TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಅಯೋಧ್ಯಾ ರಾಮ ಮಂದಿರದ ಉದ್ಘಾಟನೆಯ ನಿಮಿತ್ತ ಮಂತ್ರಾಕ್ಷತೆ ಹಂಚಲು ಹೋದಾಗ ಧಾಂದಲೆ

Jan 6, 2024 | ವಿಶೇಷ |

ಅಯೋಧ್ಯಾ ರಾಮ ಮಂದಿರದ ಉದ್ಘಾಟನೆಯ ನಿಮಿತ್ತ ಮಂತ್ರಾಕ್ಷತೆ ಹಂಚಲು ಹೋದಾಗ ಧಾಂದಲೆ

ಅಂಕೋಲಾ : ಅಯೋಧ್ಯಾ ರಾಮ ಮಂದಿರದ ಉದ್ಘಾಟನೆಯ ನಿಮಿತ್ತ ಮಂತ್ರಾಕ್ಷತೆ ಹಂಚಲು ಹೋದಾಗ ವ್ಯಕ್ತಿಯೊಬ್ಬ ಧಾಂದಲೆ ನಡೆಸಿ, ಅವಾಚ್ಯ ಶಬ್ದದಿಂದ ಬೈದು, ಹಲ್ಲೆ ನಡೆಸಿರುವ ಘಟನೆ ಹಿಲ್ಲೂರಿನ ತಿಂಗಳಬೈಲನ ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಎದುರು ನಡೆದಿದೆ. ಈ ಬಗ್ಗೆ ಅಂಕೊಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಹಿಲ್ಲೂರು ಗ್ರಾಮದ ತಿಂಗಳಬೈಲ್‌ನ ಮೂಲಿಗದ್ದೆಯ ಪ್ರದೀಪ ಮಾಣೇಶ್ವರ ನಾಯಕ ಪುಂಡಾಟ ಮೆರೆದ ಆರೋಪಿತನಾಗಿದ್ದಾನೆ.

ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಕಮಿಟಿ ಸದಸ್ಯ ಸಚಿತ ಗೋವಿಂದ್ರಾಯ ನಾಯಕ. ಹಿಲ್ಲೂರು ಹಾಗೂ ನಾಗರಾಜ ಗಣಪತಿ ಹೆಗಡೆ ಹಾಗೂ ದತ್ತಾತ್ರೇಯ ಗಣಪತಿ ಹೆಗಡೆ ಹಲ್ಲೆಗೊಳಗಾದವರಾಗಿದ್ದಾರೆ.

ಎಫ್‌ಐಆರ್ ನಲ್ಲಿ ಏನಿದೆ..?

ಹಿಲ್ಲೂರು ಗ್ರಾಮದ ತಿಂಗಳಬೈಲ್‌ನ ಮೂಲಿಗದ್ದೆಯ ಪ್ರದೀಪ ತಂದೆ ಮಾಣೇಶ್ವರ ನಾಯಕ ಇತನು ಮೊದಲಿನಿಂದಲೂ ತಿಂಗಳಬೈಲ್ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಪೂಜೆಗೆ ಬರುವ ಊರಿನ ಜನರೆಲ್ಲರಿಗೂ ಅವಾಚ್ಯ ಶಬ್ದಗಳಿಂದ ಬೈಯುವುದು ಮತ್ತು ಊರಿನವರೊಂದಿಗೆ ವಿನಾ ಕಾರಣ ಜಗಳ ಮಾಡುವುದು ಬೆದರಿಕೆ ಹಾಕುತ್ತಾ ತೊಂದರೆ ಕೊಡುತ್ತಾ ಬಂದಿದ್ದ.

ಹೀಗಿರುವಾಗ ರಾಮಲಿಂಗೇಶ್ವರ ದೇವಸ್ಥಾನದ ಕಮಿಟಿ ಸದಸ್ಯರು ಹಾಗೂ ಊರಿನವರೊಂದಿಗೆ ಸೇರಿಕೊಂಡು ಅಯೋಧ್ಯ ರಾಮ ಮಂದಿರದ ಉದ್ಘಾಟನೆ ಪ್ರಯುಕ್ತ ಮಂತ್ರಾಕ್ಷತೆ ಬಂದಿದ್ದನ್ನು ಊರಿನವರಿಗೆ ಹಂಚುವ ಸಲುವಾಗಿ ದೇವಸ್ಥಾನದ ಹೊರ ಆವರಣದಲ್ಲಿ ಸಿದ್ಧತೆ ಮಾಡುತ್ತಿದ್ದಾಗ ಪ್ರದೀಪ ಮಾಣೇಶ್ವರ ನಾಯಕ ಈತನು ರಾಮಲಿಂಗೇಶ್ವರ ದೇವಸ್ಥಾನದ ಆವರಣದೊಳಗೆ ಬಂದು, ದತ್ತಾತ್ರೇಯ ಗಣಪತಿ ಹೆಗಡೆ ಅವರಿಗೆ ಕೂಗಿ ಕರೆದು, ಯಾರನ್ನು ಕೇಳಿ ದೇವಸ್ಥಾನದೊಳಗೆ ಹೋಗಿದ್ದೀರಾ ಬೋಳಿಮಗನೇ, ಯಾರ ಪರ್ಮಿಶನ್ ಕೊಟ್ಟವರು ಬೋಳಿಮಕ್ಕಳಾ, ಸೂಳೆಮಕ್ಕಳಾ ನಿಮಗೆ ದೇವಸ್ಥಾನದೊಳಗೆ ಹೋಗಲು ಅಂತಾ ಹೇಳಿ, ತನ್ನ ಕೈಯಿಂದ ದತ್ತಾತ್ರೇಯ ಹೆಗಡೆ ಅವರ ಹೊಟ್ಟೆಯ ಮೇಲೆ ಬಲವಾಗಿ ಹೊಡೆದಿದ್ದಾನೆ.

 ದತ್ತಾತ್ರೇಯ ಹೆಗಡೆ ಅವರಿಗೆ ಪುನಃ ಹೊಡೆಯಲು ಬಂದಾಗ ತಪ್ಪಿಸಲು ಹೋದ ದೇವಸ್ಥಾನ ಕಮೀಟಿ ಸದಸ್ಯ ಹಿಲ್ಲೂರಿನ ಸಚಿತ ಗೋವಿಂದ್ರಾಯ ನಾಯಕ ಅಂಕೋಲಾ ಇವರಿಗೆ ಕಲ್ಲಿನಿಂದ ತಲೆಯ ಮೇಲೆ ಹೊಡೆದುದ್ದಲ್ಲದೇ, ಪುನಃ ಕತ್ತಿಯನ್ನು ಹಿಡಿದುಕೊಂಡು ಹೊಡೆಯಲು ಬಂದಾಗ ತಪ್ಪಿಸಲು ಹೋದ ನಾಗರಾಜ ಗಣಪತಿ ಹೆಗಡೆ ಅವರಿಗೂ ಸಹ ಕತ್ತಿಯಿಂದ ಬಲಬದಿಯ ಕಣ್ಣಿನ ಹತ್ತಿರ ಹೊಡೆದು ಗಾಯಗೊಳಿಸಿದ್ದಾನೆ.

ಇನ್ನೊಮ್ಮೆ ಪರ್ಮಿಶನ್ ಇಲ್ಲದೇ ದೇವಸ್ಥಾನಕ್ಕೆ ಬಂದರೇ ಸೂಳೆಮಕ್ಕಳಾ ನಿಮಗೆಲ್ಲರನ್ನು ಕೊಲೆ ಮಾಢುವುದಾಗಿ ಅಂತಾ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪಿಎಸೈ ಉದ್ದಪ್ಪ ಧರೆಪ್ಪನವರ್ ಪ್ರಕರಣ ದಾಖಲಿಕೊಂಡು ಆರೋಪಿ ಪ್ರದೀಪ ತಂದೆ ಮಾಣೇಶ್ವರ ನಾಯಕ ಅವರ ಮೇಲೆ ಐಪಿಸಿ ಕಲಂ ಅಡಿ 506,504,323,324 ಪ್ರಕರಣ ದಾಖಲಾಗಿದೆ.

