TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಬಾಗಿಲು ತೆರೆದುಕೊಂಡೆ ಬೆತ್ತಲೆ ಸ್ನಾನ ಮಾಡುತ್ತಿದ್ದ ಭೂಪನಿಗೆ ಬಿತ್ತು ಎಫ್.ಐ.ಆರ್.

Feb 4, 2024 | ಅಪರಾಧ, ವಿಶೇಷ |

ಬಾಗಿಲು ತೆರೆದುಕೊಂಡೆ ಬೆತ್ತಲೆ ಸ್ನಾನ ಮಾಡುತ್ತಿದ್ದ ಭೂಪನಿಗೆ ಬಿತ್ತು ಎಫ್.ಐ.ಆರ್.

ವರದಿ : ದಿನಕರ ನಾಯ್ಕ. ಅಲಗೇರಿ.

ಅಂಕೋಲಾ: ಸಾಮಾನ್ಯವಾಗಿ ಹುಡುಗರಾಗಲಿ ಹುಡುಗಿಯರಾಗಲಿ ಬಾಗಿಲು ಹಾಕಿಕೊಂಡು ಕನಿಷ್ಟ ಉಡುಪನ್ನಾದರೂ ಧರಿಸಿ ಸ್ನಾನ ಮಾಡುವುದು ಮರ್ಯಾದೆ. ಅದರೆ ಇಲ್ಲೊಬ್ಬ ಅಂತರ ಪಿಶಾಚಿ ಅತ್ತ ಬಾಗಿಲನ್ನೂ ಹಾಕದೆ ಇತ್ತ ಬಟ್ಟೆಯನ್ನು ಹಾಕದೆ ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದ. ಬಾಗಿಲು ಹಾಕಿ ಸ್ನಾನ ಮಾಡು ಎಂದು ಹೇಳಿದ್ದಕ್ಕೆ ತನ್ನ ತಮ್ಮನ ಹೆಂಡತಿಯನ್ನೇ ಬೈದು ಎಳೆದಾಡಿದ ಭಾವನ ಮೇಲೆ ಪೊಲೀಸರು ಎಫ್.ಐ.ಆರ್. ದಾಖಲಿಸಿದ್ದಾರೆ.

ತಾಲೂಕಿನ ಕಾಕರಮಠದ ಇಸಾಕ್ ಅಹಮ್ಮದ ಶೇಖ (45) ತನ್ನ ತಮ್ಮನ ಹೆಂಡತಿಯ ಜೊತೆಗೆ ಅಸಭ್ಯವಾಗಿ ವರ್ತಿಸಿದ್ದು, ನೊಂದ ಮಹಿಳೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.

ಎಫ್.ಐ.ಆರ್. ನಲ್ಲಿ ಏನಿದೆ.. ?

38 ರ ಪ್ರಾಯದ ಈ ಮಹಿಳೆಯು ತಾಲೂಕಿನ ಕಾಕರಮಠದಲ್ಲಿ ಕುಟುಂಬದೊAದಿಗೆ ವಾಸವಾಗಿದ್ದು, ಕಳೆದ 29 ಜನವರಿ 2024 ರಂದು ಮದ್ಯಾಹ್ನ 1 ಗಂಟೆಗೆ ಗಂಡನ ಅಣ್ಣ ಇಸಾಕ್ ಅಹ್ಮದ ಶೇಖ ಈತ ತನ್ನ ತಮ್ಮನ ಹೆಂಡತಿ ಅಡಿಗೆ ಕೋಣೆಯಲ್ಲಿ ಅಡುಗೆ ಮಾಡುವಾಗ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬಾತರೂಮಿನಲ್ಲಿ ಬಾಗಿಲು ಹಾಕದೆ ಬೆತ್ತಲೆಯಾಗಿ ಸ್ನಾನ ಮಾಡುತ್ತಿದ್ದ. ಇತನ ಕಾಣಬಾರದ ರೂಪ ಕಂಡ ಈಕೆ ಬಾಗಿಲು ಹಾಕಿಕೊಂಡು ಸ್ನಾನ ಮಾಡು ಎಂದು ಹೇಳಿದ್ದಾಳೆ.

