ತೇಗಿದ ಚಿರತೆಗಳು

October 12, 2023

ಅಂಗಡಿಬೈಲನಲ್ಲಿ ಕೋಳಿ ಅಂಕ ನಡೆಸಿ ಪಾರುಪತ್ಯ ಮರೆದ ಜೂಜುಕೋರರು

ಅಂಗಡಿಬೈಲನಲ್ಲಿ ಕೋಳಿ ಅಂಕ ನಡೆಸಿ ಪಾರುಪತ್ಯ ಮರೆದ ಜೂಜುಕೋರರು

March 27, 2025

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
    ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
  • ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
    ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
  • ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
    ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
  • ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
    ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
  • ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.
    ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy