TRENDING:

ಎರಡು ಡಜನ್ ಪುರುಷರನ್ನು ಮದುವೆಯಾಗಿ ಕೈಕೊಟ್ಟ ಕಿಲಾಡಿ ಮಹಿಳೆ...
ಪೊಲೀಸ್  ಸಿಬ್ಬಂದಿಗಳಿಗೆ  ಅಫಘಾತಪಡಿಸಿ  ನಾಪತ್ತೆಯಾದ  ರಿಕ್ಷಾ...
ಅಂಕೋಲಾದ ಶಿಕ್ಷಕನೊಬ್ಬನ ದೋಖಾ ಪ್ರೇಮ ಕಹಾನಿ....
Karwar Times
  • Home
  • ಅಂಕಣ
  • ಅಪರಾಧ
  • ಜಿಲ್ಲೆ
  • ರಾಜಕೀಯ
  • ವಿಶೇಷ

Select Page

ಗೂಡಂಗಡಿಗಳಿಗೆ ತೆರಳಿ ರಗಳೆ ಮಾಡುತ್ತಿದ್ದ ಪೊಲೀಸಪ್ಪನ ಚಳಿ ಬಿಡಿಸಿದ ಶಾಸಕ ಸತೀಶ ಸೈಲ

Jul 10, 2024 | ಅಪರಾಧ |

ಗೂಡಂಗಡಿಗಳಿಗೆ ತೆರಳಿ ರಗಳೆ ಮಾಡುತ್ತಿದ್ದ ಪೊಲೀಸಪ್ಪನ ಚಳಿ ಬಿಡಿಸಿದ ಶಾಸಕ ಸತೀಶ ಸೈಲ

ಗೂಡಂಗಡಿಗಳಿಗೆ ತೆರಳಿ ರಗಳೆ ಮಾಡುತ್ತಿದ್ದ ಪೊಲೀಸಪ್ಪನ ಚಳಿ ಬಿಡಿಸಿದ ಶಾಸಕ ಸತೀಶ ಸೈಲ

ರಾಘು ಕಾಕರಮಠ.

ಅಂಕೋಲಾ : ಗೂಡಂಗಡಿಗಳಿಗೆ ತೆರಳಿ ತನ್ನ ಕೈ ಬಿಸಿ ಮಾಡಿ, ಇಲ್ಲದಿದ್ರೆ ನಿಮ್ಮ ಮೇಲೆ ಯಾವದಾದರೊಂದು ಕೇಸ್ ಜಡಿದು ನಿಮಗೆ ಜೈಲೂಟ ಮಾಡಿಸುತ್ತೇನೆ ಎಂದು ರಗಳೆ ಮಾಡುತ್ತಿದ್ದ ಪೊಲೀಸಪ್ಪನಿಗೆ ಶಾಸಕ ಸತೀಸ ಸೈಲ ಅವರು ಸರಿಯಾಗಿ ಕ್ಲಾಸ್  ತೆಗೆದುಕೊಂಡು ಬಿಸಿ ಮುಟ್ಟಿಸಿದ ಘಟನೆ ಚರ್ಚೆಗೆ ಗ್ರಾಸ್‌ವಾಗಿದೆ.

ಮೂರು ಭಾರಿ ಅಮಾನತ್‌ಗೊಂಡು ಅಂಕೋಲಾಕ್ಕೆ ವಕ್ಕರಿಸಿರುವ ಈ ಪೊಲೀಸಪ್ಪ, ತನ್ನ ಹಳೆ ಚಾಳಿಯನ್ನು ಮುಂದುವರಿಸಿಕೊ0ಡು ಅಂಕೋಲಾದಲ್ಲಿಯೂ ತನ್ನ ಕೈ ಚಳಕ ನಡೆಯ ಬಹುದೆಂದು ಭಾವಿಸಿ ಕೈ ಬಿಸಿ ಮಾಡಿಕೊಳ್ಳುವ ಪೀಲ್ಡ್ಗೆ ಇಳಿದಿದ್ದ.