 ಇಸಾಕ್ ಶೇಖ ಬಟ್ಟೆ ಹಾಕಿಕೊಂಡು ಬಾತರೂಮಿನಿಂದ ಹೊರ ಬಂದು, ನಾನು ಬೆತ್ತಲೆಯಾದರೂ ಸ್ನಾನ ಮಾಡುತ್ತೇನೆ, ಬಟ್ಟೆ ಹಾಕಿಕೊಂಡಾದರೂ ಸ್ನಾನ ಮಾಡುತ್ತೇನೆ ಅದನ್ನು ಕೇಳಲು ನೀನು ಯಾರು..? ಎಂದು ಅವಾಚ್ಯವಾಗಿ ಬೈದು ಕೈ ಹಿಡಿದು ತಿರುಗಿಸಿ, ಮೈ ಮೇಲಿದ್ದ ಚೂಡಿದಾರದ ವೇಲನ್ನು ಎಳೆದು ಅವಮಾನ ಪಡಿಸುತ್ತಿರುವಾಗ, ಗಂಡನ ತಮ್ಮ ಮೋಸಿನ ಶೇಖ ಬಂದು ಜಗಳ ಬಿಡಿಸಿದ್ದಾನೆ. ಆಗ ಈ ದಿವಸ ನೀನು ಬಚಾವಾದೆ ಇನ್ನೊಮ್ಮೆ ಸಿಕ್ಕರೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲ ಅಂತ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.

 ಆರೋಪಿ ಇಸಾಕ್ ಅಹಮ್ಮದ ಶೇಖ ಅವರ ವಿರುದ್ಧ ಐಪಿಸಿ 506, 504, 323, 354 ಕಲಂ ಅಡಿಯಲ್ಲಿ ಪಿಎಸೈ ಉದ್ದಪ್ಪ ಧರೆಪ್ಪನವರ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

Share:

Rate:

Previousಶಿಕ್ಷಣ ಪ್ರೇಮಿ ಜಗಧೀಶ ಮಾಸ್ತರ ಇನ್ನಿಲ್ಲ
Nextಕೇಣಿ ಕ್ರಾಸ್‌ನಲ್ಲಿ ಮಟ್ಕಾ ಆಡಿಸುತ್ತಿದ್ದವನ ಬಂಧನ

Related Posts

ಹಾವು ಕಚ್ಚಿ ಯುವಕ ಸಾವು

ಹಾವು ಕಚ್ಚಿ ಯುವಕ ಸಾವು

April 28, 2024

ಅಂಕೋಲಾದ ಸ್ವ ಸಹಾಯ ಸಂಘದ ಮಹಿಳೆಯರ ಹಣ ನುಂಗಿದ ವೆಂಕಟೇಶ ಮಜ್ಜಿಗುಡ್ಡಾ ಅರೆಸ್ಟ್ ..!

ಅಂಕೋಲಾದ ಸ್ವ ಸಹಾಯ ಸಂಘದ ಮಹಿಳೆಯರ ಹಣ ನುಂಗಿದ ವೆಂಕಟೇಶ ಮಜ್ಜಿಗುಡ್ಡಾ ಅರೆಸ್ಟ್ ..!

February 1, 2025

ಅರೆ ಬೆತ್ತಲೆಯಾಗಿ ತಿರುಗುತ್ತಿದ್ದ ಯುವಕನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ಅರೆ ಬೆತ್ತಲೆಯಾಗಿ ತಿರುಗುತ್ತಿದ್ದ ಯುವಕನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

September 5, 2023

ಉತ್ತರ ಕನ್ನಡದ ಉತ್ಪನ್ನಗಳನ್ನ ಉಡುಗೊರೆಯಾಗಿ ನೀಡಿ ಕಂದಾಯ ಸಚಿವರ ಸ್ವಾಗತಿಸಿದ ಜನಶಕ್ತಿ ವೇದಿಕೆ

ಉತ್ತರ ಕನ್ನಡದ ಉತ್ಪನ್ನಗಳನ್ನ ಉಡುಗೊರೆಯಾಗಿ ನೀಡಿ ಕಂದಾಯ ಸಚಿವರ ಸ್ವಾಗತಿಸಿದ ಜನಶಕ್ತಿ ವೇದಿಕೆ

July 8, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಕ್ಯಾಷಿಯರ್  ಮೇಲೆ  ಅತ್ಯಾಚಾರಕ್ಕೆ ಯತ್ನ ;
    ಕ್ಯಾಷಿಯರ್ ಮೇಲೆ  ಅತ್ಯಾಚಾರಕ್ಕೆ ಯತ್ನ ;
  • ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
    ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
  • ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
    ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
  • ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
    ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
  • ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ
    ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy