ವರದಿ : ಅವಿನಾಶ ಆಗೇರ. ಅವರ್ಸಾ.
ಅಂಕೋಲಾ : ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸರ್ಮರಗೆ ಬಡಿದ ಪರಿಣಾಮ ಕಾರಿನಲ್ಲಿದ್ದ ಓರ್ವ ಮೃತಪಟ್ಟು, ನಾಲ್ವರಿಗೆ ಗಾಯವಾಗಿರುವ ಘಟನೆ ಹಾರವಾಡದ ರೇಲ್ವೆ ಬ್ರೀಜ್ ಬಳಿ ನಡೆದಿದೆ.
ಆಂದ್ರಪ್ರದೇಶದ ಅನಂತಪುರದ ನಿವಾಸಿ, ವಿದ್ಯಾರ್ಥಿ ರವಿತೇಜ್ ಉಪ್ಪಾರ (21) ಮೃತ ಪಟ್ಟವ.ಕಾರು ಚಾಲಕ ಪವನ ಬಿ, ಬಾಲಚಂದ್ರ ಕೈತಾವರ, ಮೋಹನ ಸಾಯಿ, ಬೊಯೆಜ್ ಕುಮಾರ ಗಾಯಗೊಂಡವರು.
ಆಗಿದ್ದೇನು :
ಆಂದ್ರಪ್ರದೇಶದ ಜಿಮಿಟಿ ಕಾಲೇಜಿನ 10 ವಿದ್ಯಾರ್ಥಿಗಳು ಎರಡು ಕಾರಿನಲ್ಲಿ ಪ್ರವಾಸಕ್ಕೆಂದು ಬಂದಿದ್ದರು. ಸೋಮವಾರ ಬೆಳಿಗ್ಗೆ ಗೋಕರ್ಣವನ್ನು ವೀಕ್ಷಿಸಿ, ಸಂಜೆ ಅಂಕೋಲಾದಿಂದ ಗೋವಾದತ್ತ ಹೊರಟಿದ್ದರು.
ಕಾರು ಅಂಕೋಲಾದ ಹಾರವಾಡದ ರೇಲ್ವೆ ಬ್ರೀಜ್ ಬಳಿ ಬರುತ್ತಿರುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರಗೆ ಡಿಕ್ಕಿ ಹೊಡೆದಿದೆ. ನಂತರ ಕಾರು ಪಲ್ಟಿಯಾಗಿ ವಿದ್ಯುತ್ ಟ್ರಾನ್ಸ್ರಫರಗೆ ಹೋಗಿ ಗುದ್ದಿದೆ. ಕಾರಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದೆ.
ಕಾರಿನಲ್ಲಿದ್ದ ರವಿತೇಜನಿಗೆ ವಿದ್ಯುತ್ ತಗುಲಿದೆ. ಗಾಯಗೊಂಡಿದ್ದ ರವಿತೇಜ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ.ಕಾರು ಬೆಂಕಿಗೆ ಆಹುತಿಯಾಗುತ್ತಲೆ ಕಾರಿನಲ್ಲಿದ್ದ ಇನ್ನು ನಾಲ್ವರು ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕಾಗಮಿಸಿ ಬೆಂಕಿ ನಿಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಸಿಪಿಐ ಸಂತೋಷ ಶೆಟ್ಟಿ, ಪಿಎಸೈ ಪ್ರವೀಣಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಿಎಎಸೈ ಮಹಾಂತೇಶ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.
ಮಾನವೀಯತೆ ಮೆರೆದ ಶಾಸಕಿ :
ಅಂಕೋಲಾದಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಗೆ ಶಾಸಕಿ ರೂಪಾಲಿ ನಾಯ್ಕ ಕಾರವಾರದಿಂದ ಅಂಕೋಲಾ ಕಡೆಗೆ ಆಗಮಿಸುತ್ತಿದ್ದರು.
ಈ ವೇಳೆ ಅಘಘಾತವಾಗಿರವದನ್ನ ಕಂಡ ಶಾಸಕಿ ರೂಪಾಲಿ ನಾಯ್ಕ ಅವರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.