ಇತನ ಉಪಟಳವನ್ನು ತಾಳಲಾರದೆ ಗೂಡಂಗಡಿಯ ಮಾಲಕರು ಶಾಸಕ ಸತೀಶ ಸೈಲ ಅವರಲ್ಲಿ ಈ ಕಾನಸ್ಟೇಬಲನ ಸುನೀತತೆಯನ್ನ ಹೇಳಿಕೊಂಡಿದ್ದರು. ಇದರಿಂದ ಕೆಂಡಮ0ಡಲರಾದ ಶಾಸಕ ಸತೀಸ ಸೈಲ ಅವರು ಕೂಡಲೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಪೊಲೀಸಪ್ಪ ಮಾತ್ರ ಶಾಸಕ ಸೈಲ ಅವರಲ್ಲಿ ನನ್ನ ಬೀಟ್ ವ್ಯಾಪ್ತಿಯಲ್ಲಿ ಕೆಲ ನಮ್ಮ ಪೊಲೀಸ್ ಸಿಬ್ಬಂದಿಗಳು ಕೈಯಾಡಿಸುತ್ತಿದ್ದಾರೆ. ಹಾಗಾಗಿ ನಾನು ಅವರ ಬೀಟ್ ವ್ಯಾಪ್ತಿಗೆ ಬಂದು ಗೂಡಂಗಡಿಗಳಿಗೆ ನುಗ್ಗಿದ್ದೆ ಎಂದು ಹೇಳಿ ಕೊಂಡಿದ್ದಾನೆ.

ನೀನು ಹೀಗೆ ಮಾಡಿದರೆ ನಿನ್ನ ಯೂನಿಪಾರ್ಮ್ನ್ನ ಖಾಯಂ ಆಗಿ ನಿನ್ನ ಮನೆಯ ಕಪಾಟಿಗೆ ಹೋಗುವಂತೆ ನೋಡಿಕೊಳ್ಳಬೇಕಾದೀತು. ನನ್ನ ಕ್ಷೇತ್ರದ ಜನತೆಗೆ ಯಾವುದೇ ಕಾರಣಕ್ಕೂ ತೊಂದರೆಯಾಗಲು ಬಿಡುವದಿಲ್ಲ. ಅವರ ತಂಟೆಗೆ ಬಂದರೆ ನಿನಗೆ ಹಿಡಿದಿರುವ ಭೂತ ಬಿಡಿಸುತ್ತೇಂದು ಖಾರ್‌ವಾಗಿಯೆ ಶಾಸಕ ಸತಿಶ ಸೈಲ ಉಗಿದಿದ್ದಾರೆ ಎಂದು ಗೊತ್ತಾಗಿದೆ.

ಇನ್ನು ಮುಂದೆ ಹಾಗಾಗಲು ಬಿಡುವದಿಲ್ಲ. ಕ್ಷಮಿಸಿ ಎಂದು ಪೊಲೀಸಪ್ಪ ಅಂಗಲಾಚಿ ಬೇಡಿಕೊಂಡ ಹಿನ್ನಲೆಯಲ್ಲಿ ಶಾಸಕ ಸೈಲ ಸಮಾಧಾನಗೊಂಡಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿದೆ

ಅಂತೂ ಈ ಪೊಲೀಸಪ್ಪನ ಕೈ ಬಿಸಿ ಕಹಾನಿಯು ನಗರದಲ್ಲಿ ಭಾರಿ ಸುದ್ದಿ ಮಾಡಿದ್ದು, ಶಾಸಕ ಸತೀಶ ಸೈಲ ಅವರ ಜನಪರ ಕಾಳಜಿಗೆ ಶ್ಲಾಘನೆಯ ಮಾತುಗಳು ವ್ಯಕ್ತವಾಗಿದೆ.

Share:

Rate:

Previousಪಾದಚಾರಿಗೆ ಬೈಕ್ ಡಿಕ್ಕಿ : ಹಟ್ಟಿಕೇರಿಯ ಗೆನು ಶೇಷು ನಾಯ್ಕ ಅವರಿಗೆ ತೀವ್ರ ಸ್ವರೂಪದ ಗಾಯ
Nextಕೊಂಕಣ ರೇಲ್ವೆಯ ಪ್ರಯಾಣಿಕರ ವಸ್ತುಗಳನ್ನು ಕಳ್ಳತನ ನಡೆಸುವ ಗ್ಯಾಂಗ್ ಅಂಕೋಲಾದಲ್ಲಿ ಸಕ್ರೀಯ

Related Posts

ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ನಡೆಸುತ್ತಿದ್ದವನ ಬಂಧನ

ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ನಡೆಸುತ್ತಿದ್ದವನ ಬಂಧನ

April 7, 2024

ಬಸ್ ಚಲಿಸುತ್ತಿರುವಾಗಲೆ ಕಳಚಿ ಬಿದ್ದ ಬಾಗಿಲು : ಅಂಕೋಲಾದಲ್ಲಿ ತಪ್ಪಿದ ಭಾರಿ ಅನಾಹುತ

ಬಸ್ ಚಲಿಸುತ್ತಿರುವಾಗಲೆ ಕಳಚಿ ಬಿದ್ದ ಬಾಗಿಲು : ಅಂಕೋಲಾದಲ್ಲಿ ತಪ್ಪಿದ ಭಾರಿ ಅನಾಹುತ

July 8, 2023

ಕಾನೂನು ರಕ್ಷಕರ ವೇಷದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆನ್‌ಲೈನ್ ವಂಚಕರಿ0ದ ಹಣ ವಸೂಲಿ ದಂಧೆ

ಕಾನೂನು ರಕ್ಷಕರ ವೇಷದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಆನ್‌ಲೈನ್ ವಂಚಕರಿ0ದ ಹಣ ವಸೂಲಿ ದಂಧೆ

September 22, 2024

ತಂಬಾಕು ಮಾರಾಟದ ಅಂಗಡಿಗಳ ಮೇಲೆ ನಿಯಂತ್ರಣ ತನಿಖಾ ದಳದಿಂದ ದಾಳಿ

ತಂಬಾಕು ಮಾರಾಟದ ಅಂಗಡಿಗಳ ಮೇಲೆ ನಿಯಂತ್ರಣ ತನಿಖಾ ದಳದಿಂದ ದಾಳಿ

August 27, 2023

Leave a reply Cancel reply

Your email address will not be published. Required fields are marked *

Vedio News

Loading...
  • ಬ್ಲಾಕಮೇಲ ಮಾಡಲಾಗುತ್ತಿದೆ ಎಂದು ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ವ್ಯಕ್ತಿ
  • ಅವರ್ಸಾ ಮೊಬೈಲ್ ಅಂಗಡಿಯಲ್ಲಿ ಕಳ್ಳತನ: ಸಿಸಿ ಕ್ಯಾಮರಾದಲ್ಲಿ ಸೆರೆ
  • ರಾಷ್ಟ್ರೀಯ ಹೆದ್ದಾರಿ 63 ರ ಮಾದನಗೇರಿ ಘಟ್ಟದಲ್ಲಿ ಗುಡ್ಡ ಕುಸಿತ
  • ಹಾರವಾಡದ ಬಳಿ ಕಾರಿಗೆ ಬೆಂಕಿ : ಒರ್ವ ಸಾವು
  • ರಾಮನಗರದಲ್ಲಿ ಯಮರೂಪಿ ಸಾರಿಗೆ ಚಾಲಕರು : ವಿದ್ಯಾರ್ಥಿಗಳು ಬಸ್ ಹತ್ತುತ್ತಿರುವಾಗಲೇ, ಬಸ್ ಚಲಾಯಿಸಿ ಮಕ್ಕಳ ಪ್ರಾಣದ ಮೇಲೆ ಚೆಲ್ಲಾಟವಾಡಿದ ಚಾಲಕ

Recent Posts

  • ಕ್ಯಾಷಿಯರ್  ಮೇಲೆ  ಅತ್ಯಾಚಾರಕ್ಕೆ ಯತ್ನ ;
    ಕ್ಯಾಷಿಯರ್ ಮೇಲೆ  ಅತ್ಯಾಚಾರಕ್ಕೆ ಯತ್ನ ;
  • ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
    ಅಂಕೋಲಾದಿ0ದ ಕರ್ನಾಟಕದ ಗಡಿ ಗೋವಾದಕ್ಕೆ ಜೂಜಾಟದ ವಲಸೆ
  • ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
    ಬಾಳೆಗುಳಿ ಪ್ಲೆöÊಓವರ್ ಬಳಿ ಗಾಂಜಾ ಸೇವಿಸಿದ್ದ ವ್ಯಕ್ತಿಯ ಬಂಧನ
  • ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
    ಗೊಬ್ಬರದ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು
  • ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ
    ಅಂಕೋಲಾದ ಬೆಳಂಬಾರದಲ್ಲಿ ಅಂದರ ಬಾಹರ ಆಟದಲ್ಲಿ ತೊಡಗಿದ್ದ 7 ಯುವಕರ ಮೇಲೆ ಪ್ರಕರಣ

ಸಂಪಾದಕರು
ರಾಘು ಕಾಕರಮಠ.
ಸುದ್ದಿ ಹಾಗೂ ಜಾಹೀರಾತಿಗಾಗಿ
9449999775

Designed by Elegant Themes | Powered by WordPress

  • Contact Us
  • Privacy Policy