Share:

Rate:

Previousಅಂಕೋಲಾದಲ್ಲಿ ಹೆಚ್ಚುತ್ತಿರುವ ವಿವಾಹ ವಿಚ್ಛೇಧನ ಪ್ರಕರಣ
Nextಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್‌ನಿಂದ ಅಮದಳ್ಳಿ ದೇವಸ್ಥಾನಕ್ಕೆ 3 ಲಕ್ಷ ರು. ನೆರವು

Related Posts

ಕುತ್ತಿಗೆಗೆ ಚಾಕು ಹಾಕಿ ಕೊಲೆ ಮಾಡಲು ಯತ್ನ

ಕುತ್ತಿಗೆಗೆ ಚಾಕು ಹಾಕಿ ಕೊಲೆ ಮಾಡಲು ಯತ್ನ

March 12, 2024

ಅಕ್ರಮ ಮರಳು ಮಾಫಿಯಾಕ್ಕೆ ಸಿಂಹಸ್ವಪ್ನವಾದ ಸಿಪಿಐ ಚಂದ್ರಶೇಖರ ಮಠಪತಿ

ಅಕ್ರಮ ಮರಳು ಮಾಫಿಯಾಕ್ಕೆ ಸಿಂಹಸ್ವಪ್ನವಾದ ಸಿಪಿಐ ಚಂದ್ರಶೇಖರ ಮಠಪತಿ

September 23, 2024

ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ

ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ

November 12, 2025

ಹಾಲನ್ನ ಕಲ್ಲುಗಳಿಗೆರೆದು ವ್ಯರ್ಥ ಮಾಡದೆ ಹಸಿದ ಹೊಟ್ಟೆಗಳಿಗೆ ನೀಡಿ: ನ್ಯಾ.ರೇಣುಕಾ ರಾಯ್ಕರ್ ಕರೆ

ಹಾಲನ್ನ ಕಲ್ಲುಗಳಿಗೆರೆದು ವ್ಯರ್ಥ ಮಾಡದೆ ಹಸಿದ ಹೊಟ್ಟೆಗಳಿಗೆ ನೀಡಿ: ನ್ಯಾ.ರೇಣುಕಾ ರಾಯ್ಕರ್ ಕರೆ

August 21, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
    ಅಂಕೋಲಾದಲ್ಲಿ ಮಕ್ಕಳ ದತ್ತು ಹೆಸರಿನಲ್ಲಿ ಭಾರಿ ಮೋಸ – ಐವರು ವಿರುದ್ಧ ಪ್ರಕರಣ
  • ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
    ಗೋಕರ್ಣದಲ್ಲಿ ಮಟ್ಕಾ ಚೀಟಿ ಬರೆಯುತ್ತಿವನ ಮೇಲೆ ಪ್ರಕರಣ
  • ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
    ಗುಪ್ತಚರ ಇಲಾಖೆಯ ಸಿಬ್ಬಂದಿಯಾಗಿ ಶೇಖರ ಸಿದ್ದಿ
  • ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
    ಕರ್ತವ್ಯ ಲೋಪದ ಹಿನ್ನಲೆ : ಪುನೀತ್ ನಾಯ್ಕ ಭಟ್ಕಳ ಗ್ರಾಮೀಣ ಠಾಣೆಗೆ ನಿಯೋಜನೆ
  • ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.
    ಗೋಕರ್ಣದಲ್ಲಿ ಜೂಜಿಗೆ ಕಡಿವಾಣ ಹಾಕಿದ ಸಿಪಿಐ ಶ್ರೀಧರ್ ಎಸ್.ಆರ್.

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy