ಅಂಕೋಲಾದಲ್ಲಿ ಕಳ್ಳರ ಚಳಕ ಮುಂದುವರಿದಿದೆ. ತಾಲೂಕಿನ ವಿವಿದಡೆ 3 ಭೈಕ್ ಕಳ್ಳತನದ ಆತಂಕದ ಘಟನೆ ಮಾಸುವ ಮುನ್ನವೆ ಬಸ್ ನಿಲ್ದಾಣದಲ್ಲಿ ಬಸ್ ಏರಲು ನಿಂತಿದ್ದ ಇಬ್ಬರ ಬ್ಯಾಗ್ ನಿಂದ ಮೊಬೈಲ್ ಹಾಗೂ ಹಣ ಕಳ್ಳತನ ಮಾಡಿದ ಘಟನೆ ಬುಧವಾರ ಸಂಜೆ ನಡೆದಿದೆ.
ತಾಲೂಕಿನಿಂದ ದುಗ್ಗನಮನೆಗೆ ಹೋಗುವ ಬಸ್ ಹತ್ತುವ ವೇಳೆ ಈ ಘಟನೆ ನಡೆದಿದೆ. ಯುವತಿಯೋರ್ವಳು ಮೊಬೈಲ್ ನಲ್ಲಿ ಮಾತಾಡಿ ಬ್ಯಾಗ್ ನಲ್ಲಿ ಮೊಬೈಲ್ ಇಟ್ಟಿದ್ದಳು. ಬಸ್ ಏರುತ್ತಿದ್ದಂತೆ ಮೊಬೈಲ್ ಕಾಣೆಯಾದ ಕುರಿತು ತಿಳಿದಿದೆ. ಇದೇ ಬಸ್ ಏರಲು ಹೆಗ್ಗರಣಿ ಗ್ರಾಮದ ಲಿಂಗಣ್ಣ ಗೌಡ ನಿಂತಿದ್ದರು ಅವರ ಬ್ಯಾಗ್ ಅನ್ನು ಎರಡು ಸಾವಿರ ಹಣ ಎಗರಿಸಲಾಗಿದೆ. ಈ ಕೃತ್ಯವನ್ನು ನೋಡಿದರೆ ಇದು ಪರಿಣಿತರ ಕಳ್ಳರ ಕೈ ಚಳಕ ಎನ್ನುವುದು ಗೊತ್ತಾಗುತ್ತದೆ.

ಇದೇ ವೇಳೆ ಮತ್ತೊಬ್ಬರ ಪರ್ಸ್ ಕೂಡ ಕಳ್ಳತನವಾಗಿದೆ. ಪೊಲೀಸರು ಸ್ಥಳಕ್ಕೆ ಬಂದು ಪರೀಶೀಲನೆ ನಡೆಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಕಳ್ಳತನ ನಡೆದಿದ್ದು ಬಸ್ ನಲ್ಲಿ 80 ಕ್ಕಿಂತ ಹೆಚ್ಚು ಪ್ರಯಾಣಿಕರಿದ್ದು ಅವರಿಗೆ 15 ನಿಮಿಷವಾದರೂ ಈ ದುಷ್ಕೃತ್ಯದ ಬಗ್ಗೆ ತಿಳಿದೇ ಇರಲಿಲ್ಲ.
ಸಿಸಿಟಿವಿ ಇಲ್ಲಾ :
ಇನ್ನು ಇಲ್ಲಿನ ಬಸ್ ದಿನಕ್ಕೆ ಕನಿಷ್ಟ 25 ಸಾವಿರ ಪ್ರಯಾಣಿಕರು ಈ ಮಾರ್ಗದಲ್ಲೆ ಸಂಚಾರಿಸುತ್ತಾರೆ. ಆದರೆ ಬಸ್ ನಿಲ್ದಾಣದ ಚಲನವಲನದ ಬಗ್ಗೆ ನಿಗಾ ಇಡಬೇಕಾಗಿದ್ದ ಸಿಸಿಟಿವಿ ಮಾತ್ರ ಇಲ್ಲಿ ಅಳವಡಿಸದಿರುವದು ಕಳ್ಳರ ನಿರಾಂತಕ ಕೈಚಳಕಕ್ಕೆ ದಾರಿಯಾಗಿದೆ.
ಅಂಕೋಲಾದಲ್ಲಿ ಹೆಚ್ಚುತ್ತಿರುವ ಕಳ್ಳತನದ ಬಗ್ಗೆ ಪೊಲೀಸರು ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಪೊಲೀಸರಿಗೂ ಚಳ್ಳೆ ಹಣ್ಣು ತಿನ್ನಿಸುವ ಈ ಬೃಹತ ಜಾಲದ ಪತ್ತೆ ಮಾತ್ರ ಇನ್ನು ಆಗಿಲ್ಲ ಎನ್ನುವದು ಖೇಧಕರ ಸಂಗತಿ.
ಪೊಲೀಸರು ಗಮನಹರಿಸಿ ನಾಗರಿಕರಲ್ಲಿ ಮನೆ ಮಾಡಿರುವ ಆತಂಕವನ್ನು ದೂರ ಮಾಡಬೇಕಿದೆ. ಸಾರಿಗೆ ಇಲಾಖೆಯವರು ಇಲ್ಲಿ ಸಿಸಿಟಿವಿ ಅಳವಡಿಸುವಲ್ಲಿ ತಮ್ಮ ಕರ್ತವ್ಯ. ಪ್ರಜ್ಞೆ ಪ್ರದರ್ಶಿಸಬೇಕಿದೆ ಎನ್ನುವದು ನಾಗರಿಕರ ಆಗ್ರಹದ ಕೂಗಾಗಿದೆ.
ಪಿಎಸೈ ಉದಪ್ಪ ಅವರ ಬಸ್ ನಿಲ್ದಾಣಕ್ಕೆ ಆಗಮಿಸಿ ನಿಲ್ದಾಣದಲ್ಲಿ ಸಿಸಿಟಿವಿ ಅಳವಡಿಸುವಂತೆ ಖಡಕ್ ಎಚ್ಚರಿಕೆ ಕೊಟ್ಟು ತೆರಳಿದ್ದಾರೆ.